11:41 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ‘ವಾಯ್ಸ್ ಆಫ್ ಆರಾಧನಾ’: ಜನವರಿ ತಿಂಗಳ ಟಾಪರ್ ಆಗಿ ವಾಗ್ಮಿ ಕೆ. ಪುತ್ತೂರು ಹಾಗೂ ರೊಶ್ನಿ ಶೆಟ್ಟಿ ಆಯ್ಕೆ

06/02/2024, 10:53

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ವಾಗ್ಮಿ ಕೆ. ಪುತ್ತೂರು ಹಾಗೂ ರೊಶ್ನಿ ಶೆಟ್ಟಿ ಅವರು ಆಯ್ಕೆಗೊಂಡಿದ್ದಾರೆ.


ಪುತ್ತೂರು ತಾಲೂಕಿನ ಕೆಮ್ಮಾಯಿ ಬೀರ್ನಹಿತ್ಲ್ ಎಂಬಲ್ಲಿ ಜನಿಸಿದ ವಾಗ್ಮಿ ಕೆ. ಪುತ್ತೂರು, ಕೇಶವ ಹಾಗೂ ಮಲ್ಲಿಕಾ ಅವರ ಪುತ್ರಿ. ವಾಗ್ಮಿ 10 ತಿಂಗಳ ಮಗುವಾಗಿದ್ದಾಗ ಆನ್‌ಲೈನ್ ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ 10-12 ರವರೆಗೆ ಬಹುಮಾನಗಳಿಸಿದ್ದಾಳೆ. ಡ್ಯಾನ್ಸ್ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾಳೆ. ಇದುವರೆಗೆ ಭಾಗವಹಿಸಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸುಮಾರು 30ಕ್ಕಿಂತ ಹೆಚ್ಚು ಬಹುಮಾನ ಪಡೆದಿದ್ದಾಳೆ. ಚಾನೆಲ್ 9 ನಡೆಸಿದ ಕೃಷ್ಣ ವೇಷ ವಿಡಿಯೋ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಹಾಗೂ ವಿಜಯ ಕರ್ನಾಟಕದವರು ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾಳೆ. ಇದೀಗ 4 ವರ್ಷದ ಈಕೆ ಡ್ಯಾನ್ಸ್, ಹಾಡುಗಾರಿಕೆ ಹಾಗೂ ಅಂಗನವಾಡಿ ಚಟುವಟಿಕೆಯಲ್ಲಿ ತುಂಬಾನೆ ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ.
ಇನ್ನೋರ್ವ ಬಾಲಪ್ರತಿಭೆ ರೊಶ್ನಿ ಶೆಟ್ಟಿ. ಈಕೆ ಅಮಿತ್ ಕುಮಾರ್ ಹಾಗೂ ಪ್ರತಿಭಾ ಶೆಟ್ಟಿ ಅವರ ಪುತ್ರಿ. ರೋಶ್ನಿ ಮಂಗಳೂರಿನ ಸೈಂಟ್ ತೆರೆಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಹಲವಾರು ಸಾರ್ವ ಜನಿಕ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಹಲವಾರು ಬಹುಮಾನ ಪಡೆದು ಕೊಂಡಿದ್ದಾಳೆ. ಝೀ ಕನ್ನಡ ಸರಿಗಮಪದಲ್ಲಿ ಭಾಗವಹಿಸಿದ್ದಾಳೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕೊರೊಕೆ ಹಾಡು ಕಲಿಯುತ್ತಿದ್ದಾಳೆ. ವಾಯ್ಸ್ ಆಪ್ ಆರಾಧನಾ ಪೇಜ್ ನಲ್ಲಿ ಸಕ್ರೀಯವಾಗಿದ್ದಾಳೆ. ಹಾಡು, ನೃತ್ಯ, ಡ್ರಾಯಿಂಗ್ ಈಕೆಯ ಪ್ರಮುಖ ಹವ್ಯಾಸ.

ಇತ್ತೀಚಿನ ಸುದ್ದಿ

ಜಾಹೀರಾತು