4:58 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಕೂಡ್ಲಿಗಿ ಪಟ್ಟಣ ಪಂಚಾಯಿತಿ: ಬ್ರೋಕರ್ ಹಾವಳಿ ತಪ್ಪಿಸಲು ಖಾತಾ ನಕಲು ವಿತರಣಾ ಅಭಿಯಾನ

09/11/2023, 10:40

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿ, ಹಣ ಮಾಡುವ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶದಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿ ವತಿಯಿಂದ ಇಂದು ಮುಖ್ಯಾಧಿಕಾರಿಗಳು , ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ವಾರ್ಡನ ಕರವಸೂಲಿಗಾರರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಖಾತಾ ನಕಲು ವಿತರಣಾ ಅಭಿಯಾನ ಪ್ರಾರಂಭಿಸಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ, ಖಾತಾ ನಕಲು (ಫಾರ್ಮ್ -3) ಪಡೆಯಲು ಬಂದ ಸಾರ್ವಜನಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅದರ ನಿಯಮ ಪಾಲನೆ ಮಾಡಿ ಕೊಡಲು 7 ದಿನದ ಸಮಯ ಇರುತ್ತದೆ, ತೆರಿಗೆ ಕಟ್ಟಿದ ರಸೀದಿ ಪ್ರತಿಗಳು ಸೇರಿದಂತೆ ಹಕ್ಕು ನಿರೂಪಿಸುವ ದಾಖಲಾತಿಗಳು ಸರಿ ಇದ್ದಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಖಾತಾ ನಕಲು ನೀಡಲಾಗುವುದು. ಸಾರ್ವಜನಿಕರು ಖಾತಾ ನಕಲು ಪಡೆಯಲು ನೇರವಾಗಿ ಬಂದು ಅಧಿಕಾರಿಗಳಲ್ಲಿ ಇದರ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಯಾರೋ ಮಧ್ಯವರ್ತಿಗಳ ನಡುವೆ ಹೆಚ್ಚಿನ ಹಣ ಕೊಟ್ಟು ಅಧಿಕಾರಿಗಳ ಹೆಸರು ಸಹ ಈ ವಿಚಾರದಲ್ಲಿ ದುರ್ಬಳಕೆ ಮಾಡಿ ಹಣ ವಸೂಲಿ ಮಾಡುವುದನ್ನು ಅರಿತು ವಿಜಯನಗರ ಜಿಲ್ಲಾಧಿಕಾರಿಯವರು ಪಪಂ ಅಧಿಕಾರಿಗಳ ಸಭೆ ಕರೆದು ಅದರಲ್ಲಿ ಖಾತಾ ನಕಲು ವಿತರಣೆ ಅಭಿಯಾನ ಮಾಡಿ ಮನೆಮನೆಗೆ ತೆರಳಿ ಫಾರ್ಮ್ 3 ವಿತರಣೆ ಮಾಡುವಂತೆ ಆದೇಶಿಸಿದಂತೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಬಡವರ ಮನೆ ಸೇರುವಲ್ಲಿ ಈ ಅಭಿಯಾನದಿಂದ ಉತ್ತಮ ಕಾರ್ಯವಾಗಿದೆ ಎಂದರು.
ಅಭಿಯಾನದಿಂದಾಗುವ ಅನುಕೂಲಗಳು : ಈ ಅಭಿಯಾನದಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ, ಹಣ ಪಾವತಿ ಮಾಡಿ ತೆರಿಗೆ ಕಟ್ಟಿದ ರಸೀದಿ ಪ್ರತಿಗಳಿದ್ದಲ್ಲಿ ಹಾಗೂ ಹಕ್ಕು ನಿರೂಪಿಸುವ ದಾಖಲಾತಿಗಳಿದ್ದಲ್ಲಿ ಬಡವರ ಮನೆಗೆ ನೇರವಾಗಿ ಖಾತಾ ನಕಲು ಪ್ರತಿ ತಲುಪುತ್ತದೆ, ಹಣ ಮಾಡುವ ಉದ್ದೇಶದಲ್ಲಿ ಮದ್ಯವರ್ತಿಗಳು ಅಧಿಕಾರಿಗಳ ಹೆಸರು ದುರ್ಬಳಕೆ ಮಾಡುವುದು ದೂರವಾಗುತ್ತದೆ, ಕಚೇರಿ ಅಲೆದಾಟ ತಪ್ಪುತ್ತದೆ ಅಲ್ಲದೆ ಇತರೆ ಅನುಕೂಲತೆಗಳು ಸಾರ್ವಜನಿಕರಿಗೆ ಈ ಅಭಿಯಾನದಿಂದ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳು ಆದೇಶಿಸಿದಂತೆ ಈ ಅಭಿಯಾನವನ್ನು ಇಂದಿನಿಂದಲೇ ಪ್ರಾರಂಭಮಾಡಿರುವುದಾಗಿ ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು , ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ವಾರ್ಡನ ಕರವಸೂಲಿಗಾರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು