3:13 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ತುಂಬಾ ಸೆಂಟಿಮೆಂಟಲ್ ಕಣ್ರೀ ನಮ್ಮ ಸಿಎಂ: ಮುದ್ದಿನ ನಾಯಿ ಸತ್ತಾಗ ಕಣ್ಣೀರಿಟ್ಟ ಬೊಮ್ಮಾಯಿ !

28/07/2021, 21:07

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಕಣ್ಣೀರಿಟ್ಟ ಘಟನೆ ನಡೆದಿತ್ತು. ಸಿಎಂ ಆಗುವ ಕೇವಲ ಒಂದು ವಾರದ ಮುನ್ನ ಬೊಮ್ಮಾಯಿ ಅವರು ದುಃಖ ತಾಳಲಾಗದೆ ಕರ್ಚೀಫನ್ನು ಕಣ್ಣಿಗೆ ಒತ್ತಿಕೊಂಡಿದ್ದರು. ತನ್ನ ಕುಟುಂಬದ ಸದಸ್ಯರ ಎದುರೇ ಬೊಮ್ಮಾಯಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದರು.


ಬೊಮ್ಮಾಯಿ ಅವರ ಬೆಂಗಳೂರಿನ ನಿವಾಸದಲ್ಲೇ ಈ ಘಟನೆ ನಡೆದಿತ್ತು. ಇವೆಲ್ಲ ನಡೆದಾಗ ಅವರು ಗೃಹ ಸಚಿವರಾಗಿದ್ದರು. ಅವರು ಸಾಕಿ ಸಲಹಿದ ಮುದ್ದಿನ ನಾಯಿ ಮೃತಪಟ್ಟಾಗ ಅವರು ದುಃಖ ತಾಳಲಾಗದೆ ಕಣ್ಣೀರು ಹಾಕಿದ್ದರು. ಈ ಕುರಿತು ವೀಡಿಯೊವೊಂದು ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ವೈರಲ್ ಆಗಿದೆ. ಮುದ್ದಿನ ನಾಯಿಗೆ ಅಂತಿಮ ವಿದಾಯ ಹೇಳುವಾಗ ಬೊಮ್ಮಾಯಿ ಜತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ವಾನದ ಮೃತದೇಹದ ಮೇಲೆ ಹೂವಿನ ಹಾರ ಹಾಕಲಾಗಿತ್ತು.

ಬೊಮ್ಮಾಯಿ ಅವರು ನೆಲದಲ್ಲಿ ಮಂಡಿಯೂರಿ ಬಾಗಿ ಶ್ವಾನಕ್ಕೆ ಅಂತಿಮ ಮುತ್ತು ನೀಡಿದ್ದರು. ನಂತರ ದುಃಖ ತಾಳಲಾಗದೆ ಕಂಗಳನ್ನು ಕರ್ಚೀಫ್ ನಲ್ಲಿ ಒರಸಿಕೊಂಡರು. ಮುಖ್ಯಮಂತ್ರಿಯವರ ಪ್ರಾಣಿ ಪ್ರೇಮಕ್ಕೆ ಹಾಟ್ಸಾಪ್. 

ಇತ್ತೀಚಿನ ಸುದ್ದಿ

ಜಾಹೀರಾತು