5:25 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಉಂದು ನಾಟಕ..ಬಲೆ ಬುಲಿಪಾಲೆ ಸೀಸನ್ 3 ಉದ್ಘಾಟನೆ: ಸಾಧಕಿ ಮಹಿಳೆಯರಿಂದ ಚಾಲನೆ; ಪ್ರಥಮ ಬಹುಮಾನ 2 ಲಕ್ಷ

20/06/2023, 18:46

ಮಂಗಳೂರು(reporterkarnataka.com): ಕರಾವಳಿ ಕರ್ನಾಟಕದ ನಾಡಿಮಿಡಿತ ನಮ್ಮ ಟಿವಿಯ ಜನಪ್ರಿಯ ಕಾರ್ಯಕ್ರಮ ಉಂದು ನಾಟಕ…ಬಲೆ ಬುಲಿಪಾಲೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಸಾಧಕ ಮಹಿಳೆಯರಾದ ಹರೇಕಳದ ನಫೀಸಾ ಹಾಗೂ ಅವರ ಮಗಳು ನಜ್ರೀನ ಇತ್ತೀಚೆಗೆ ಉದ್ಘಾಟಿಸಿದರು.


ಉಂದು ನಾಟಕ ಬಲೆ ಬುಲೆಪಾಲೆಯ 2 ಆವೃತ್ತಿಗಳು ಈಗಾಗಲೇ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಹಲವಾರು ಕಲಾವಿದರು ಮುನ್ನಡೆಗೆ ಬರುವಂತೆ ಮಾಡಿದೆ. ಮಾತ್ರವಲ್ಲದೆ ಈ ಕಾರ್ಯಕ್ರಮದ ಮೂಲಕ ಹಲವಾರು ಕಲಾವಿದರಿಗೆ ಸಿನಿಮಾಗಳಲ್ಲಿ ಅವಕಾಶಗಳು ದೊರಕಿವೆ. ಇತ್ತೀಚೆಗೆ ಇದರ ಮೂರನೇ ಆವೃತ್ತಿಯ ಚಿತ್ರೀಕರಣ ಆರಂಭಗೊಂಡಿದ್ದು, ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆಗೊಂಡಿತು.
ಬಡತನದ ಬೇಗೆಯಲ್ಲಿ ಬೆಂದರೂ ಸಾಧಿಸುವ ಛಲ ದೊಂದಿಗೆ ಹೈನುಗಾರಿಕೆಯನ್ನು ಆರಂಭಿಸಿ, ಇದೀಗ ಸುಮಾರು 75 ಗೋವುಗಳನ್ನು ಸ್ವತಹ ತಾವೇ ಸಾಕುವ ಮೂಲಕ ಯಶಸ್ಸನ್ನು ಕಂಡಿರುವ, ಮಾತ್ರವಲ್ಲದೆ ಹೈನುಗಾರಿಕೆಯಿಂದ ಬರುವ ಲಾಭಾಂಶದ ಬಹುಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿ ಮಾದರಿಯಾಗಿರುವ ಹರೇಕಳದ ನಫೀಸಾ ಮತ್ತು ಆಕೆಯ ಮಗಳು ನಜ್ರೀನಾ ಉಂದು ನಾಟಕ ಬಲಿಬುಲಿಪಾಲೆ ಮೂರನೇ ಆವೃತ್ತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಿತ್ತಲೆ ಹಣ್ಣು ಮಾರಿ ಬಂದ ದುಡ್ಡಿನಲ್ಲಿ ಶಾಲೆ ನಿರ್ಮಿಸಿ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿಕೊಟ್ಟು ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಹಾಜಬ್ಬರಿಂದಾಗಿ ರಾಜ್ಯಾದ್ಯಂತ ಸುದ್ದಿಯಾಗಿರುವ
ಹರೇಕಳ ಎಂಬ ಊರು ಇದೀಗ ಮತ್ತೊಮ್ಮೆ ಈ ಸಾಧಕ ಮಹಿಳೆಯರಿಂದ ಸುದ್ದಿಯಾಗುತ್ತಿದೆ. ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯೆಗೆ ಸಹಾಯ, ಬಡ ರೋಗಿಗಳ ಚಿಕಿತ್ಸೆಗೆ ಹಣ, ಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಗಳ ಮದುವೆಗೆ ಆರ್ಥಿಕ ನೆರವು, ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ನಫೀಸಾ ಹಾಗೂ ಅವರ ಮಗಳು ನಜ್ರೀನಾ ಇತರರಿಗೆ ಮಾದರಿಯಾಗಿದ್ದಾರೆ. ಅದರಲ್ಲೂ ನಜ್ರೀನಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದರು ಹಸು ಕರುಗಳ ಮೇಲೆ ವಿಶೇಷ ಅಕ್ಕರೆಯನ್ನು ಹೊಂದಿದ್ದು ,ಅವುಗಳ ಆರೈಕೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು ವಿಶೇಷ.ಉಂದು ನಾಟಕ ಬಲೆ ಬಲಿಪಾಲೆಯ ತೀರ್ಪುಗಾರರಾಗಿರುವ ತುಳುರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ದಿಗ್ಗಜ ನಿರ್ದೇಶಕರಾಗಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಉದ್ಘಾಟನಾ ಸಮಾರಂಭದಲ್ಲಿ ತಾರಾ ಮೆರುಗು ನೀಡಿದರು.
ಉಂದು ನಾಟಕ ಬಲೆ ಬುಲೆಪಾಲೆಯ ಮೂರನೇ ಆವೃತ್ತಿಯ ಸ್ಪರ್ಧೆಯ ಪ್ರಥಮ ಸ್ಥಾನಿಗೆ ರೂಪಾಯಿ ಎರಡು ಲಕ್ಷ ಹಾಗೂ ದ್ವಿತೀಯ ಸ್ಥಾನಿಗೆ ರುಪಾಯಿ ಒಂದು ಲಕ್ಷ ನಗದು ಬಹುಮಾನ ದೊರೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು