3:33 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರಿಂದ ಏಟು ತಿಂದಿದ್ದು ಕಾಂಗ್ರೆಸ್ ಅಭಿಮಾನಿಯಲ್ಲ, ಜನತಾ ದಳದ ಕಾರ್ಯಕರ್ತ !!: ಏನು ವಿಚಿತ್ರ ನೋಡಿ! 

12/07/2021, 11:05

ಮಂಡ್ಯ(reporterkarnataka news): ಅವರ ಹೆಸರು ಉಮೇಶ್ ಮದ್ದೂರು. ಜೆಡಿಎಸ್ ಕಾರ್ಯಕರ್ತರು. ತೊರೆಬೊಮ್ಮನ ಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಹೌದು.

ಉಮೇಶ್ ಬಗ್ಗೆ ಯಾಕಿಷ್ಟು ವಿವರ ಅಂತ ಅಂದುಕೊಂಡ್ರಾ…? ಕಾರಣ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈಯಿಂದ ಏಟು ತಿಂದವರು ಇದೇ ಉಮೇಶ್ ಮದ್ದೂರು.

ಹಾಗಾದರೆ ಜೆಡಿಎಸ್ ಕಾರ್ಯಕರ್ತರಾದ ಉಮೇಶ್ ಅವರು ಕಾಂಗ್ರೆಸ್ ಅಧ್ಯಕ್ಷರ ಜತೆ ಆ ಸಣ್ಣ ಮೆರವಣಿಗೆಯಲ್ಲಿ ಯಾಕೆ ಸೇರ್ಕೊಂಡರು? ಯಾಕೆ ಹೊಡೆಸಿಕೊಂಡ್ರು? ಎನ್ನುವ ಕುತೂಹಲ ನಿಮಗಿದೆಯೇ? ಹಾಗಾದರೆ ಉಮೇಶ್ ಮದ್ದೂರು ಅವರ ಬಾಯಿಯಲ್ಲೇ ಏನಾಯಿತು ಅನ್ನುವುದನ್ನು

ಕೇಳೋಣ ಬನ್ನಿ….

ನಾನು ನಮ್ಮ ಒಕ್ಕಲಿಗರ ನಾಯಕ ಬರುತ್ತಿದ್ದಾರೆ ಎಂಬ ಅಭಿಮಾನದಿಂದ ಹೋಗಿದ್ದೆ. ಫೋಟೋ ತೆಗೆದುಕೊಳ್ಳಬೇಕೆಂದು ಹತ್ತಿರ ಹೋದೆ. ಹೆಗಲ ಮೇಲೆ ಕೈಹಾಕುವಷ್ಟು ಸಣ್ಣತನ ನನ್ನಲ್ಲಿ ಇರಲಿಲ್ಲ. ನಾನೊಬ್ಬ ಪ್ರಜ್ಞಾವಂತ ವ್ಯಕ್ತಿ ಎನ್ನುತ್ತಾರೆ ಉಮೇಶ್ ಮದ್ದೂರು.

ಸಾಕಷ್ಟು ನೊಂದುಕೊಂಡಿರುವ ಉಮೇಶ್ ಮತ್ತೆ ಮಾತು ಮುಂದುವರಿಸುತ್ತಾರೆ. ಶಿವಕುಮಾರ್ ಅವರು ನನಗೆ ಸಂಬಂಧಿಕರೂ ಆಗಬೇಕು. ಬೇರೆ ಯಾರಾದರೂ ನನ್ನ ಮೇಲೆ ಕೈ ಮಾಡುತ್ತಿದ್ದರೆ ನಾನು ಅಲ್ಲೇ ಪ್ರತಿಭಟನೆ ಮಾಡುತ್ತಿದ್ದೆ. ಅವರ ಸ್ಥಾನಮಾನಕ್ಕೆ ಗೌರವ ಕೊಟ್ಟು ಸುಮ್ಮನಾಗಿದ್ದೇನೆ. ಶಿವಕುಮಾರ್ ಅವರು ಇನ್ನಾದರೂ ಇಂತಹ ವರ್ತನೆ ಬಿಡಬೇಕು ಎಂದು ಬುದ್ದಿವಾದದ ಮಾತನ್ನು ಬಹಳ ನಯವಾಗಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು