11:36 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಮಾಸ್ಕೋದಿಂದ ಪುಟ್ಟ ಮಗಳಿಗೆ ಒಂದು ಸೂಟ್ ಕೇಸ್ ಚಾಕಲೇಟ್ ತಂದಿದ್ದ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ !

02/07/2021, 20:22

ಬೆಂಗಳೂರು(reporterkarnataka news): ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್​​​​ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ಅವರು ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲಸ ನಿಮಿತ್ತ ಈ ಹಿಂದೆ ರಷ್ಯಾಕ್ಕೆ ಹೋಗಿದ್ದಾಗ ಒಂದು ಸೂಟ್ ಕೇಸ್ ತುಂಬಾ ಚಾಕಲೇಟ್ ತಂದಿರುವುದನ್ನು ಅವರ ಪುತ್ರಿ ಮೇಘನಾ ಸುಧೀಂದ್ರ ನೆನಪಿಸಿಕೊಳ್ಳುತ್ತಾರೆ.

ಫಾದರ್ಸ್ ಡೇ ಬಗ್ಗೆ ಮೇಘನಾ ಅವರು ಬರೆದ ಲೇಖನದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಮೇಘನಾ ಅವರು ಆಗ ಸಣ್ಣವರಿದ್ದರಂತೆ. ಸ್ಕೂಲಿಗೆ ಹೋಗುವ ಪ್ರಾಯ. ಆಗ ತಂದೆ ಸುಧೀಂದ್ರ ಹಾಲ್ದೊಡ್ಡೇರಿ ಕೆಲಸದ ಮೇಲೆ ರಷ್ಯಾದ ಮಾಸ್ಕೋಕ್ಕೆ ಹೋಗಿದ್ದರಂತೆ. ಮಗಳು ದಿನಾ ಕಾಲ್ ಮಾಡಿ ‘ಅಪ್ಪಾ… ಯಾವಾಗ ಬರ್ತೀರಿ’ ಅಂತ ವಿಚಾರಿಸುತ್ತಿದ್ದರಂತೆ. ಒಂದು ವಾರ ಬಿಟ್ಟು, ಎರಡು ವಾರ ಬಿಟ್ಟು ಎಂದು ಸಾಬೂಬು ಹೇಳುತ್ತಿದ್ದ ತಂದೆ ಸುಧೀಂದ್ರ ಅವರು ‘ಮಗಳೇ… ನಿನಗೆ ಏನು ತರಬೇಕು’ ಎಂದು ಕೇಳಿದ್ರಂತೆ. ತಕ್ಷಣ ಮಗಳು ಹೇಳಿದ್ದು ಒಂದು ಸೂಟ್ ಕೇಸ್ ಫುಲ್ ಚಾಕಲೇಟ್ ಬೇಕಪ್ಪ ಎಂದು.

ಮಗಳ ಕೋರಿಕೆಯಂತೆ ಸುಧೀಂದ್ರ ಒಂದು ಸೂಟ್ ಕೇಸ್ ಪೂರ್ತಿ ಚಾಕಲೇಟ್ ತಂದು ಮಗಳಿಗೆ ಶಾಕ್ ಕೊಟ್ಟಿದ್ದರಂತೆ. ಅದು ಕೂಡ ಬರೋಬ್ಬರಿ 35 ಕೆಜಿ ಚಾಕಲೇಟ್.

ಮಗಳು ಸುಮ್ಮನೇ ಹೇಳುವ ಮಾತನ್ನು ನಿಜ ಮಾಡುವವರೇ ಅಪ್ಪ ಎಂದು ಒಕ್ಕಣೆ ಬರೆಯಲು ಪುತ್ರಿ ಮೇಘನಾ ಮರೆಯಲಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು