5:52 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ರೋಟರಿ ಕ್ಲಬ್ ಮಂಗಳೂರು ಪೂರ್ವ: ‘ಬಲೇ ಗೊಬ್ಬುಗ -2022’ ಕ್ರೀಡಾಕೂಟ; ವಾಟರ್ ಪ್ಯೂರಿಫೈರ್ ಕೊಡುಗೆ

20/10/2022, 17:30

ಮಂಗಳೂರು(reporterkarnataka.com): ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಆಶ್ರಯದಲ್ಲಿ ಆರ್.ಐ ಜಿಲ್ಲೆ ೩೧೮೧ ವಲಯ -೨ ಮತ್ತು ೩ರ “ಬಲೇ ಗೊಬ್ಬುಗ -೨೦೨೨”, ಕ್ರೀಡಾಕೂಟ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.

ಪಿಡಿಜಿ ಎಂ ರಂಗನಾಥ್ ಭಟ್ ಕ್ರೀಡಾಕೂಟ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಆರ್ ಶಿವಪ್ರಸಾದ್ ಆಳ್ವ (ಕೋಟಕ್ ಮಹೀಂದ್ರ ಇದರ ಚಾನಲ್ ಪಾರ್ಟ್ನರ್) ಶುಭ ಕೋರಿದರು.
ಜೋನ್-೨ರ ಎ.ಜಿ ಗಳಾದ ರಾಜಗೋಪಾಲ್ ರೈ ಹಾಗೂ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಗಳಾ ಕ್ರೀಡಾಂಗಣಕ್ಕೆ ವಾಟರ್ ಪ್ಯೂರಿಫೈರನ್ನು ದೇಣಿಗೆಯಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಪೂರ್ವದ ವತಿಯಿಂದ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಜಿ ಎನ್ ವಿಕ್ರಮದತ್ತ ಹಾಗೂ ಪಿ.ಎ.ಜಿ. ಡಾ. ಶಿವಪ್ರಸಾದ್ ಕೆ. ಹಾಗೂ ವಲಯ ೨ಮತ್ತು ೩ರ ಎಸಿಗಳಾದ ಶಶಿಧರ್ ಕೆ. ಮತ್ತು ಸೂರಜ್ ಹೆಬ್ಬಾರ್ ನೆರಿಯಾ ಉಪಸ್ಥಿತರಿದ್ದರು.

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾದ ಅಂ ಹರೀಶ್ ಶೆಟ್ಟಿ ಸ್ವಾಗತಿಸಿದರು. ಕ್ರೀಡೆಯ ಉದ್ದೇಶವನ್ನು ಇವೆಂಟ್ ಚೇರ್‌ಮೆನ್ ರೋ. ಆನಂದ ಶೆಟ್ಟಿ ತಿಳಿಸಿದರು. ಪ್ರಮಾಣ ವಚನವನ್ನು ಇವೆಂಟ್ ಕಾರ್ಯದರ್ಶಿ ದೀರಜ್ ಶೆಟ್ಟಿ ಯವರು ಭೋದಿಸಿದರು. ಅಧ್ಯಕ್ಷ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಝೋ-೨ರ ತಂಡ ಪ್ರಶಸ್ತಿಯನ್ನು ಆರ್. ಸಿ ಮಂಗಳೂರು ಪೂರ್ವ ಪಡೆದಿದ್ದು ರನ್ನರ್ ಪ್ರಶಸ್ತಿಯನ್ನು ಆರ್.ಸಿ ಬೈಕಂಪಾಡಿ ತಂಡವು ಗಳಿಸಿರುತ್ತದೆ.

ಝೋನ್-೩ರ ತಂಡ ಪ್ರಶಸ್ತಿಯನ್ನು ಆರ್. ಸಿ ಸೌತ್ ಮಂಗಳೂರು ತಂಡವು ರನ್ನರ್ ಆಗಿ ಆರ್. ಸಿ ದೇರಳಕಟ್ಟೆ ತಂಡವು ಗಳಿಸಿಕೊಂಡಿತು.
ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಡ್‌ನೊAದಿಗೆ ಪಥ ಸಂಚಲನಕ್ಕೆ ವಿಶೇಷ ಮೆರುಗನ್ನು ನೀಡಿದರು

ಇತ್ತೀಚಿನ ಸುದ್ದಿ

ಜಾಹೀರಾತು