9:14 PM Friday7 - November 2025
ಬ್ರೇಕಿಂಗ್ ನ್ಯೂಸ್
ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:…

ಇತ್ತೀಚಿನ ಸುದ್ದಿ

ಕಾಫಿ ಪಿಯೋ ಬಿಸ್ಕೆಟ್ ಕಾವೋ: ಬೆಂಗಳೂರಿನಲ್ಲಿ ಕಾಫಿ ಪ್ರಿಯರಿಗಾಗಿ ‘ಕಾಲ್ ಕಾಫಿ ವಾಲಾ’

09/10/2022, 23:58

ಬೆಂಗಳೂರು(reporterkarnataka.com): ಕಾಫಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಎಷ್ಟೇ ಚಾಹ ಕುಡಿಯುವವರು ಆದರೂ ತಲೆ ನೋವಾದಾಗ, ಬೇಜಾರಾದಾಗ, ಮಳೆ ಬಂದಾಗ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಕಾಫಿಯನ್ನು ಸವಿಯುತ್ತೇವೆ. ಇದಕ್ಕಾಗಿಯೇ
ಕಾಫಿ ಪ್ರಿಯರಿಗಾಗಿ ಕುಮಾರಸ್ವಾಮಿ ಲೇ ಔಟ್ ನಲ್ಲಿ ‘ಕಾಲ್ ಕಾಫಿ ವಾಲಾ’ ಕಾಫಿ ಪಿಯೋ ಬಿಸ್ಕೆಟ್ ಕಾವೋ ಎಂಬ ಟ್ಯಾಗ್ ಲೈನ್ ನೊಂದಿಗೆ ಅನೇಕ ಬಗೆಯ ಫ್ಲೇವರ್ಡ್ ಕಾಫಿ ಡಿಕಾಕ್ಷನ್ ಅನ್ನು ಬಿಡುಗಡೆ ಮಾಡಿದೆ.

ಈ ಸಂದರ್ಭದಲ್ಲಿ ಕಾಲ್ ಕಾಫಿ ವಾಲಾದ ವ್ಯವಸ್ಥಾಪಕ ನಿರ್ದೇಶಕ ಅರ್ಪಿತಾ ಪಿ.ಎ., ಎಸ್ ಬಿ ಐ ರಿಜನಲ್ ಮ್ಯಾನೇಜರ್ ಪ್ರದೀಪ್ ಆರ್., ಎಸ್ ಬಿ ಐ ಮ್ಯಾನೇಜರ್ ರುಪ್ನ ಚಕ್ರವರ್ತಿ ಮತ್ತೀತರ ಗಣ್ಯರು ಉಪಸ್ಥಿತರಿದ್ದರು.
ಕಾಫಿ ಪಿಯೋ ಬಿಸ್ಕೆಟ್ ಕಾವೋ ಎಂಬ ಟ್ಯಾಗ್ ಲೈನ್ ನೊಂದಿಗೆ ಫ್ಲೇವರ್ಡ್ ಡಿಕಾಕ್ಷನ್ ಗಳನ್ನು ಬಿಡುಗಡೆ ಮಾಡಿದ ಈ ಕಾಲ್ ಕಾಫಿ ವಾಲಾ ವಿಶೇಷತೆ ಏನೆಂದರೆ ಇಲ್ಲಿ ಕಾಫಿಯನ್ನು ಯಾವುದೇ ರೀತಿಯ ಪ್ಲಾಸ್ಟಿಕ್, ಪೇಪರ್ ಅಥವಾ ಸ್ಟಿಲ್ ಕಪ್ ನಲ್ಲಿ ಕೊಡುವುದಿಲ್ಲ. ಬದಲಿಗೆ ವೆಪರ್ಸ್ / ಬಿಸ್ಕೆಟ್ ರೀತಿಯ ಕಪ್ ನಲ್ಲಿ ಕಾಫಿಯನ್ನು ಕೊಡುತ್ತಾರೆ. ಕಾಫಿ ಕುಡಿದು ನಂತರ ಬಿಸ್ಕೆಟ್ ಅನ್ನು ತಿನ್ನಬಹುದು. ಹಾಗೇ ಈ ಬಿಸ್ಕೆಟ್ ಕಪ್ ನಲ್ಲಿ ಹತ್ತು ನಿಮಿಷಗಳ ಕಾಲ ಕಾಫಿ ತಣ್ಣಗಾಗುವುದಿಲ್ಲ ಹಾಗಾಗಿ ಬಿಸಿ ಬಿಸಿ ಕಾಫಿಯನ್ನು ಕುಡಿಯುತ್ತ ಕೊನೆಗೆ ಬಿಸ್ಕೆಟ್ ಸವಿಯಬಹುದು.
ಇಲ್ಲಿ ಕ್ಯಾರಮಲ್, ವೆನಿಲ್ಲಾ, ಚಾಕೊಲೆಟ್, ಹ್ಯಾಸಲ್ ನೆಟ್, ವಾಟರ್ ಮೆಲನ್, ಪ್ಲೇನ್ ಫ್ಲೇವರ್ ಗಳು ಲಭ್ಯವಿದ್ದು ಇದು ಕಾಫಿ ಪ್ರಿಯರ ನಾಲಿಗೆಯ ರುಚಿಯನ್ನು ತಣಿಸಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು