3:20 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ಅರ್ಧಂಬರ್ಧ ಕಾಮಗಾರಿ!: ಜನರಿಗೆ ತಪ್ಪದ ಕಿರಿಕಿರಿ!!: ಅಭಿವೃದ್ಧಿ ಹೆಸರಿನಲ್ಲಿ ನಿತ್ಯ ನರಕ!

25/09/2022, 19:13

ಅನುಷ್ ಪಂಡಿತ್ ಮಂಗಳೂರು /ಗಣೇಶ್ ಅದ್ಯಪಾಡಿ

info.reporterkarnataka@gmail.com

ಸ್ಮಾರ್ಟ್ ಸಿಟಿ ಆಗುವ ಕನಸು ಕಾಣುತ್ತಿರುವ ಮಂಗಳೂರು ಮಹಾನಗರ ಇನ್ನೂ ಹಲವಾರು ಮೂಲ ಸೌಕರ್ಯಗಳ ಸಮರ್ಪಕ ನಿರ್ವಹಣೆಯಲ್ಲಿ ಹಿಂದೆ ಉಳಿದಿದೆ ಎಂದರೆ ತಪ್ಪಾಗಲಾರದು.

ಹೌದು, ನಗರದ ಮುಖ್ಯ ಸಮಸ್ಯೆಯಾದ ಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.


ವೇದವ್ಯಾಸ ಕಾಮತರು ಶಾಸಕರಾದ ಮೇಲೆ ಹಲವಾರು ಅನುದಾನಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಿಕ್ಕಿದರೂ ಕೂಡ ಕಾಮಗಾರಿಗಳು ಸಮಯಕ್ಕೆ ಮುಕ್ತಾಯಗೊಳ್ಳದೆ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ನಗರದ ಹಲವು ಭಾಗಗಳಲ್ಲಿ ಒಳಚರಂಡಿ ದುರಸ್ತಿಗಾಗಿ ರಸ್ತೆಯನ್ನು ಅಗೆದು ಹಾಗೆಯೆ ಬಿಡಲಾಗಿದೆ. ಜ್ಯೋತಿ ಬಲ್ಮಠದ ಸುತ್ತಾ ಈ ರೀತಿಯ ಸಮಸ್ಯೆಗಳನ್ನು ಕಾಣಬಹುದು.

ಅದೇ ರೀತಿ ಹಲವು ಕಡೆ ಫುಟ್ ಪಾತ್ ಚರಂಡಿ ಸ್ಲ್ಯಾಬ್‌ಗಳು ಕಳಚಿ ಹೋಗಿದ್ದರೂ ಇನ್ನೂ ರಿಪೇರಿ ನಡೆದಿಲ್ಲ. ಕಲೆಕ್ಟರ್‌ಸ್ ಗೇಟ್ ಹಾಗೂ ಬಲ್ಲಾಳ್ ಭಾಗ್‌ನ ಮಣ್ಣಗುಡ್ಡೆ ರಸ್ತೆಯಲ್ಲಿ ಈ ಸಮಸ್ಯೆಯನ್ನು ಕಾಣಬಹುದು. ಅದೇ ರೀತಿ ನಗರದ ಮುಖ್ಯ ಭಾಗದ ಹಲವಾರು ರಸ್ತೆಗಳ ರಿಪೇರಿ ಕೂಡ ಸಮರ್ಪಕವಾಗಿ ಮಾಡಲಿಲ್ಲ..

ಮಂಗಳೂರು ಮಹಾನಗರ ಪಾಲಿಕೆ ಸಮೀಪದಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಇ-ಟಾಯ್ಲೆಟ್ ಸ್ಥಾಪಿಸಲಾಗಿತ್ತು ಆದರೆ ಇದೀಗ ಸಮರ್ಪಕ ನಿರ್ವಹಣೆ ಇರದೆ ಮೂಲೆಗೆ ಸೇರಿಬಿಟ್ಟಿದೆ. ಇದರ ಬಗ್ಗೆಯೂ ಮಾರ್ವಲೆಸ್ ಮಂಗಳೂರು, ಗ್ರೀನ್ ಮಂಗಳೂರು ಅಭಿಯಾನಗಳನ್ನು ಆರಂಭಿಸಿದ ಮಾನನೀಯ ಶಾಸಕರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು