5:56 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಸಿನಿ ರಿಪೋರ್ಟ್ : ಹೇಗಿದೆ ರಾಜಣ್ಣನ ಸೌಂಡ್ ಆ್ಯಂಡ್ ಲೈಟ್ಸ್ !?

03/06/2022, 00:43

ಗಣೇಶ್ ಅದ್ಯಪಾಡಿ
info.reporterkarnataka@gmail.com

 

ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಬೋರ್ ಆಗದ ಹಾಗೆ ಕಂಪ್ಲೀಟ್ ಕಾಮಿಡಿ ಪ್ಯಾಕೇಜ್ ಇರುವಂತಹ ಸಿನಿಮಾ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್.

ಹೌದು, ತುಳು ಸಿನಿಮಾ ರಂಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳಲ್ಲಿ ಗುಣಮಟ್ಟ ಹಾಗೂ ಪ್ರಸ್ತುತಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಸಿನಿಮಾಗಳಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಎಂದು ಹೇಳಬಹುದು. ತುಳುನಾಡಿನಾದ್ಯಂತ ಮಾತ್ರವಲ್ಲದೆ ಹೊರ ಜಿಲ್ಲೆ ರಾಜ್ಯ ಮಾತ್ರವಲ್ಲದೆ ವಿದೇಶದಲ್ಲಿಯೂ ಯಶಸ್ವಿಯಾಗಿ ಪ್ರದರ್ಶನ ಕಂಡಿರುವ ಸಿನಿಮಾ ತುಳು ಸಿನಿ ಪ್ರೇಮಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.

ತುಳು ಪ್ರೇಕ್ಷಕರಿಗೆ ಇಷ್ಟ ಆಗುವ ಹಾಗೆ ಕಾಮಿಡಿಯ ಔತಣ ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ವರೆಗೂ ಸಾಗುತ್ತಾ ಬಂದಿದೆ. ಚೋಟು ಯಾನೆ ಉಮೇಶ್ ಮಿಜಾರ್, ರವಿ ರಾಮಕುಂಜ ಅವರ ಜೋಡಿ, ಅರವಿಂದ್ ಬೋಳಾರ್ ಹಾಗೂ ಬೋಜರಾಜ್ ವಾಮಂಜೂರು ಅವರ ಪುರುಸೆ ಹಾಗೂ ಮುರುಗನ ಪಾತ್ರಗಳು ಹಾಸ್ಯಕ್ಕೆ ಒಗ್ಗರಣೆಯನ್ನು ಹಾಕುತ್ತಾ ಕಥೆಯ ಜತೆಗೆ ಸಾಗುತ್ತದೆ.

ನವೀನ್ ಡಿ ಪಡೀಲ್ ಅವರು ಅವರ ಪರ್ಸನಾಲ್ಟಿಗೆ ಹೊಂದುವಂತಹ ಸೀರಿಯಸ್ ಪಾತ್ರಕ್ಕೆ ಬಣ್ಣ ಹಚ್ಚಿ ಪೋಷಕ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದ ಅನೇಕ ಫ್ರೇಮ್‌ಗಳು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿತ್ತು ಹಾಗೂ ಕೆಲವೊಂದು ಕಡೆಗಳಲ್ಲಿ ಅದು ಲ್ಯಾಪ್ಸ್ ಆದ ಹಾಗೆ ಅನಿಸಿತು.

ನಿರ್ದೇಶಕ ರಾಹುಲ್ ಅಮೀನ್ ನಿರ್ದೇಶಕರಾಗಿ ಮೊದಲ ಸಿನಿಮಾವದರು ಬಹುತೇಕ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಹಾಗೂ ನಾಯಕ ನಟ ವಿನೀತ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿವಲ್ಲಿ ಯಶಸ್ವಿಯಾಗಿದ್ದಾರೆ.

ಮಾದಕ ನೋಟದ ನಾಯಕಿ ಯಶ ಹಾಗೂ ಕರಿಷ್ಮಾ ಅಮೀನ್ ಕೂಡ ಕಥೆಯ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.

ಬಲೆ ತೆಲಿಪಾಲೆ ಮೂಲಕ ರಂಜಿಸಿದ್ದ ಪ್ರಶಂಸ ತಂಡ ಕೂಡ ಇಲ್ಲಿ ನಗಿಸುವ ಕೆಲಸವನ್ನು ನಾಜೂಕಾಗಿ ಮಾಡಿದೆ. ಪ್ರಸನ್ನ ಶೆಟ್ಟಿ ಬರೆದ ಸಂಭಾಷಣೆ ಕೂಡ ಕಾಮಿಡಿಗೆ ಪೂರಕವಾಗಿದೆ.

ಒಟ್ಟಾರೆಯಾಗಿ ಸಂಗೀತ ಬೀಟ್ ಸೊಗಸಾಗಿದ್ದು ಯುವಕರನ್ನು ಕುಣಿಯುವಂತೆ ಮಾಡುತ್ತದೆ ಆದರೆ ಸಿನಿಮಾದ ಹಾಡುಗಳು ಮನಸ್ಸಿನಲ್ಲಿ ಉಳಿಯುವಂತಹದು ಯಾವುದು ಇರಲಿಲ್ಲ ಎಂದು ಕಾಣುತ್ತದೆ. ಎಡಿಟಿಂಗ್ ಜಿಐ ವರ್ಕ್ ಸೊಗಸಾಗಿದೆ ಗ್ರೀನ್ ಸ್ಕ್ರೀನ್‌ನಲ್ಲಿ ಶೂಟ್ ಮಾಡಿದ ನೃತ್ಯದ ಕ್ವಾಲಿಟಿ ಎಲ್ಲಿಯೂ ಕಮ್ಮಿಯಾಗದಂತೆ ತಾಂತ್ರಿಕ ವರ್ಗ ಕಾಪಾಡಿಕೊಂಡಿದೆ.

ಸಿನಿಮಾ ಖಂಡಿತವಾಗಿಯೂ ಯಶಸ್ವಿಯಾಗಿದ್ದು, ಇನ್ನೂ ಹೆಚ್ಚಿನ ಗುಣಮಟ್ಟ ಹಾಗೂ ವೈವಿಧ್ಯಮಯ ಕಥೆಯ ತುಳು ಸಿನಿಮಾಗಳು ಈ ತಂಡದಿಂದ ಮೂಡಿ ಬರಲಿ.

ನಿರ್ಮಾಪಕರಾದ ಆನಂದ್ ಕುಂಪಲ ತಮ್ಮ ಮೊದಲ ಸಿನಿಮಾದಲ್ಲಿಯೇ ಹೊಸ ಸಂಚಲನ ಮೂಡಿಸಿದ್ದಾರೆ ಇನ್ನಷ್ಟು ಪ್ರಾಯೋಗಿಕ ತುಳು ಸಿನಿಮಾಗಳು ಇವರ ಮೂಲಕ ಬರಲಿ ಎನ್ನುವುದು ತುಳುವರ ಆಶಯ.

ಇತ್ತೀಚಿನ ಸುದ್ದಿ

ಜಾಹೀರಾತು