4:42 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಚಟ್ನಿ ತರಹ ಮಡಿಕೇರಿ- ಚೆಟ್ಟಳ್ಳಿ ರಸ್ತೆ: ನಿರ್ಮಾಣಗೊಂಡು ಮೂರೇ ದಿನಗಳಲ್ಲಿ ಕುಸಿದು ಬಿದ್ದ ತಡೆಗೋಡೆ!

20/05/2022, 08:57

ಮಡಿಕೇರಿ (reporterkarnataka.com):ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆ ಪಾಳುಬಿದ್ದು ಈ ವರ್ಷದ ಮಳೆಗಾಲಕ್ಕೆ ಮೂರು ವರ್ಷಗಳೇ ಕಳೆದುಹೋಗಿದೆ. 

ಸಿದ್ದಾಪುರ ಹಾಗು ಚೆಟ್ಟಳ್ಳಿಯ ಪ್ರಯಾಣಿಕರು ಶಾಲಾ ಕಾಲೇಜು ಮಕ್ಕಳು, ನೌಕರರು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರತಿನಿತ್ಯ ಮಡಿಕೇರಿ ಕಡೆ ಪಯಣಿಸಬೇಕಾಗಿದೆ. ಬೆಳಿಗ್ಗೆ ಹೋದವರು ಸಂಜೆ ಹೊತ್ತಿಗೆ ಮನೆ ಸೇರುವುದೇ ಗ್ಯಾರೆಂಟಿಲ್ಲದಾಗಿದೆ. 


ಈ ವರ್ಷ ಹಲವಾರು ಕೋಟಿ ಹಣ ವ್ಯಯ ಮಾಡಿ ರಸ್ತೆಗೆ ಲೋಕಾಪಯೋಗಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗಿದೆ. ಕೆಲಸ ಎಷ್ಟರಮಟ್ಟಿಗೆ ಕಳಪೆಯಾಗಿದೆ ಎಂದರೆ ತಡೆ ಗೋಡೆ ನಿರ್ಮಿಸಿದ ಮೂರು ದಿವಸಕ್ಕೆ ಕುಸಿಯಲು ಪ್ರಾರಂಭಿಸಿದೆ. ಈಗಾಗಲೇ ಮೊನ್ನೆಯಿಂದ ಸುರಿಯುತ್ತಿರುವ ಕೃತಿಕಾ ಮಳೆಗೆ ತಡೆಗೋಡೆ ಜೊತೆಯಲ್ಲಿಯೇ  ರಸ್ತೆಯು ಬಿರುಕುಬಿಟ್ಟಿದ್ದು ಕುಸಿಯಲು ಕಾಯುತಿದೆ. ಅದನ್ನು ಅರಿತ ಗುತ್ತಿಗೆದಾರರು ಜೆ. ಸಿ. ಬಿ. ಯಂತ್ರ ತಂದು ಮಣ್ಣು ಮುಚ್ಚಿ ಹೋಗಿದ್ದಾರೆ. 

ಅಂತೂ ಇಂತೂ ಲೋಕಾಪಯೋಗಿ ಅಭಿಯಂತರರು ಮತ್ತು ಗುತ್ತಿಗೆದಾರರು ತಮ್ಮ ತಟ್ಟೆಯಲ್ಲಿ *ಪಪ್ಪಡಂ*  *ಪಾಯಸಂ ಉಂಡು* ರಸ್ತೆಯಲ್ಲಿ ಅದನ್ನು ವಿಸರ್ಜಿಸಿದಂತೆ ಚೆಟ್ಟಳ್ಳಿ ಮಡಿಕೇರಿ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗೆ ಅನುಭವವಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು