3:43 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ದೇಶದಲ್ಲಿ ಖಾದ್ಯ ತೈಲದ ಕೊರತೆ ಇದೆಯೇ?: ಕೇಂದ್ರ ಸರಕಾರ ಈ ಕುರಿತು ಹೇಳಿದ್ದೇನು..?

02/05/2022, 11:09

ಹೊಸದಿಲ್ಲಿ(reporterkarnataka.com); ದೇಶದಲ್ಲಿ ಅಡುಗೆ ಎಣ್ಣೆ ಗಗನಕ್ಕೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿ ಖಾದ್ಯ ತೈಲದ ಕೊರತೆ ಇಲ್ಲ ಎನ್ನುವ ಮೂಲಕ ಸ್ವಲ್ಪ ನಿರಾಳ ನೀಡಿದೆ.

ದೇಶದಲ್ಲಿ ಸಾಕಷ್ಟು ಅಡುಗೆ ಎಣ್ಣೆ ಸಂಗ್ರಹವಿದೆ.ಪ್ರಸ್ತುತ 21 ಲಕ್ಷ ಮೆಟ್ರಿಕ್​ ಟನ್​ ಇದ್ದು, ಮೇ ಅಂತ್ಯದೊಳಗೆ ಇನ್ನು 12 ಲಕ್ಷ ಮೆಟ್ರಿಕ್​ ಟನ್​ ಎಣ್ಣೆ ಆಮದಾಗಲಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷಕ್ಕಿಂತ ಸೋಯಾಬಿನ್​ ಉತ್ಪಾದನೆಯಲ್ಲಿ ಈ ವರ್ಷ ದುಪ್ಪಟ್ಟಾಗಿದ್ದು, 126.02 ಲಕ್ಷ ಮೆಟ್ರಿಕ್​ ಟನ್​ ಸಂಗ್ರಹವಾಗಿದ್ದು, ಸಾಸಿವೆ ಎಣ್ಣೆ ಸಹ ಶೇ.37ರಷ್ಟು ಅಧಿಕ ಉತ್ಪಾದನೆಯಾಗಿದೆ ಹಾಗಾಗಿ ಸದ್ಯ ಅಡುಗೆ ಎಣ್ಣೆಯ ಕೊರತೆ ಇಲ್ಲ ಎಂದು ಹೇಳಿದೆ.

ಸದ್ಯ ಇಂಡೋನೇಷ್ಯಾಗೆ ರಫ್ತಾಗುತ್ತಿದ್ದನ್ನು ಸ್ಥಗಿತಗೊಳಿಸಿರುವುದರಿಂದ ತಾಳೆ ಎಣ್ಣೆ ಸಹ ಸಾಕಷ್ಟಿದೆ. ಸದ್ಯಕ್ಕೆ ಯಾವುದೇ ಕೊರತೆ ಇಲ್ಲ ಎಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು