5:12 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ತೈಲ ಬೆಲೆಯೇರಿಕೆ: ಕೇಂದ್ರ ಸರಕಾರ ವಿರುದ್ಧ  ಈಚನಾಳ ಗ್ರಾಮ ಪಂಚಾಯತ್ ಮುಂದೆ ಕಾಂಗ್ರೆಸ್ ಪ್ರತಿಭಟನೆ 

14/06/2021, 14:46

ಅಮರೇಶ್  ಲಿಂಗಸುಗೂರು ರಾಯಚೂರು

info.reporterkarnataka@gmail.com

ಕೇಂದ್ರ ಸರಕಾರದ ತೈಲ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ವತಿಯಿಂದ ಈಚನಾಳ ಗ್ರಾಮದ ಗ್ರಾಮ ಪಂಚಾಯತ್ ಮುಂದೆ ‘100 ನಾಟೌಟ್’ ಪ್ರತಿಭಟನೆ ಹಿರಿಯ ಕಾಂಗ್ರೆಸ್ ಮುಖಂಡ ಬಸನಗೌಡ ಮೇಟಿ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಆನಂದ ಕುಂಬಾರ ಮಾತನಾಡಿ,  ಕೊವಿಡ್-19 ಮಹಾಮಾರಿಯ ಹಿಡಿತಕ್ಕೆ ಸಿಕ್ಕಿ ಹೈರಾಣವಾಗಿರುವ ಜನಸಾಮಾನ್ಯರ ದುಸ್ಥಿತಿಯ ನಡುವೆಯೇ ಸಂವೇದನಾರಹಿತ ಕೇಂದ್ರ ಸರಕಾರದ ನೀತಿಗಳಿಂದ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ದಿನೇ ದಿನೇ ಏರುತ್ತಿದೆ. ಬಹಳ ಕಡೆ ಲೀಟರ್ ಒಂದರ ಬೆಲೆ ನೂರರ ಗಡಿ ದಾಟಿದೆ. ಇನ್ನುಳಿದ ಕಡೆ ನೂರರ ಹೊಸ್ತಿಲಲ್ಲಿದೆ. ಈ ಬೆಲೆ ಏರಿಕೆಯಿಂದಾಗಿ ಮನೆಬಳಕೆ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಳೆದ 13 ತಿಂಗಳುಗಳಲ್ಲಿ ಪೆಟ್ರೋಕ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ ತಲಾ ರೂಪಾಯಿ 25.72 ಮತ್ತು ರೂಪಾಯಿ 23.93 ರಷ್ಟು ಏರಿಕೆಯಾಗಿವೆ. ಕಳೆದ 5 ತಿಂಗಳುಗಳಲ್ಲಿ 43 ಬಾರಿ ದರಗಳನ್ನು ಏರಿಕೆಯಾಗಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಮುಖಂಡರು ಪಿರಸಾಬ ಪಂಚಮ್, ಆದಪ್ಪ ಮೇಟಿ, ದೊಡ್ಡಪ್ಪ ಚಿಗರಿ, ಯಮನಪ್ಪ ಕಟ್ಟೀಮನಿ,  ಸಣ್ಣಗದ್ದೆಪ್ಪ ಚಿಗರಿ,ಮಲ್ಲರಡ್ಡೆಪ್ಪ ದೊಡ್ಡಮನಿ, ಮರಿಯಪ್ಪ ಕಟ್ಟಿಮನಿ, ಹನುಮಂತ ಕುರಿ, ಉಮೇಶ ಚವ್ಹಾಣ, ಖೇಮಣ್ಣ ರಾಠೋಡ, ಗೋವಿಂದ ಪವಾರ್, ಅಮರೇಶ ಮೇಟಿ, ದೇವರೇಡ್ಡಿ ಮೇಟಿ, ಗದ್ದೆಪ್ಪ ಕಟ್ಟಿಮನಿ, ಗದ್ದೆಪ್ಪ ಗೌಂಡಿ, ಶ್ರವಣಕುಮಾರ ದಾಸರ ಇತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು