12:09 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಕಾರ್ಕಳ ಉತ್ಸವಕ್ಕೆ ಹಣದ ಹೊಳೆ: ತುಳು ಶಿಕ್ಷಕರ ಸೇವೆಗಿಲ್ಲ ಬೆಲೆ: 2 ವರ್ಷದಿಂದ ಗೌರವ ಧನ ಕೊಡದಿದ್ದರೂ ತುಟಿ ಬಿಚ್ಚದ ಸಂಸ್ಕೃತಿ ಸಚಿವರು!!

18/03/2022, 17:06

ಮಂಗಳೂರು(reporterkarnataka.com): ನಮ್ಮ ರಾಜಕಾರಣಿಗಳಲ್ಲಿ, ಅಧಿಕಾರಸ್ಥರಲ್ಲಿ ಸೋಗಲಾಡಿತನ ಯಾವ ಮಟ್ಟದಲ್ಲಿ ಬೆಳೆದಿದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ನಿಮಗೊತ್ತಿರುವಾಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರ ತವರು ಕ್ಷೇತ್ರದಲ್ಲಿ ಕಾರ್ಕಳ ಉತ್ಸವ ನಡೆಯುತ್ತಿದೆ. ಇದರ ಭಾಗವಾಗಿ ಕಾರ್ಕಳದ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ನಲ್ಲಿ ತಿರುಗಾಟ ನಡೆಸಲಾಗಿದೆ. ಇನ್ನೊಂದು ಕಡೆ ನಮ್ಮ ಕರಾವಳಿಯ ಮಾತೃ ಭಾಷೆಯಾದ ತುಳು ಭಾಷೆಯನ್ನು ಕಲಿಸುವ ಬಡ ಶಿಕ್ಷಕರಿಗೆ 2 ವರ್ಷದಿಂದ ಸಂಬಳ ನೀಡದೆ ದುಡಿಸಿ ಸತಾಯಿಸಲಾಗುತ್ತಿದೆ.

ಕಾರ್ಕಳದ ಪೌರ ಕಾರ್ಮಿಕರನ್ನು ಹೆಲಿಕಾಪ್ಟರ್ ಸುತ್ತಿಸಿದ ಬಗ್ಗೆ ಯಾರು ತಕರಾರು ಎತ್ತುವುದಿಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದವನ ಜುಟ್ಟಿಗೆ ಮಲ್ಲಿಗೆ ಬೇಕೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಪೌರ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳ ಕೊರತೆ ಕಾಡುತ್ತಿದೆ. ಅವರಿಗೆ ಶೂ ಕೊಡುವುದಿಲ್ಲ, ಕೈಗೆ ಗ್ಲೌಸ್ ಇಲ್ಲ. ಆರೋಗ್ಯ ಸಮಸ್ಯೆ ಬಂದ್ರೆ ಸರಿಯಾದ ಹೆಲ್ತ್ ಇನ್ಸೂರೆನ್ಸ್ ಇಲ್ಲ. ಈ ಎಲ್ಲ ಇಲ್ಲಗಳ ನಡುವೆ, ಒಬ್ಬರಿಗೆ ತಲಾ 2 ಸಾವಿರ ರೂ. ಖರ್ಚು ಮಾಡಿ ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ಅಗತ್ಯವಿತ್ತೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಾರೆ. ಈ ನಡುವೆ ತುಳು ಭಾಷೆ ಕಲಿಸುವ ಸುಮಾರು 43 ಮಂದಿ ಶಿಕ್ಷಕರಿಗೆ ಕಳೆದ 30 ತಿಂಗಳಿನಿಂದ ಗೌರವ ಧನ ನೀಡಿಲ್ಲ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 42 ಶಾಲೆಗಳಲ್ಲಿ ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಇದಕ್ಕೆ 43 ತುಳು ಶಿಕ್ಷಕರನ್ನು ನೇಮಿಸಲಾಗಿತ್ತು. ಇವರಿಗೆ ತಿಂಗಳಿಗೆ ಜುಜುಬಿ 3 ಸಾವಿರ ರೂ. ಗೌರವ ಧನ ನಿಗದಿಪಡಿಸಲಾಗಿತ್ರು. ಆದರೆ ಈ ಶಿಕ್ಷಕರಿಗೆ 30 ತಿಂಗಳಿನಿಂದ ಆ  ಗೌರವ ಧನವನ್ನು ಕೂಡ ನೀಡಿಲ್ಲ. 

ತುಳು ಶಿಕ್ಷಕರಲ್ಲಿ ಹೆಚ್ಚಿನವರು ತೀರಾ ಬಡವರು, ವಿಕಲಚೇತನರೂ ಕೂಡ ಇದ್ದಾರೆ. ಜುಜುಬಿ 3 ಸಾವಿರಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ತುಳುವಿಗಾಗಿ ಮೀಸಲಿಟ್ಟಿದ್ದಾರೆ. ಆದರೆ ಸರಕಾರ ಇವರಿಗೆ ಗೌರವ ಧನ ಕೊಡುತ್ತಿಲ್ಲ. ಉಸ್ತವಾರಿ ಸಚಿವ ಸುನಿಲ್ ಕುಮಾರ್ ಅವರು ತನಗೆ ಆ ವಿಷಯವೇ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ತುಳು ಶಿಕ್ಷಕರ ಗೌರವ ಧನದ ಜವಾಬ್ದಾರಿಯನ್ನು ತುಳು ಸಾಹಿತ್ಯ ಅಕಾಡೆಮಿಗೆ ವಹಿಸಲಾಗಿತ್ತು. ಆದರೆ ಅಕಾಡೆಮಿಗೆ ಸರಕಾರ ಅನುದಾನ ನೀಡಿದರೆ ತಾನೆ ಸಂಬಳ ನೀಡಲು ಸಾಧ್ಯ. ಅದಲ್ಲದೆ ಈ ಎಲ್ಲ ಭಾಷಾ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುತ್ತದೆ. ಸುನಿಲ್ ಕುಮಾರ್ ಇದರ ಸಚಿವರು.

……

ಇತ್ತೀಚಿನ ಸುದ್ದಿ

ಜಾಹೀರಾತು