4:35 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

‘ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್’ ವಿಷಯದ ಕುರಿತು ಒಂದು ದಿನದ ಅಧ್ಯಯನ ಪ್ರವಾಸ 

11/03/2022, 18:59

ಸುಬ್ರಹ್ಮಣ್ಯ(reporterkarnataka.com):ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದಿಂದ “ಮಾರ್ಕೆಟಿಂಗ್ ಪ್ರಿನ್ಸಿಪಲ್ಸ್ ಅಂಡ್ ಅಪ್ಲಿಕೇಶನ್ ” ವಿಷಯದ ಕುರಿತಾದ ಒಂದು ದಿನದ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟಿಯ ಹಾಳೆ ತಟ್ಟೆ ರಫ್ತ್ತು ಉದ್ಯಮ ವಿಟ್ಲ ಕೊಡಪದವು ಸಮೀಪದ ರಾಜರಾಮ್ ಒಡೆತನದ ಇಕೋ ಬ್ಳಿಸ್ ಉದ್ಯಮಕ್ಕೆ ಭೇಟಿ ನೀಡಿ ಹಾಳೆ  ತಟ್ಟೆ ಉದ್ಯಮ, ಮಾರುಕಟ್ಟೆ ಸಂವರ್ಧನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳೆ  ತಟ್ಟೆ ಬೇಡಿಕೆ,ಪೂರೈಕೆ  ಮತ್ತು ಬೆಲೆಗಳ  ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಸ್ವದ್ಯೋಗಿಳಿಗೆ  ತಾವೇ ನಿರ್ಮಿಸಿ ವಿನ್ಯಾಸ ಗೊಳಿಸಿದ  ಯಂತ್ರೋಪಕರಣ ಮಾಹಿತಿ ಹಾಗೂ ಸಂಸ್ಥೆಯಲ್ಲಿನ  ಉದ್ಯೋಗಿಗಳಿಗೆ ಕೊಡಮಾಡುವ ಸೌಕರ್ಯ ಗಳ  ಬಗ್ಗೆ ಮಾಹಿತಿ ನೀಡಿದರು. ರಫ್ತ್ತುವಿನ ವಿವಿಧ ಹಂತಗಳ  ಬಗ್ಗೆ ವಿಸ್ತಾರವಾದ  ಮಾಹಿತಿಯನ್ನು ನೀಡಿದರು.ಕಲ್ಲಡ್ಕ ಸಮೀಪದ ಧೀರಜ್  ಹಾಗೂ ಅಜಿತ್ ಒಡೆತನದ ಫಾರ್ಚುನ್ ಪೆಟ್ ಜಾರ್ ಇಂಡಸ್ಟ್ರಿಗೆ ತೆರಳಿ  ವಿವಿಧ  ವಿನ್ಯಾಸದ ಶೀಷೆ ತಯಾರಿಕಾ ಮಾಹಿತಿಯನ್ನು  ಪಡೆಯಲಾಯಿತು. ನಾರಾಯಣ  ಸೋಮಯಾಜಿ ಎರಕಲ ಒಡೆತನದ ಐತಿಹಾಸಿಕ ಬ್ರಹತ್  ಹಂಚು, ಇಟ್ಟಿಗೆ ಮತ್ತು ಟೈಲ್ಸ್ ತಯಾರಿಕ ಘಟಕ ಶ್ರೀಕೃಷ್ಣ ಬ್ರಿಕ್ಸ್ ಅಂಡ್ ಟೈಲ್ಸ್ ಪ್ರೈವೆಟ್. ಲಿ. ಇಲ್ಲಿಗೆ ಭೇಟಿನೀಡಿ  ಸಂಸ್ಥೆಯ  ಇತಿಹಾಸ , ಪ್ರೋಸೆಸ್ಸಿಂಗ್, ಕಾರ್ಖಾನೆಯಲ್ಲಿ ತಯಾರಾಗುವ ವಸ್ತುಗಳು  ಅದರ ಮಾರುಕಟ್ಟೆ ವಿಚಾರದ  ಬಗ್ಗೆ ಮಾಹಿತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದು  ಕೊಂಡರು

 ಪ್ರಥಮ  ಬಿ. ಕಾಮ್ ಹಾಗೂ ಬಿ. ಬಿ. ಎ ಯ  ಒಟ್ಟು 123 ವಿದ್ಯಾರ್ಥಿ ಅಧ್ಯಯನ ಪ್ರವಾಸದಲ್ಲಿ  ಪಾಲ್ಗೊಂಡಿದ್ದು, ಸಂಸ್ಥೆಯ  ವಾಣಿಜ್ಯ  ಹಾಗೂ ಉದ್ಯಮಾಡಳಿತ ವಿಭಾಗದ ಉಪನ್ಯಾಸಕರಾದ ಶ್ರೀ ರಮಾನಾಥ್. ಎ, ಶಿವಪ್ರಸಾದ್. ಎಸ್ ಮತ್ತು ಕೃತಿಕಾ ಪಿ.ಎಸ್ ಮಾರ್ಗದರ್ಶನ  ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು