11:24 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಕವನ : ನಮ್ಮ ನಡೆ ಶಾಲೆ ಕಡೆ | ಉಮಾ ಮಾಧವಿ

23/10/2021, 16:49

ಅಂದು ,
ಸಂಚಾರಿ ವಾಣಿಯನ್ನು ಮುಟ್ಟಿ ನೋಡಲು 
ಬಿಡದ ಹಿರಿಯರು,
ಆದರೆ ಚಿಣ್ಣರಿಗೆ ಬಲು ಆಸೆ 
ಏನಿರಬಹುದು? ಅದರಲ್ಲಿ ತಿಳಿವಾಸೆ
ಚಿಣ್ಣರು ಜಾಣರು ಗುಟ್ಟೆಲ್ಲಾ ಬಲ್ಲರು 

ಇಂದು ,
 ಅದೇ ಹಿರಿಯರು ಬನ್ನಿ ವೀಡಿಯೋ ಪಾಠ
ನೋಡಿ ಎಂದರು
ಚಿಣ್ಣರಿಗೆ ವೀಡಿಯೋ ನೋಡಿ ನೋಡಿ ಕಣ್ಣಾಲಿಗಳು ಸೋತವು, ಜೇಡರ ಬಲೆಯಂತೆ
ಕಣ್ಣೆಲ್ಲ ಮಯ ಮಯ 

ಯಾರಿಗೆ ಬೇಕು ?ಈ ವಾಣಿ
ವರ್ಕ್ ಉಂಟು, ನೆಟ್ ಇಲ್ಲ, ವೈಫೈ ಹಾಕಿಲ್ಲ
ಆನ್ಲೈನ್ ಪಾಠದ ಗೋಳು ತಲೆಯೆಲ್ಲಾ ಹಾಳು  .

ಹೌದು 
ಅಂದು ಈ ಚಿಣ್ಣರು ಕಾಯುತ್ತಿದ್ದರು
ಶಾಲೆಗೆ ಯಾವಾಗ ರಜೆ.
ಇಂದು ಬಕಪಕ್ಷಿಯಂತೆ ಕಾಯುವರು
ಶಾಲೆ ಯಾವಾಗ ಎಂದು 
ಸುದ್ದಿ ಬಂತು
 ಶಾಲೆ ಆರಂಭವಾಗುವುದೆಂದು, ಕೇಳಿದ್ದೇ ತಡ ,ಚಿಣ್ಣರು
 ಸಂಚಾರಿವಾಣಿ ಯನ್ನು ಎತ್ತಿ ಹಾಕಿ 
ನಮಸ್ಕಾರ -ಎಂದಿಗೂ ನಿನ್ನ ಸಹವಾಸ ಬೇಡಪ್ಪ ಎನ್ನುತ್ತಾ 
ಖುಷಿ ಖುಷಿಯಿಂದ ಚಿಣ್ಣರೆಲ್ಲ ಒಟ್ಟುಗೂಡಿ
 ಹೆಗಲ ಮೇಲೆ ಚೀಲ ಹಾಕಿ ನಿಷ್ಕಲ್ಮಶ 
ನಗುವಿನೊಂದಿಗೆ ಹೊರಟಿದ್ದಾರೆ.

 ತರಗತಿಯಲ್ಲಿ ಪಾಠ ಕೇಳುವ ಆಸೆಯಿಂದ
 ಟೀಚರನ್ನು ನೋಡುವ ಉತ್ಸಾಹದಿಂದ
 ಗೆಳೆಯರೊಡನೆ ಆಡುವ ಆತುರದಿಂದ 
ನಗುತ್ತಾ ನಗುತ್ತಾ ಹೇಳುತ್ತಾರೆ ,ಅಯ್ಯೋ ದೇವರೇ ,ಎಂದೆಂದಿಗೂ 
ಈ ಮಾರಿ ಕೊರೋನಾ ಬಾರದಿರಲಿ .
ಸದಾಕಾಲ ನಮ್ಮ ನಡೆ ಶಾಲೆ ಕಡೆಗೆ ಇರಲಿ .   

– ಉಮಾ ಮಾಧವಿ
 ನಿವೃತ್ತ ಶಿಕ್ಷಕಿ, ಕೊಳಲಗಿರಿ, ಉಡುಪಿ

ಇತ್ತೀಚಿನ ಸುದ್ದಿ

ಜಾಹೀರಾತು