5:26 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಉಪಯೋಗಕ್ಕೆ ಬಾರದ ಮಸ್ಕಿ ಕೃಷಿ ಕೇಂದ್ರ: ಕರ್ನಾಟಕ ರೈತ ಸಂಘದಿಂದ ಮುತ್ತಿಗೆ, ಪ್ರತಿಭಟನೆ

22/10/2021, 09:27

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ 
ಅಂತರಗಂಗೆ ರಾಯಚೂರು
info.reporterkarnataka@gmail.com

ರೈತರಿಗಾಗಿ ಸರಕಾರ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಅದು ನಿಜವಾದ ರೈತರಿಗೆ ತಲುಪುವುದೇ ಇಲ್ಲ.

ಕೃಷಿ ಕೇಂದ್ರದಲ್ಲಿಯೂ ರೈತರಿಗೆ ಸರಿಯಾದ ರೀತಿಯ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಹೀಗಾದರೆ ದೇಶಕ್ಕೆ ಅನ್ನ ಹಾಕು ರೈತನ ಪಾಡು ಹೇಗೆ ಎಂದು ಮಸ್ಕಿ ರೈತ ಸಂಘದ ಅಧ್ಯಕ್ಷ ವಿಜಯ್ ಬಡಿಗೇರ್ ಆಕ್ರೋಶ ವ್ಯಕ್ತ ಪಡಿಸಿದರು.

ಮಸ್ಕಿಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಕೃಷಿ ಕೇಂದ್ರ ಯಾರು ವಾಸವಿರದ ಜಾಗದಲ್ಲಿದೆ. ಜನರು ಅಲ್ಲಿಂದ ನಡೆದುಕೊಂಡು ಬರಬೇಕು. ಅಲ್ಲದೆ ರೈತರಿಗೆ ಬೇಕಾಗುವ ಕೃಷಿಗೆ ಅಗತ್ಯ ವಸ್ತುಗಳು ಸಿಗುವುದೇ ಇಲ್ಲ. ಟ್ಯಾಕ್ಟರ್, ಬಿತ್ತುವ ಯಂತ್ರೋಪಕರಣಗಳು ಅರ್ಜಿ ಹಾಕಿ ಎರಡು ವರ್ಷಗಳಾದರೂ ಇನ್ನು ಬಂದಿಲ್ಲ. ಹೀಗಾದರೆ ರೈತರ ಪಾಡೇನು. ರೈತರಿಗೆ ಅನುಕೂಲವಾಗದ ಕೃಷಿ ಕೇಂದ್ರ ಇದ್ದು ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು

ಮುತ್ತಿಗೆ ಹಾಕಿದರು. ಕೃಷಿ ಅಧಿಕಾರಿಗಳು ಮನವಿ ಪತ್ರಕ್ಕೆ ಸ್ಪಂದಿಸಿ ರೈತರು ಅನುಕೂಲವಾಗುವ ರೀತಿಯಲ್ಲಿ ಕೊಡಲಾಗುವುದು ಎಂದು ಹೇಳಿದರು.

ಅಮೀನ್ ಪಾಸ್ ದಿದ್ದಿಗಿ ಮಾತನಾಡಿ, ರೈತನ ಬಾಳು ಕಣ್ಣೀರಿನ ಗೋಳು. ರೈತ ಹೊಲದಲ್ಲಿ ಬೆಳೆದ ಬೆಳಗೆ ಬಂದ ಹಣ ದಲ್ಲಾಳಿಗಳು ತಿನ್ನುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಸರಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಸಮರ್ಪಕವಾದ ಬೀಜಗಳನ್ನು, ಸಮರ್ಪಕ ಯಂತ್ರೋಪಕರಣಗಳ ರೈತರಿಗೆ ಒದಗಿಸಿಕೊಡಬೇಕೆಂದು ಅಧಿಕಾರಿಗಳ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ರೈತ ಮುಖಂಡರು ಭಾಗವಹಿಸಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು