4:49 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಇಂಧನ ಇಲಾಖೆಯಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಚಿಂತನೆ: PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಸಚಿವ ಸುನಿಲ್ 

16/10/2021, 18:43

ಮಂಗಳೂರು(reporterkarnataka.com): ರಾಜ್ಯ ಸರಕಾರದ ಇಂಧನ ಇಲಾಖೆಯಲ್ಲಿ ಬಳಕೆ ಮಾಡುತ್ತಿರುವ ಸರ್ಕಾರಿ ವಾಹನಗಳು‌ ವಿದ್ಯುತ್ ಚಾಲಿತ ವಾಹನಗಳಾಗಬೇಕು‌ ಎನ್ನುವ ಚಿಂತನೆಯಿದೆ ಎಂದು ಇಂಧನ ಸಚಿವ ವಿ‌. ಸುನಿಲ್‌ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಪಂಪ್ ವೆಲ್ ಬಳಿ ನೂತನ PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಮಾತನಾಡಿದರು.

ಇಂದು‌ ದೇಶಾದ್ಯಂತ ವಿದ್ಯುತ್ ‌ಚಾಲಿತ ವಾಹನ‌ಗಳ‌ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು‌ ನೀಡುತ್ತಿದೆ‌ ಎಂದರು. ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ‌, ಬೆಲೆಯೂ ಹೆಚ್ಚು ಎನ್ನು‌ವ ಕೂಗುಗಳು ಕೇಳಿ ಬರುತ್ತವೆ. ಹೀಗಿರುವಾಗ ವಿದ್ಯುತ್ ಚಾಲಿತ ವಾಹನಗಳು ಇಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.

ಇಂಧನ ಇಲಾಖೆ‌ ವಹಿಸಿಕೊಂಡ‌ ನಂತರ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳ‌ ಸಭೆ‌ ನಡೆಸಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳು ಮುನ್ನಲೆಗೆ ಬರಬೇಕು, ಜನರು ಹೆಚ್ಚು ಆಕರ್ಷಿತರಾಗಬೇಕು. ಇಂದಿನ‌ ವ್ಯವಸ್ಥೆಯಿಂದ‌ ಸುಧಾರಣೆ ಹೊಂದಬೇಕೆಂದು.  ಪೆಟ್ರೋಲ್‌, ಡೀಸಲ್ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳ‌ ಕಡೆ‌ ಮುಖ ಮಾಡೋದು ಸುಧಾರಣೆಯ ಒಂದು ಭಾಗ, ಜನರು ಬದಲಾವಣೆ ಕಡೆಗೆ ಹೆಜ್ಜೆಯನ್ನ‌ ಇಡಬೇಕು ಎಂದರು.

ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ೨೦-೪೦% ಸಬ್ಸಿಡಿ ನೀಡಲಾಗುತ್ತಿದೆ. ತ್ರಿಚಕ್ರ ವಾಹನಗಳಿಗೆ ಸುಮಾರು 60 ಸಾವಿರ ರೂ. ಸಬ್ಸಿಡಿ‌ ದೊರೆಯುವುದರಿಂದ ಗ್ರಾಹಕರಿಗೆ‌‌ ಹೆಚ್ಚಿನ‌ ಅನುಕೂಲವಾಗಲಿದೆ ಎಂದು‌ ಸಚಿವರು ಅಭಿಪ್ರಾಯ ಪಟ್ಟರು. 

ಇನ್ನು‌ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಸಾವಿರ ವಿದ್ಯುತ್ ವಾಹನ‌ ಚಾರ್ಜಿಂಗ್ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.


ವಾಹನಗಳ ವಿಚಾರದಲ್ಲಿ ವಿದ್ಯುತ್ ವಾಹನಗಳು‌ ಮುಂದಿನ‌ ಭವಿಷ್ಯ,ಹಾಗಾಗಿ ಆ ನಿಟ್ಟಿನಲ್ಲಿ ಆಲೋಚನೆ‌ ಮಾಡಬೇಕಿದೆ. ವಿದ್ಯುತ್ ಚಾಲಿತ ವಾಹನಗಳ‌ ಬಳಕೆಗೆ ಉತ್ತೇಜನ‌ ಇಂಧನ ಇಲಾಖೆಯಿಂದಲೇ‌ ಆರಂಭವಾಗಲೆಂದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಳಸುವ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಬೇಕು ಎನ್ನುವ ಚಿಂತನೆ‌ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು