3:26 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’:  ಸೆಪ್ಟೆಂಬರ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಿದ್ಧಾರ್ಥ ಶೆಟ್ಟಿ ಹಾಗೂ ನೇಹಾ ಆರ್. ಆಯ್ಕೆ

11/10/2021, 22:25

ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಸಿದ್ಧಾರ್ಥ ಶೆಟ್ಟಿ ಬಿ.ಎಸ್.ಹಾಗೂ ನೇಹಾ ಆರ್. ಆಯ್ಕೆಗೊಂಡಿದ್ದಾರೆ.

ಸಿದ್ಧಾರ್ಥ್ ಶೆಟ್ಟಿ ಬಿ.ಎಸ್. ವಯಸ್ಸು ಬರೇ 7 ವರ್ಷ. ವಿದ್ಯಾ ವಿಕಾಸ್ ಪಬ್ಲಿಕ್ ಸ್ಕೂಲ್ ನ 2ನೇ ತರಗತಿ ವಿದ್ಯಾರ್ಥಿ ಈತ.

ತಂದೆ ಸಂಜು ಬಿ., ತಾಯಿ ರಂಜಿತಾ. ಸಿದ್ಧಾರ್ಥ್ ಗೆ ನೃತ್ಯ, ಅಭಿನಯ, ಕ್ರೀಡೆಯಲ್ಲಿ ಭಾರಿ ಆಸಕ್ತಿ.ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಈತ ಹಲವು ಬಹುಮಾನ ಗಳಿಸಿದ್ದಾನೆ. 

ಸಿದ್ಧಾರ್ಥ್ ಹುಟ್ಟಿದ್ದು ಮೈಸೂರಿನಲ್ಲಿ. ತಂದೆಯ ಹುಟ್ಟೂರು ಬೇಲೂರು. 4ರ ಹರೆಯದಲ್ಲಿ ಸಿದ್ದಾರ್ಥ್  ಡಾನ್ಸ್ ಕಲಿಯಲಾರಂಭಿಸಿದ. ನರ್ಸರಿ, LKG, UKGಯನ್ನು ಬೇಲೂರಿನ learning tree ಎಂಬ ಶಾಲೆಯಲ್ಲಿ ಪೂರೈಸಿದ. ಈಗ ವಿದ್ಯಾ ವಿಕಾಸ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದಾನೆ.

ಸಿದ್ದಾರ್ಥ್  ತಂದೆ 11ತಿಂಗಳ ಹಿಂದೆ ರಸ್ತೆ ಅಪಘಾತ ದಲ್ಲಿ ಮೃತಪಟ್ಟರು. ಅವರ ಆಸೆ ಮಗನನ್ನು ದೊಡ್ಡ ಡಾನ್ಸರ್ ಮಾಡಬೇಕು ಎಂಬುದಾಗಿತ್ತು. ಅವರ ಆಸೆ ಈಡೇರಿಸಲು ತಾಯಿ ತುಂಬಾ ಪ್ರಯತ್ನ ಪಡುತ್ತಿದ್ದಾರೆ. ಒಂದು ದೊಡ್ದ ವೇದಿಕೆಗೋಸ್ಕರ ಕಾಯುತ್ತಿದ್ದಾರೆ. ಝೀ ಕನ್ನಡದ ಆಡಿಷನ್ ನಲ್ಲಿ ಕೂಡ ಭಾಗವಹಿಸಿದ್ದರು.  

12ರ ಹರೆಯದ ಬೆಂಗಳೂರಿನ ನೇಹಾ ಆರ್.ವಿಜಯನಗರದ ನ್ಯೂ ಕೇಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್ ನಲ್ಲಿ ಕಲಿಯುತ್ತಿದ್ದಾಳೆ. ರಂಗನಾಥ ಡಿ.ಎಲ್. ಹಾಗೂ ಸುಜಾತಾ ಸಿ. ದಂಪತಿಯ ಪುತ್ರಿಯಾದ ನೇಹಾ ಉದಯ ಟಿವಿಯ ಚಿಣ್ಣರ ಚಿಲಿಪಿಲಿ ಹಾಗೂ ಸುವರ್ಣ ಟಿವಿಯಲ್ಲಿ ತರ್ಲೆ ನನ್ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ. ಬೆಂಗಳೂರು ವಿವಿ ಆಯೋಜಿಸಿದ ರಂಗ ಶಿಬಿರದಲ್ಲಿ ಎರಡು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದಾಳೆ.  ಸಂಚಾರಿ ಥಿಯೇಟರ್ ಆಯೋಜಿಸಿದ ರಂಗ ಶಿಬಿರದಲ್ಲಿ ಅಪರಾಧಿಯ ಕಥೆ ಎಂಬ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದಾಳೆ. ಜ್ಹೀ ಕನ್ನಡದ ಕಾಮಿಡಿ ಕಿಲಾಡಿಯಲ್ಲಿಯೂ ಪಾಲ್ಗೊಂಡಿದ್ದಾಳೆ.

ಫ್ಯಾಶನ್ ಶೋ, ಎರಡು ಆ್ಯಡ್ ಶೂಟ್ ನಲ್ಲಿ ಮಾಡೆಲ್ ಆಗಿ ಭಾಗವಹಿಸಿದ್ದಾಳೆ. ಇಷ್ಟೇ ಅಲ್ಲದೆ ಫ್ಯಾನ್ಸಿ ಡ್ರೆಸ್, ಹ್ಯಾಂಡ್ ರೈಟಿಂಗ್, ಕಲರಿಂಗ್,ಸ್ಪೋರ್ಟ್ ಮುಂತಾದುವುಗಳಲ್ಲಿ ಹಲವು ಪ್ರಶಸ್ತಿಗಳನ್ನು ಚಾಚಿಕೊಂಡಿದ್ದಾಳೆ. ನೇಹಾ ವಿಕಾಸ್ ಅವರ ‘ಬ್ಯೂಟಿಪುಲ್ ಡೇ’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು