3:16 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆನ್ಲೈನ್ ಕಾರ್ಯಾಗಾರ

04/10/2021, 17:47

ಮಂಗಳೂರು(reporterkarnataka.com): ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೆಸೆಂಟ್‌ ಸಂಧ್ಯಾ ಕಾಲೇಜು, ಮಂಗಳೂರು ಹಾಗೂ ಗೋವಿಂದದಾಸ ಕಾಲೇಜು, ಸುರತ್ಕಲ್‌ನ ವಾಣಿಜ್ಯ ಸ್ನಾತಕೋತ್ತರ ವಿಭಾಗಗಳು ಭಾರತದಲ್ಲಿನ ಮ್ಯೂಚುವಲ್ ಫಂಡ್ಸ್‌ ಸಂಘ (AMFI) ದ ಸಹಯೋಗದೊಂದಿಗೆ ಕಾರ್ಯತಂತ್ರ ಯೋಜನೆಯ ಮೂಲಕ ಆರ್ಥಿಕ ಸಬಲೀಕರಣ” ಎಂಬ ವಿಷಯದ ವೆಬಿನಾರ್  ಆನ್‌ಲೈನ್ ನಲ್ಲಿ ಇತ್ತೀಚಿಗೆ ಜರುಗಿತು. 

ಬೆಸೆಂಟ್ ಸಂಧ್ಯಾ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ತಾರಾ ಶೆಟ್ಟಿ ಆಯೋಜಕರಾಗಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಎಎಂಎಫ್ ಐನ ಹಿರಿಯ ಸಲಹೆಗಾರ ಸೂರ್ಯಕಾಂತ್ ಶರ್ಮಾ (ಭಾರತೀಯ ಭದ್ರತಾ ಏನಿಮಯ ಮಂಡಳಿ (ಸೆಬಿ) ಯ ನಿವೃತ್ತ ಉಪಪ್ರಧಾನ ವ್ಯವಸ್ಥಾಪಕರು) ಭಾಗವಹಿಸಿದ್ದರು. 

ಸೂರ್ಯ ಕಾಂತ  ಶರ್ಮಾ ಪ್ರಾರಂಭದಲ್ಲಿ ವ್ಯಕ್ತಿಗತ ಆರ್ಥಿಕ ಭದ್ರತೆಯ ಬಗ್ಗೆ ವಿವರಿಸಿದರು. ಹೂಡಿಕೆದಾರರು ಸಂಪತ್ತನ್ನು ಕ್ರೋಢೀಕರಿಸುವ ಮೊದಲು ಯೋಚಿಸಿ, ಅರ್ಥಮಾಡಿಕೊಂಡು ಸಾಧ್ಯವಾದಷ್ಟು ಜೀವವಿಮೆಯಲ್ಲಿ ಹಾಗೂ ಸಾಧಾರಣವಾಗಿ ವೈದ್ಯಕೀಯ ವಿಮೆಯಲ್ಲಿ ಹಾಗೂ ತುರ್ತು ಪರಿಸ್ಥಿತಿಗೆಂದು ಉಳಿತಾಯ ಮಾಡಿಕೊಂಡು ನಂತರ ಹೂಡಿಕೆ ಮಾಡಿದರೆ ಉತ್ತಮ ಎಂದು ಹೇಳಿದರು.

ಹೂಡಿಕೆದಾರರು ಉಳಿತಾಯವನ್ನು ಪ್ರತಿ ವರ್ಷ ಶೇಕಡಾ 10ರಷ್ಟು ಹೆಚ್ಚಿಸಬೇಕಾಗುತ್ತದೆ. ಹೂಡಿಕೆದಾರರು ಸಂಪತ್ತನ್ನು ಕೂಡಿಡುವವರಾಗದೇ ಸಂಪತ್ತಿನ ಸೃಷ್ಟಿಕರ್ತನಾಗಬೇಕು ಎಂದು ತಿಳಿಸಿದರು. ವಿವಿಧ ಹೂಡಿಕೆಗಳ ಮೇಲಿನ ಪ್ರತಿಫಲಗಳು, ಪಿ.ಪಿ.ಎಫ್ (PPP), ಎನ್.ಪಿ.ಎಸ್ (NPS) ಸುಕನ್ಯ ಸಮೃದ್ಧಿ ಯೋಜನೆ, ಭದ್ರತಾ ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ಸವಿವರವಾಗಿ ವಿವರಿಸಿ,  ಇವುಗಳು ಮಧ್ಯಮ ವರ್ಗದ ಹಾಗೂ ಮಾಸಿಕ ಸಂಬಳ ಪಡೆಯುವ ಜನಸಾಮಾನ್ಯರಿಗೆ ಉತ್ತಮವಾದ ಉಳಿತಾಯ ಯೋಜನೆಗಳು ಎಂದು ಹೇಳಿದರು.

ಈ ಆನ್‌ಲೈನ್‌ ವೆಬಿನಾರ್‌ನಲ್ಲಿ ಭಾರತದಾದ್ಯಂತ 348 ಜನರು ಸಕ್ರಿಯವಾಗಿ ಭಾಗವಹಿಸಿದ್ದರು.

ಬೆಸೆಂಟ್‌ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀನಾರಾಯಣ ಭಟ್ ಎ,  ಸ್ವಾಗತಿಸಿ,  ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ಸಾತ್ವಿಕಾ ಶೆಟ್ಟಿ  ನಿರೂಪಿಸಿದರು. 

ಗೋವಿಂದದಾಸ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಅಸಿಸ್ಟೆಂಟ್ ಪ್ರೊ. ಸಜನ್ ಆಚಾರ್ಯ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು