11:23 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಪದ್ಮಶ್ರೀ ಭಟ್ ಅಭಿನಂದನಾ ಕಾರ್ಯಕ್ರಮ: ಬಹುಮುಖ ಪ್ರತಿಭೆಯ ಬಾಲ ಕಲಾವಿದರಿಗೆ ಸನ್ಮಾನ

01/10/2021, 15:16

ಮಂಗಳೂರು(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆ ವತಿಯಿಂದ ವಾಯ್ಸ್ ಆಫ್ ಆರಾಧನಾ ಬಹುಮುಖ ಪ್ರತಿಭೆ ಗಳಿಗೆ ಸಂಚಾಲಕಿ  ಪದ್ಮಶ್ರೀ ಭಟ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ಸುರತ್ಕಲ್ ನ ಮಾಧವ ನಗರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಅವರು ಬಹುಮುಖ ಪ್ರತಿಭೆಗಳನ್ನು ಸನ್ಮಾನಿಸಿದರು.

ಸಮಾಜ ಸೇವೆಯ ಜತೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಆರದಿರಲಿ ಬದುಕು ಆರಾಧನಾ ತಂಡವನ್ನು ಶ್ಲಾಘಿಸಿದರು. ಬಹುಮುಖ ಪ್ರತಿಭೆಗಳಾದ ರುದ್ರಮನ್ಯು ಪೊನ್ನಗಿರಿ, ಶಿವಮನ್ಯು ಪೊನ್ನಗಿರಿ, ಧ್ಯಾನ್ ಮಂಗಳೂರು,ಅಭಿಷ್ಣಾ ಮಂಗಳೂರು, ತಪಸ್ಯಾ ಕಟೀಲು, ಶಾರ್ವಿ ಮಂಗಳೂರು, ಪೂರ್ವಿ ಕಟೀಲು, ಸಾನ್ವಿ ಮಂಗಳೂರು, ರಚನ್ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು.

ಪದ್ಮಶ್ರೀ ಭಟ್ ಹಾಗೂ ವಿವೇಕ್ ಪ್ರಭು ಅವರ ಹುಟ್ಟುಹಬ್ಬ ಆಚರಿಸಲಾಯಿತು. ಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ವಾಯ್ಸ್ ಆಫ್ ಆರಾಧನ ತಂಡದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ, ಆರಾಧನಾ ಭಟ್,  ದೇವಿಪ್ರಸಾದ್ ಶೆಟ್ಟಿ, ಪ್ರಸಾದ್ ಉಡುಪಿ. ವಿವೇಕ್ ಪ್ರಭು ನಿಡ್ಡೋಡಿ ರಾಕೇಶ್ ಪೊಳಲಿ, ಪದ್ಮಶ್ರೀ ಭಟ್ ನಿಡ್ಡೋಡಿ,ಆಮಂತ್ರಣ  ಪರಿವಾರದ ವಿಜಯ ಕುಮಾರ್ ಜೈನ್,ಸ್ನೇಹಲತಾ ಪೊನ್ನಗಿರಿ, ಶ್ರೀಕಾಂತ್ ಭಟ್ ಪೊನ್ನ ಗಿರಿ, ಬಾಬು ಮಂಗಳೂರು,ದಿನೇಶ್  ಕಟೀಲು, ಸುಕುಮಾರ್  ಹಾಗೂ ಆರದಿರಲಿ ಬದುಕು ಆರಾಧನಾ ಹಾಗೂ ವಾಯ್ಸ್ ಆಫ್ ಆರಾಧನಾ ಪೋಷಕರು ಉಪಸ್ಥಿತಿ ತರಿದ್ದರು. ಮಜಾಭಾರತ ಖ್ಯಾತಿಯ ಆರಾಧನಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು