11:06 AM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ಮಹಾನ್ ನಟ ಶಿವಾಜಿ ಗಣೇಶನ್ 93ನೇ ಜನ್ಮದಿನ: ಗೂಗಲ್ ಡೂಡಲ್ ಗೌರವ: ಬೆಂಗಳೂರು ಕಲಾವಿದನಿಂದ ರಚನೆ

01/10/2021, 11:07

ಮನೀಶ್ ಕೃಷ್ಣ ಕಲ್ಲಡ್ಕ ಮಂಗಳೂರು

info. reporterkarnataka@gmail.com

ಭಾರತೀಯ ಚಿತ್ರರಂಗದ ಮಹಾನ್ ನಟ ಶಿವಾಜಿ ಗಣೇಶನ್ ಅವರ 93ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ಅವರನ್ನು ನೆನಪಿಸಿಕೊಂಡಿದೆ. ಗೂಗಲ್ ಅವರ ಡೂಡಲ್ ರಚಿಸಿದೆ. ಬೆಂಗಳೂರು ಮೂಲದ ಕಲಾವಿದ ನೂಪುರ ರಾಜೇಶ್ ಚೋಕ್ಸಿ ಡೂಡಲ್ ರಚಿಸಿದ್ದಾರೆ.

ಅಕ್ಟೋಬರ್ 1, ನಟ ಶಿವಾಜಿ ಗಣೇಶನ್ ಜನ್ಮದಿನ. ಇಂದು ಅವರ 93 ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇದನ್ನು ಗಮನಿಸಿದ ಗೂಗಲ್ ಡೂಡಲ್ ರಚಿಸುವ ಮೂಲಕ ಭಾರತೀಯ ಚಿತ್ರರಂಗದ ಮೇರು ನಟರಲ್ಲೊಬ್ಬರಾದ ಶಿವಾಜಿ ಗಣೇಶ್ ಅವರಿಗೆ ಗೌರವ ಸೂಚಿಸಿದೆ. ನೂಪುರ ರಾಜೇಶ್ ಚೋಕ್ಸಿ ಡೂಡಲ್ ಅನ್ನು ರಚಿಸಿರುವುದು ಗಮನಾರ್ಹ ವಿಷಯವಾಗಿದೆ. ಇವರು ಬೆಂಗಳೂರು ಮೂಲದವರಾಗಿದ್ದಾರೆ.

ಗಣೇಶನ್ ಅವರು ಅಕ್ಟೋಬರ್ 1, 1928ರಂದು ಆಗಿನ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಯ (ಇಂದಿನ ತಮಿಳುನಾಡು) ವಿಲ್ಲುಪುರದಲ್ಲಿ ಜನಿಸಿದರು. ಅವರ ಹೆಸರು

ಗಣೇಶಮೂರ್ತಿ. ತನ್ನ 7ನೇ ವಯಸ್ಸಿನಲ್ಲಿ ಮನೆ ಬಿಟ್ಟು ನಾಟಕ ತಂಡವನ್ನು ಸೇರಿಕೊಂಡರು.

ಡಿಸೆಂಬರ್ 1945ರಲ್ಲಿ, ಗಣೇಶಮೂರ್ತಿ ಅವರು “ಶಿವಾಜಿ ಕಂದ ಹಿಂದೂ ರಾಜ್ಯಂ” ಎಂಬ ನಾಟಕದಲ್ಲಿ ಮರಾಠ ದೊರೆ ಶಿವಾಜಿ ಪಾತ್ರ ನಿರ್ವಹಿಸಿದರು. ಆ ನಾಟಕದಲ್ಲಿ ಶಿವಾಜಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು. ತಮಿಳುನಾಡಿನುದ್ದಕ್ಕೂ ಅವರ ಅಭಿನಯ

ಮನೆಮಾತಾಯಿತು. ಗಣೇಶ ಮೂರ್ತಿ ರಾತ್ರಿ ಬೆಳಗಾಗುವುದರೊಳಗೆ ಶಿವಾಜಿ ಗಣೇಶನ್ ಆದರು.ಜೀವನದುದ್ದಕ್ಕೂ ಅದೇ ಹೆಸರಿನಿಂದ ಕರೆಯಲ್ಪಟ್ಟರು.ನಂತರ ಅವರು ತಮಿಳು ಚಿತ್ರರಂಗ ಪ್ರವೇಶಿಸಿದರು.

ಅಲ್ಲಿ ಸಕ್ರಿಯರಾದರು. 1952 ರಲ್ಲಿ “ಪರಾಶಕ್ತಿ” ಯಲ್ಲಿ ಪಾದಾರ್ಪಣೆ ಮಾಡಿದರು, ಗಣೇಶನ್ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಮುಂತಾದ ಭಾಷೆಗಳಲ್ಲಿ ಸೇರಿದಂತೆ ಸುಮಾರು 300 ಚಿತ್ರಗಳಲ್ಲಿ ಅಭಿನಯಿಸಿದರು. 5 ದಶಕಗಳ ವೃತ್ತಿಜೀವನದಲ್ಲಿ, ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದರು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಈಜಿಪ್ಟ್‌ನ ಕೈರೋದಲ್ಲಿ ಆಫ್ರೋ-ಏಷ್ಯನ್ ಚಲನಚಿತ್ರೋತ್ಸವ) ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು.1960 ರ ನಟನೆಗಾಗಿ ಗೆದ್ದರು. ವೀರ ಪಾಂಡಿಯಾ ಕಟ್ಟಬೊಮ್ಮನ್ ಅವರ ಜನಪ್ರಿಯ ಚಿತ್ರಗಳಲ್ಲೊಂದು.

ಇತ್ತೀಚಿನ ಸುದ್ದಿ

ಜಾಹೀರಾತು