12:34 PM Friday7 - November 2025
ಬ್ರೇಕಿಂಗ್ ನ್ಯೂಸ್
ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್…

ಇತ್ತೀಚಿನ ಸುದ್ದಿ

ದರೋಡೆಕೋರರು… ಬರಬಾರದ ರೋಗ ಬಂದು ಸಾಯತಾರ…!: ವಿಜಯನಗರ ಟ್ರಾಫಿಕ್ ಪೊಲೀಸರಿಗೆ ಮಹಿಳೆಯ ಹಿಡಿಶಾಪ!!

24/09/2021, 11:08

ವಿಜಯನಗರ(reporterkarnataka.com) ಜನರ ರೊಕ್ಕತಿನ್ನೋ ದರೋಡೆಕೋರರು (ಲಂಚ ತಿನ್ನೋರು)ಬರಬಾರದ ರೋಗ ಬಂದಾ ಸಾಯತಾರ ಎಂದು ನೊಂದ ಮಹಿಳೆ ಕಣ್ಣೀರಿಟ್ಟು ಶಾಪ ಹಾಕಿದ್ದಾಳೆ.!!

ಇದು ವಿಜಯನಗರ  ಜಿಲ್ಲೆಯ ಬಹುತೇಕ ಕಡೆಯ ಬೈಕ್ ಸೇರಿದಂತೆ ದ್ವಿಚಕ್ರ ವಾಹನ ಹಾಗೂ ಕಾರು ಸವಾರರ ಅಡ್ಡಗಟ್ಟಿ ತಪಾಸಣೆ ನೆಪದಲ್ಲಿ,

ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಮಹಿಳೆಯೊಬ್ಬರು ಶಾಪ ಹಾಕಿದ ಪರಿ.

ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣ  ಕೊಟ್ಟ ನಂತರ ಅವರಿಗೆ ಮಹಿಳೆ ಶಾಪ ಹಾಕಿದ ಪರಿ ಇದು.

ಪೊಲೀಸರು ಕೈ ಅಂತಾರ ರೊಕ್ಕ ಕಸಿತಾರ ಏಳಾರು ಕೇಳಾರು ಯಾರು ಇಲ್ಲ..,ಕೊಡಲಿಲ್ಲ ಅಂದ್ರೆ ಹೊಲಸು ಬೈತಾರ ಎಂದೆಲ್ಲಾ ಬೈಕ್ ಹಿಂಬಂದಿ ಸವಾರಳು ಹೆಸರು ಹೇಳಲು  ಬಯಸದೇ ತನ್ನ ಒಡಲಾಳದ ನೋವನ್ನು ಹೊರ ಹಾಕಿದ್ದಾಳೆ. ಗ್ರಾಮೀಣ ಭಾಗದ ಮಹಿಳೆ ಪೊಲೀಸರಿಗೆ ಹಿಡಿಶಾಪ ಹಾಕಿದ್ದಾಳೆ. ಅವರು ತನ್ನ ಸಹೋರನ ಜತೆ ಕೂಡ್ಲಿಗಿ ಕಡೆಯಿಂದ ತನ್ನೂರಿಗೆ ತೆರಳುವಾಗ ಪಟ್ಟಣದ ಹೊರವಲಯದಲ್ಲಿ ತಮ್ಮ ಜೀಪನ್ನು ನಿಲ್ಲಿಸಿ ದರೋಡೆಕೊರರಂತೆ ಹಣ ಕಿತ್ತಿದ್ದಾರೆ.

ರಸ್ತೆಯ ಪಕ್ಕ ತಮ್ಮ ಜೀಪ್ ನಿಲ್ಲಿಸಿಕೊಂಡು ರಸ್ತೆಯಲ್ಲಿ ಸಂಚರಿಸುವ ಬೈಕ್ ಗಳನ್ನು ತಡೆದು ತಪಾಸಣೆ ಮಾಡುತ್ತಿದ್ದರೆನ್ನಲಾಗಿದೆ. ತಪಾಸಣೆ ನೆಪಕ್ಕೆ ಮಾತ್ರ ಎಂಬ ಆಭಿಪ್ರಾಯ ಬಹುತೇಕ ಸಾರ್ವಜನಿಕರದ್ದಾಗಿದೆ.

ಈ ನೆಪದಲ್ಲಿ ಬೈಕ್ ಸವಾರರಿಂದ ಹಾಗೂ ಇತರೆ ವಾಹನ ಸವಾರರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡುತ್ತಾರೆ ಎಂಬ ದೂರು ಇದೆ.

ಪೊಲೀಸ್ ಜೀಪ್ ನಲ್ಲಿ ಪೊಲೀಸರು ಇರುತ್ತಾರೆ ಆಷ್ಟೇ ಆದ್ರೆ ಪೊಲೀಸ್ ಅಧಿಕಾರಿಗಳಿರಲ್ಲ, ಬದಲಿಗೆ ಜೀಪ್ ಚಾಲಕರು ಅಥವಾ ಎ ಎಸೈ ಇರುತ್ತಾರೆ ಅಥವಾ ಹೋಂ ಗಾರ್ಡ್ ಇರುತ್ತಾರೆ. ಇದು ಒಂದು ಎರೆಡು ಪೊಲೀಸ್ ಠಾಣೆಯ ದರೋಡೆ ಪೊಲೀಸರ ಕಥೆಯಲ್ಲ, ವಿಜಯನಗರ ಜಿಲ್ಲೆಯ ವ್ಯಾಪ್ತಿಯ ಬಹುತೇಕ ಠಾಣೆಯಲ್ಲಿ ಜರುಗುತ್ತಿರುವ  ಬಹುತೇಕ ದಿನಗಳ ದಿನಚರಿಯಾಗಿದೆ .ಇದನ್ನು ಸ್ವತಃ ಪೊಲೀಸ್ ಇಲಾಖೆಯ  ಠಾಣೆಯ ಪ್ರಾಮಾಣಿಕ ಸಿಬ್ಬಂದಿಯವರು ಹೇಳುವ ಮಾತಾಗಿದೆ. ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ನೊಂದವರು ದೂರು ನೀಡಿದರೆ, ದೂರು ನೀಡಿದವರನ್ನೇ ಟಾರ್ಗೇಟ್ ಮಾಡುತ್ತಾರಂತೆ. ಪ್ರಾರಂಭದಲ್ಲಿ ದೂರು ಹಿಂತೆಗೆದುಕೊಳ್ಳುವಂತೆ ದೂರು ದಾರರನ್ನು ಮನಪರಿವರ್ತನೆ ಮಾಡಲು ಪ್ರಯತ್ನಿಸುತ್ತಾರೆ. ಕೆಲ ಭ್ರಷ್ಟ ಸಿಬ್ಬಂದಿ ತಾವು ಪಕ್ಕಾ ಲೋಕಲ್ಲು ನಮಗೆ ಅವರು ಗೊತ್ತು ಇವರು ಗೊತ್ತಿದ್ದಾರೆ. ಅಧಿಕಾರಿಗಳಿಗೆ ತಾವೇ ಕಲೆಕ್ಷನ್ ಮಾಡಿಕೊಡುತ್ತಿದ್ದು ಕಾರಣ ಕ್ರಮ ಕೈಗೊಳ್ಳಲಾಗಲ್ಲ, ರಾಜಕಾರಣಿಗಳು ತಮ್ಮ ಹುಗುಳು ದಾಟಲ್ಲ ಅದಕ್ಕಾಗಿ ಅವರಿಗೆ ಇಂತಿಷ್ಟು ಕೊಡಲಾಗುತ್ತೆ. ಅಧಿಕಾರಿಗಳಿಗೆ ತಾವು  ವಾಹನಗಳಿಂದ ವಸೂಲಿ ಮಾಡಿದ ಹಣದಲ್ಲಿ ಇಂತಿಷ್ಟು ಪಾಲುಕೊಡಲಾಗುತ್ತದೆ. ಕೆಲವು ಮೀಡಿಯಾಗಳಿಗೂ ಇದರಲ್ಲಿ ಪಾಲಿದೆ. ಇದು ಕೇವಲ ವಿಜಯನಗರ ಜಿಲ್ಲೆ ಒಂದು ತಾಲೂಕಿನ ಕಥೆಯಲ್ಲ. ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗುತ್ತಿರುವ, ಅಖಂಡ ಭ್ರಷ್ಟಾಚಾರ ಕೂಪದ ನೈಜ್ಯ ಚಿತ್ರಣವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು