3:59 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮಸ್ಕಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ  ಕೊರೊನಾ ಟಾಸ್ಕ್ ಫೋರ್ಸ್ ಸಭೆ: ಗ್ರಾಮಸ್ಥರಿಗೆ ಮಾಹಿತಿ

24/05/2021, 18:45

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಆದೇಶದಂತೆ ಮಸ್ಕಿ ತಾಲೂಕಿನ ಮೆದಿಕಿನಾಳ, ತಲೆಕಾನ್, ಮಾರಲದಿನ್ನಿ, ಅಡವಿಭಾವಿ, ಮಸ್ಕಿ, ಹಾಲಾಪುರ, ಸಂತೆಕೆಲ್ಲೂರು, ಗುಡದೂರು, ಉದ್ಬಾಳ, ಗೌಡನಬಾವಿ, ತೋರಣದಿನ್ನಿ, ಹಿರೆದಿನ್ನಿ , ಮಲ್ಲದಗುಡ್ಡ, ಗುಂಡ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಸೋಮವಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಭೆ ಸಂಪೂರ್ಣವಾಗಿ ನೆರವೇರಿತು. 

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮ್ಮುಖದಲ್ಲಿ ಕಾರ್ಯಕ್ರಮ ಆರಂಭಿಸಲಾಯಿತು. ಆರೋಗ್ಯ ಇಲಾಖೆ ವೈದ್ಯಾಧಿಕಾರಿ, ಮೇಲ್ವಿಚಾರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 ಈ ಎರಡನೇ ಅಲೆ ಪ್ರತಿ ಗ್ರಾಮಗಳಲ್ಲಿ ಹೆಚ್ಚಾಗಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದು, ಯಾರಿಗಾದರೂ ಕೆಮ್ಮು ನಗಡಿ ಜ್ವರ ಬಂದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಚಿಕಿತ್ಸೆಗೆ ಒಳಪಡಿಸಿ ಸರಕಾರದ ಆದೇಶದಂತೆ ಜಿಲ್ಲಾ ಆಡಳಿತ ತಾಲೂಕು ಆಡಳಿತದಲ್ಲಿ ನಾವು ಪಂಚಾಯಿತಿ ಮಟ್ಟದ ಸಭೆ ಮಾಡಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸರಕಾರದ ಆದೇಶ ಅವರಿಗೆ ತಿಳಿಸಬೇಕು. ಹೆಚ್ಚಿನ ನಿಗಾವಹಿಸುವುದಾಗಿ ಅಭಿವೃದ್ಧಿ ಅಧಿಕಾರಿ ತಿಳಿಸಿದರು. ಒಂದು ಗ್ರಾಮೀಣ ಮಟ್ಟದಲ್ಲಿ ಯಾರಿಗಾದರೂ ಕೋರೋನಾ ಕಾಣಿಸಿಕೊಂಡರು ಅವರು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಮುತ್ತಿಡುವುದರಿಂದ ಗ್ರಾಮೀಣ ಭಾಗದಲ್ಲಿ ಜಾಸ್ತಿ ಜನರಿಗೆ ಹರಡುವ ಸಾಧ್ಯತೆಯಿದ್ದು, ಅಂತವರನ್ನು ಕೋವಿಡ್ ಸೆಂಟರಿಗೆ ತಿಳಿಸಿಕೊಡಲಾಗುವುದು. ಅವರಿಗೆ ಅಲ್ಲಿ ಎಲ್ಲಾ ಸೌಕರ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಾಮಾಜಿಕ ಅಂತರ ಕಾಪಾಡುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸ ಜೀವ ರಕ್ಷಿಸಿ ಕೊಳ್ಳಬೇಕು. ಸ್ಯಾನಿಟರಿ ನಿಂದ ಆಗಾಗ ಕೈ ತೊಳೆಯ ಎಂದು ಹೇಳಿದರು.

 ಈ ಸಂದರ್ಭ ದಲ್ಲಿ ಊರಿನ ಮುಖಂಡರು, ಪೋಲಿಸ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಣ್ಣ ಬೋವಿ, ಸುರೇಶ್ ಪಾಟೀಲ್, ಕನಳ ತಿಮ್ಮನಗೌಡ ಪಾಟೀಲ್ 

ಹಡಗಲಿ, ಕೃಷ್ಣ ಹುನಗುಂದ, ಮುದುಕಪ್ಪ, ಅಭಿವೃದ್ಧಿ ಅಧಿಕಾರಿ ಶರಣೆ ಗೌಡ, ಅಂದ್ರಾ ಳ ಮಂಜುನಾಥ್ , ಜಾವೂರ್ ಲಕ್ಷ್ಮಿ ಕಾಂತ್ ಮೆದಿಕಿನಾಳ, ಮಲ್ಲಿಕಾರ್ಜುನ್ ಗುಡದೂರು, ಸಂದೇಶ್ ಮಲ್ಲದಗುಡ್ಡ, ಬಸವಲಿಂಗಪ್ಪ ಗೌಡ, ಹೊಸ ಗೌಡ, ವಿಜಯಶ್ರೀ ಬೋವಿ ಸೇರಿದಂತೆ ಇನ್ನಿತರರು ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಂಕುಶದೊಡ್ಡಿ ಟಾಸ್ಕಪೊರ್ಸ ಸಭೆ ಯಶಸ್ವಿಯಾಗಿ ಜರುಗಿಸಲಾಯಿತು . ಸರಕಾರದ ಆದೆಶವನ್ನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜರುಗಿಸಲು ಎಲ್ರು ಮುಂದಾಗಬೆಕು ತಿಳಿಸಲಾಯಿತು. ಎಲ್ಲ ಟಾಸ್ಕಪೊರ್ಸ ಸದಸ್ಯರಿಗಳಿಗೆ ಸ್ಯಾನಿಟೈಜರ್ ಹಾಗೂ ಎನ್ 95
ಮಾಸ್ಕ್ ತರಿಸಲಾಯಿತು. 

ಇತ್ತೀಚಿನ ಸುದ್ದಿ

ಜಾಹೀರಾತು