5:00 AM Wednesday24 - December 2025
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:… ಮೂಡಿಗೆರೆ ತಾಪಂ ಇಒ ದರ್ಬಾರ್‌: ಸರ್ಕಾರಿ ಜೀಪ್‌ ಖಾಸಗಿಯಾಗಿ ದುರ್ಬಳಕೆ; ನಿತ್ಯ 60… ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ!

ಇತ್ತೀಚಿನ ಸುದ್ದಿ

ಅಂತರಗಂಗೆಯಲ್ಲಿ ಹೊಸ ದ್ಯಾವಮ್ಮ ಮೂರ್ತಿ  ಪ್ರತಿಷ್ಠಾಪನೆ: ಗ್ರಾಮಸ್ಥರಿಂದ ಭವ್ಯ ಮೆರವಣಿಗೆ

26/08/2021, 10:45

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಹಿರೇ ಅಂತರಗಂಗೆ ಗ್ರಾಮದಲ್ಲಿ ದ್ಯಾಮಮ್ಮ ಹೊಸ ಮೂರ್ತಿಯನ್ನು ಇಲಕಲ್ಲದಿಂದ ಬಾರಿ ವಿಜ್ರಂಭಣೆಯಿಂದ ಕಳಸ ಕನ್ನಡಿ, ಭಜನೆ ಬಾಜಿ ಡೊಳ್ಳು ಸಡಗರ ಸಂಭ್ರಮದಿಂದ ಅಂತರಗಂಗೆಗೆ ತರಲಾಯಿತು.

ಸುತ್ತಮುತ್ತಲ ಗ್ರಾಮಗಳಾದ ಮ್ಯಾದರಾಳ ಹಟ್ಟಿ , ಮೆದಿಕಿನಾಳ, ಬೈಲ್ ಗುಡ್ಡ, ನಾಗರಬೆಂಚಿ, ಅಂತರಗಂಗೆ ತಾಂಡಾ ಗ್ರಾಮಸ್ಥರಿಂದ ಟ್ರ್ಯಾಕ್ಟರ್ ನಲ್ಲಿ ಭವ್ಯ ಮೆರವಣಿಗೆ ಮೂಲಕ ಜೈಕಾರ ಹಾಕುತ್ತಾ ದ್ಯಾಮಮ್ಮ ಮೂರ್ತಿಯನ್ನು ತರಲಾಯಿತು.
ದ್ಯಾಮಮ್ಮ ದೇವಿಗೆ ಪಾರ್ವತಮ್ಮ ಕಾವಲಿ ಅವರ ಪೂಜಾರಿಯಾಗಿದ್ದು, ಅವರು ನಿಧನ ಬಳಿಕ ಅವರ ಕುಟುಂಬದವರ ಸೊಸೆ ಗುಡಿ ಪೂಜೆ ಪೂಜಾರಿ ವ್ಯವಸ್ಥೆಯ ನೋಡಿಕೊಂಡು ಬರುತ್ತಿದ್ದಾರೆ. ದೂರದ ಊರಾದ ಬಳ್ಳಾರಿ, ಸಿರುಗುಂಪ, ದಢೆಸುಗುರ್,ಮುದುಗಲ್,ಲಿಂಗಸುಗೂರು ಮುಂತಾದ ಕಡೆಗಳಿಂದ ಭಕ್ತರು ದ್ಯಾಮಮ್ಮ ಗುಡಿಗೆ ದರ್ಶನ ಮಾಡಲು ಆಗಮಿಸುತ್ತಾರೆ. ಕುಷ್ಟಗಿ ಶಾಸಕರು ಅಮರೇಗೌಡ ಪಾಟೀಲ್ ಬಯ್ಯಪೂರ್ ಅನುದಾನದಲ್ಲಿ ಗುಡಿ ಕಟ್ಟಡ ನಿರ್ಮಿಸಲಾಗಿದೆ. ಮಾಜಿ ಶಾಸಕ ಪ್ರತಾಪ ಗೌಡರು ಅನುದಾನ ಕೊಟ್ಟಿದ್ದರು. 

ಮಂಗಳಾರತಿ, ಭಜನೆ, ಡೊಳ್ಳು ಕುಣಿತದೊಂದಿಗೆ ಅಮ್ಮನನ್ನು ಗುಡಿ ಒಳಗೆ ಕರೆತರಲಾಯಿತು. ಭಕ್ತರು ಸುತ್ತಮುತ್ತಲಿನ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಗುರಪ್ಪ ಗೋಮರ್ಸಿ, ವೀರೇಶ್ ಚಿಕ್ಕ ಅಂತರಗಂಗೆ ಗವಿಯಪ್ಪ ಗೌಡ, ದುರ್ಗಣ್ಣ ಕುರ್ಲಿ,ಈರಣ್ಣ ಕುರ್ಲಿ , ವಾಲ್ಮೀಕಿ ಸಮಾಜ ಯುವ ಮಿತ್ರರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು