6:26 PM Sunday13 - July 2025
ಬ್ರೇಕಿಂಗ್ ನ್ಯೂಸ್
Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಇತ್ತೀಚಿನ ಸುದ್ದಿ

ಆಗಸದಲ್ಲಿ ಚಂದ್ರನ ಹುಡುಕುತ್ತಿದ್ದವರಿಗೆ ಕಾಣಿಸಿದ್ದು ಬೆಂಕಿಯ ಜ್ವಾಲೆ!:  ಏನಿದು ಜಲ್ವಿಸುತ್ತಾ ಹಾದು ಹೋಗಿದ್ದು?.!!

03/04/2022, 12:17

ಮಂಗಳೂರು(reporterkarnataka.com) ದೇಶದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇದರ ನಡುವೆ ಮಹಾರಾಷ್ಟ್ರದ ಬಹುತೇಕ ಜಿಲ್ಲೆಗಳಲ್ಲಿ ಬೆಂಕಿಯ ಜ್ವಾಲೆಯೊಂದು ಸುಮಾರು ಹೊತ್ತು ಆಕಾಶದಲ್ಲಿ ಸಾಗಿದೆ.ಇದನ್ನ ಕಂಡವರು ಧೂಮಕೇತು ಇರಬೇಕು, ಹಬ್ಬದ ದಿನ ಅನಿಷ್ಟ ಕಂಡಂತಾಯ್ತು ಎಂಬಂತೆ ಮಾತನಾಡಿಕೊಂಡಿದ್ದಾರೆ.

ಬಳಿಕ ಅದು ಉಲ್ಕಾಪಾತ ಎಂದು ಹೇಳುವಂತಹ ಮಾತುಗಳು ಆರಂಭವಾಗಿದೆ. ಆದರೆ ಉಲ್ಕಾಪಾತದ ಬಣ್ಣ ಈ ರೀತಿಯಲ್ಲಿ ಇರುವುದಿಲ್ಲ ಎಂಬ ವಾದಗಳಿವೆ.

ಮಹಾರಾಷ್ಟ್ರ ಮಧ್ಯಪ್ರದೇಶದ ಭಾಗಗಳಲ್ಲಿ ಈ ಬೆಂಕಿ ವಿಸ್ಮಯ ಕಂಡು ಬಂದಿದೆ. ವಿಶೇಷ ಅಂದರೆ ತೀರಾ ಹತ್ತಿರದಲ್ಲಿ ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಇನ್ನೂ ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಉಲ್ಕಾಪಾತವಾಗಿರದೇ ಚೈನಾ 2021 ರಲ್ಲಿ ಆಕಾಶಕ್ಕೆ ಹಾರಿಬಿಟ್ಟ ರಾಕೆಟ್​ನ ಅವಶೇಷಗಳು ಆಗಿರಬಹುದು ಎನ್ನಲಾಗುತ್ತಿದೆ.

ಮತ್ತೆ ಕೆಲವರು ಯಾವುದೋ ರಾಷ್ಟ್ರದ ಸ್ಯಾಟಲೈಟ್ ಭೂಕ್ಷಕ್ಷೆಗೆ ಬಂದು, ಉರುಳುತ್ತಿರುವ ದೃಶ್ಯ ಇದಾಗಿರಬಹುದು ಎನ್ನಲಾಗುತ್ತಿದೆ.

ಇನ್ನೂ ಇದಕ್ಕೆ ಸಂಬಂಧಿಸಿದಂತೆ ಇದು ರಾಕೆಟ್ ಒಂದರ ಅವಶೇಷವಾಗಿದ್ದು, ಇದು ನೆಲಕ್ಕೆ ಬಿದ್ದು ಉಳಿದ ಪಾರ್ಟ್​ಗಳನ್ನ ಸ್ಥಳೀಯವಾಗಿ ನೋಡಿದವರು ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು