ಇತ್ತೀಚಿನ ಸುದ್ದಿ
ಆರದಿರಲಿ ಆರಾಧನಾ ಸಂಸ್ಥೆ: ಅಕ್ಟೋಬರ್ ತಿಂಗಳ ಸಹಾಯ ಮಂಗಳೂರಿನ ಪುಷ್ಪಾ ಕುಟುಂಬಕ್ಕೆ ಹಸ್ತಾಂತರ
06/11/2022, 22:00

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯ ಅಕ್ಟೋಬರ್ ತಿಂಗಳ ಸಹಾಯವನ್ನು ಅಸ್ತಮಾ ಹಾಗೂ ಬಿಪಿಯಿಂದ ಬಳಲುತ್ತಿರುವ ಮಂಗಳೂರಿನ ಪುಷ್ಪಾ ಅವರ ಕುಟುಂಬಕ್ಕೆ ನೀಡಲಾಯಿತು.
ಪುಷ್ಪಾ ಅವರ ಪರವಾಗಿ ಅವರ ಪುತ್ರಿ ಸುಜಾತಾ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಪದ್ಮಶ್ರೀ ಭಟ್ ನಿಡ್ಡೋಡಿ, ಡಾ.ನಾಗರಾಜ ಶೆಟ್ಟಿ ಅಂಬೂರಿ, ದೇವಿಪ್ರಸಾದ್ , ದೀನ್ ರಾಜ್ ಕೆ., ಅಭಿಷೇಕ್ ಶೆಟ್ಟಿ ಐಕಳ, ಬಸವ ರಾಜ್ ಮಂತ್ರಿ, ಶ್ರೀನಿವಾಸ ಬಜಪೆ, ಪ್ರಸಾದ್ ನಾಯಕ್ ಉಡುಪಿ, ನವೀನ್ ಪುತ್ತೂರು, ಗಣೇಶ್ ಪೈ, ವಿವೇಕ್ ಪ್ರಭು, ಧನಂಜಯ ಶೆಟ್ಟಿ, ಪ್ರವೀಣ್ ಶೆಟ್ಟಿ, ಲಿಲೇಶ್ ಶೆಟ್ಟಿಗಾರ್, ರಂಗನಾಥ್ ಪಕ್ಷಿ ಕೆರೆ, ದಿನೇಶ್ ಸಿದ್ದಕಟ್ಟೆ, ನಿಲೇಶ್ ಕಟೀಲು, ಪ್ರಭಾಕರ ಮಂಗಳೂರು, ರಾಕೇಶ್ ಪೊಳಲಿ, ಶ್ರೀಕಾಂತ್ ಭಟ್ ಉಪಸ್ಥಿತರಿದ್ದರು.