10:29 PM Saturday7 - March 2026
ಬ್ರೇಕಿಂಗ್ ನ್ಯೂಸ್
ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ

ಆದಿ ಗ್ರಾಮೋತ್ಸವ ಬೆಳ್ಳಿಹಬ್ಬ ಸರಣಿ ಆರಂಭ: ಸದ್ದಿಲ್ಲದ ಸಾಧಕಿ ಶಿರ್ತಾಡಿ ಗಂಗಮ್ಮಗೆ ಗೌರವ

19/03/2023, 21:09

ಅಜೆಕಾರು(reporterkarnataka.com): ಸದ್ದಿಲ್ಲದ ಸಾಧಕಿ,ಜ್ಯೋತಿಷಿ, ಸಮಾಜ ಮುಖಿ ಚಿಂತಕಿ ಶಿರ್ತಾಡಿಯ ಗಂಗಮ್ಮ ಸುಬ್ಬರಾವ್ ಅವರಿಗೆ ಅಜೆಕಾರಿನ ಆದಿಗ್ರಾಮೋತ್ಸವ ಬೆಳ್ಳಿ ಹಬ್ಬದ ತುಳುವ ಸಾಧಕರಿಗೆ ನಮ್ಮ ನಮನ ಸರಣಿಯ ಪ್ರತಿಷ್ಠಿತ ಗೌರವವನ್ನು ಶಿರ್ತಾಡಿಯ ಅವರ ನಿವಾಸ ಆಂಗಿರಸದಲ್ಲಿ ಶನಿವಾರ ಪ್ರದಾನಿಸಲಾಯಿತು.

ಹಿರಿಯ ಸಾಧಕರನ್ನು ಹುಡುಕಿ ನಡೆಸುವ ಇಂತಹ ಕಾರ್ಯಕ್ರಮಗಳು ಪ್ರಶಂಸಾರ್ಹ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಹೇಳಿದರು.

ಸಂಕಷ್ಟದಿಂದ ಬದುಕು ಕಟ್ಟಿಕೊಂಡೆ. ತನ್ನ ಮಕ್ಕಳು ಮತ್ತು ಉಳಿದವರ ಮಕ್ಕಳು ಎಂದು ಬೇಧ ಎಣಿಸಲಿಲ್ಲ. ಸರ್ವರ ಒಳಿತಿಗಾಗಿ ಯೋಚಿಸಿದರೆ ನೆಮ್ಮದಿಯ ಬದುಕು ಬದುಕುವುದು ಸಾಧ್ಯ ಎಂದು ಗಂಗಮ್ಮ ನುಡಿದರು.
ಗಂಗಮ್ಮ ಅವರು ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡರು. ವಿನೂತನ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಅಜೆಕಾರು ಸಾಧನೆ ಮಾಡಿದ್ದಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಅಭಿಪ್ರಾಯ ಪಟ್ಟರು.
ನಮ್ಮ ಗ್ರಾಮದ ಹಿರಿಯರನ್ನು ಆದಿಗ್ರಾಮೋತ್ಸವ ಸಮಿತಿ ಗುರುತಿಸಿದ್ದು ಹೊಸ ಯೋಚನೆಗಳಿಗೆ ಸ್ಪೂರ್ತಿ ನೀಡಿದಂತಾಗಿದೆ ಎಂದು ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹೇಳಿದರು.
ಬೆಳ್ಳಿ ಹಬ್ಬ ಸಂಚಾಲಕ, ಆದಿಗ್ರಾಮೋತ್ಸವದ ರೂವಾರಿ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಮಂದಾರ ರಾಜೇಶ ಭಟ್, ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಸಾಣೂರು ಅರುಣ್ ಶೆಟ್ಟಿಗಾರ್, ವಾಲ್ಪಾಡಿ ಕ್ರಿಕೆಟರ್ಸ್ ಅಧ್ಯಕ್ಷ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಪದ್ಮಶ್ರೀ ನಿಡ್ಡೋಡಿ ಅತಿಥಿಗಳಾಗಿದ್ದರು. ಉಪನ್ಯಾಸಕ ಶ್ರೀಕಾಂತ್ ಹೊಳ್ಳ ಅವರು ಕುಟುಂಬದ ಪರವಾಗಿ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಸೋಮಶೇಖರ ಮಯ್ಯ ಸ್ವಾಗತಿಸಿದರು. ಅರ್ಚಿತ್ ಕಶ್ಯಪ್,ಅನನ್ಯ ಉಡುಪ, ಶ್ರೀವಾಣಿ ಮಯ್ಯ, ಶಿವಾನಿ, ಶರ್ವಾಣಿ ಕಾರ್ತಿಕ್, ಪ್ರದ್ಯುಮ್ನ ತಮ್ಮ ಹಾಡುಗಳ ಮೂಲಕ ರಂಜಿಸಿದರು. ಶಿಕ್ಷಕಿ ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಕವಯತ್ರಿ ಮಾನಸ ಪ್ರವೀಣ್ ಭಟ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು