ಇತ್ತೀಚಿನ ಸುದ್ದಿ
ಅದ್ಯಪಾಡಿ ಬೈಲುಬೀಡಿನ ಬಳಿ ಬಿರುಕು ಬಿಟ್ಟ ರಸ್ತೆ ; ಘನ ವಾಹನ ಸಂಚಾರ ನಿಷೇಧ
16/06/2025, 14:19

ಬಜಪೆ (reporterkarnataka.com)
ಚಿತ್ರಗಳು : ಪ್ರಸಾದ್ ಕೊಳಂಬೆ
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನ ಬಜಪೆ ಅದ್ಯಪಾಡಿ ಸಮೀಪದ ಬೈಲುಬೀಡಿನ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರಕ್ಕೂ ತೊಡಕು ಉಂಟಾಗಿದೆ.
ಅದ್ಯಪಾಡಿಗೆ ಬಜಪೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಜನರು ಅನ್ಯ ಮಾರ್ಗವನ್ನು ಅವಲಂಬಿಸುವಂತಾಗಿದೆ. ಜತೆಗೆ ಕೈಕಂಬ ಮೂಲಕ ಮೂಡುಕೆರೆ ಬಜಪೆಗೆ ಸಾಗುವವರಿಗೆ ಸಂಕಷ್ಟ ಉಂಟಾಗಿದೆ.
ಸಮೀಪದ ಗುಡ್ಡದ ಮೇಲಿನ ಮರಗಳನ್ನು ಕಡಿಯಲಾಗಿದ್ದು, ನೀರು ಹರಿಯುವಾಗ ಮಣ್ಣಿನ ಸವಕಳಿಯ ಜತೆಗೆ ನೆಲಕ್ಕೂ ನೀರು ಇಂಗಿ ಒಳಭಾಗದಲ್ಲಿ ಹರಿವಿನಿಂದಾಗಿ ರಸ್ತೆಯೂ ಬಿರುಕು ಬಿಟ್ಟಿರಬಹುದು ಎನ್ನಲಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಏರ್ಪೋರ್ಟ್ ಮೇಲೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಿಮಾನ ನಿಲ್ದಾಣದಿಂದ ಹರಿಯಬಿಡುತ್ತಿರುವ ನೀರಿನಿಂದ ಹೀಗಾಗುತ್ತಿದೆ ಎನ್ನಲಾಗುತ್ತಿದೆ.