5:54 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ದುರುಗಮ್ಮ ದೇವರಿಗೆ ಪೂಜಾ ಪಂಚಾಮೃತ ಅಭಿಷೇಕ, ಕುಂಕುಮ ಅಲಂಕಾರ: ಕೊರೊನಾ ತೊಲಗಲು ಪ್ರಾರ್ಥನೆ 

31/08/2021, 20:11

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಶ್ರಾವಣ ಪ್ರಯುಕ್ತ ಕೂಡ್ಲಗಿಯ ಜಂಗಮಸೋವೇನಹಳ್ಳಿ ಗ್ರಾಮದ ಅಧಿದೇವತೆ ಶ್ರೀ ದುರುಗಮ್ಮ ದೇವರಿಗೆ ಮಂಗಳವಾರ ಪೂಜಾ ಪಂಚಾಮೃತ ಅಭಿಷೇಕ, ಕುಂಕುಮ ಅಲಂಕಾರ ಮಾಡಲಾಯಿತು.

ಜಘಮಸೋವೇವನಹಳ್ಳಿ ಗ್ರಾಮದ ಭಕ್ತರು ಗ್ರಾಮದ ಅಧಿದೇವತೆ ಶ್ರೀ ದುರುಗಮ್ಮ ದೇವರಿಗೆ ಹೊಳಗೆ ಕರೆದೊಯ್ಯುವ  ಮೂಲಸ್ಥಳ ಗ್ರಾಮದ ಹೊರವಲಯದ ಶಿವಪುರದ ಕಾದಿಟ್ಟ ಅರಣ್ಯ ಪ್ರದೇಶದ ಬೆಟ್ಟದ ಅರಣ್ಯದಲ್ಲಿನ ಪ್ರಕೃತಿ ಹಸಿರ ವನಸಿರಿ ರಮಣೀಯ ರಮ್ಯತಾಣ ಬೆಟ್ಟದ ಮದ್ಯದಲ್ಲಿ ಬಂಡೆಕಲ್ಲಿನಲ್ಲಿ ವಡ ಮೂಡಿರುವ ಶ್ರೀ ದುರಗಮ್ಮ ದೇವತೆಗೆ ವಿಶೇಷ ಪೂಜೆ ನೆರವೇರಿಸಿದರು.

ಪಂಚಾಮೃತ ಅಭಿಷೇಕ ಕುಂಕುಮದ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಬಾಲವೃದ್ದರಾದಿಯಾಗಿ ಭಕ್ತಿ ಸಮರ್ಪಿಸಿ ನಾಡಿಗೆ ಅಂಟಿದ ಕೊರೊನಾ ಮಹಮಾರಿ ತೊಲಗಲಿ ಎಂದು ಪ್ರಾರ್ಥಿಸಿದರು.

ಗ್ರಾಮಕ್ಕೆ ಮಾತ್ರವಲ್ಲ ನಾಡಿಗೆಲ್ಲ ಸಕಾಲಕ್ಕೆ ಉತ್ತಮ ಮಳೆಯಾಗಿ ಉತ್ತಮ ಪಸಲು ಬರಲಿ, ನೆರೆ ಬರ ತೊಲಗಲಿ ಎಂದು ಕೋರಿದರಲ್ಲದೇ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಆರ್ಶೀವಾದ ಪಡೆದು ದನ್ನತೆ ಮರೆದರು. ನಂತರ ಭಕ್ತರೆಲ್ಲಾ ಅರಣ್ಯದ ಹಸಿರಿನ ಪ್ರಕೃತಿಯ ಸಿರಿಯಲಿ ಸಾಮೂಹಿಕವಾಗಿ ಮಹಾ ಪ್ರಾಸದ ಸವಿದರು. ಈ ಮೂಲಕ ಜಂಗಮಸೋವೇನಹಳ್ಳಿ ಗ್ರಾಮಸ್ಥರು ಶ್ರೀ ದುರುಗಮ್ಮ ದೇವಿಗೆ ಭಕ್ತಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ಗ್ರಾಮದ ಹಿರಿಯರು ಹಾಗೂ ಯುವಕರು ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು