ಇತ್ತೀಚಿನ ಸುದ್ದಿ
ಮಡಿಕೇರಿ ದಸರಾ ಕಲಾ ವೇದಿಕೆಯಲ್ಲಿ ದಾಂಧಲೆ ಪ್ರಕರಣ: 3 ಮಂದಿ ವಿರುದ್ಧ ಮೊಕದ್ದಮೆ; ಉಳಿದವರನ್ನು ಪತ್ತೆಹಚ್ಚಲು ಪೊಲೀಸರಿಂದ ಕ್ರಮ
05/10/2025, 12:54

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ದಸರಾ ಕಲಾ ವೇದಿಕೆಯಲ್ಲಿ ದಾಂಧಲೆ ನಡೆಸಿ ಸೊತ್ತುಗಳ ಹಾನಿಪಡಿಸಿದ ಪ್ರಕರಣ ಸಂಬಂಧಿಸಿದಂತೆ ಮೂವರ ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಉಳಿದವರನ್ನು ಪತ್ತೆಹಚ್ಚಲು ಪೊಲೀಸರು ಕ್ರಮಕೈಗೊಂಡಿದ್ದಾರೆ.
ಮಡಿಕೇರಿಯ ದಸರಾ ಕಲಾ ವೇದಿಕೆಯಲ್ಲಿ ಬಹುಮಾನ ವಿತರಣೆ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿ ವೇದಿಕೆ ಏರಿ “ಮೋಸ.. ಮೋಸ” ಎಂದು ಘೋಷಣೆ ಕೂಗಿ ಅಲ್ಲಿದ್ದ ಪೊಡಿಯಮ್, ಎಲ್.ಇ.ಡಿ, ಧ್ವನಿವರ್ಧಕ, ಲೈಟ್ ಗಳನ್ನು ಹೊಡೆದು ಹಾಕಿ ಹಾಗೆ ಬಹುಮಾನಕ್ಕೆ ಇಟ್ಟ ಚಿನ್ನ ಹಾಗೂ ಬೆಳ್ಳಿಯ ಬಹುಮಾನಗಳನ್ನು ವೇದಿಕೆಯಿಂದ ಕೆಳಗೆ ಬಿಸಾಕಿ, 150 ಕುರ್ಚಿಗಳನ್ನು ಹಾನಿಪಡಿಸಿ ಒಟ್ಟು ಎರಡು ಲಕ್ಷ ರೂಪಾಯಿ ಎಷ್ಟು ನಷ್ಟ ಪಡಿಸಿರುವ ಹಿನ್ನೆಲೆಯಲ್ಲಿ ಪವನ್ ಕುಮಾರ್ ಕೆ.ಆರ್, ವಿನೋದ್ ಕಾರ್ಯಪ್ಪ ಸುಹಾಸ್ ಶೆಟ್ಟಿ, ಮೇಲೆ ಪೊಲೀಸರು ಬಿ.ಎನ್ ಎಸ್ 292, 324 (5)189(2) ರ ಅಡಿಯಲ್ಲಿ ಮೊಕದಮೆ ದಾಖಲು ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಭಾಗಿಯಾದ ಇತರರನ್ನು ಕೂಡ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ .