4:40 PM Monday23 - March 2026
ಬ್ರೇಕಿಂಗ್ ನ್ಯೂಸ್
ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್… ಮಸ್ಕಿ ಪುರಸಭೆ ಮುಖ್ಯಾಧಿಕಾರಿಗೆ ಹೆಚ್ಚುವರಿ ಹೊಣೆ: ಹೆಚ್ಚುತ್ತಿರುವ ರಸ್ತೆ, ನೀರು, ಸ್ವಚ್ಛತೆ ಸಮಸ್ಯೆ ರಂಗೇರಿದ ದಾವಣಗೆರೆ ಉಪ ಚುನಾವಣೆ ಸಮರ: ಕೈ-ಕಮಲ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ್ ದಾಸಕರಿಯಪ್ಪ ನಾಮಪತ್ರ ಸಲ್ಲಿಕೆ ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು… ಬಾಗಲಕೋಟೆ ಉಪ ಚುನಾವಣೆ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಬಿಸಿಲ‌ ಧಗೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ 25ಕ್ಕೂ ಹೆಚ್ಚು ಕಡೆಯಲ್ಲಿ ಶೋಲಾ ಹುಲ್ಲುಗಾವಲಿಗೆ… Kodagu | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಆಟೋ ಚಾಲಕ ಅರೆಸ್ಟ್

ಇತ್ತೀಚಿನ ಸುದ್ದಿ

Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ ಬೊಂಬೆಗಳ ಆಕರ್ಷಣೆ

03/10/2025, 14:17

ಡಿ.ಎಲ್. ಹರೀಶ್ ಬೆಂಗಳೂರು

info.reporterkarnataka@gmail.com

ದಸರಾ ಎಂದರೆ ವಿಜಯದ ಹಬ್ಬ. ಬಹಳಷ್ಟು ಜನರು ತಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ನವ ದುರ್ಗೆಯರ ಪೂಜೆಯನ್ನು ಮಾಡುತ್ತಾರೆ. ದೇವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಶರನ್ನವರಾತ್ರಿ ಆಚರಿಸುತ್ತಾರೆ. ಆದರೆ ಬೆಂಗಳೂರಿನ ಜೆ.ಪಿ.ನಗರದ ಎರಡನೇ ಹಂತದಲ್ಲಿ ಇರುವ ವೈದ್ಯ ದಂಪತಿ ತಮ್ಮ ಮನೆಯನ್ನು ದೇವಸ್ಥಾನವಾಗಿ ಪರಿವರ್ತಿಸುವ ಮೂಲಕ ವಿವಿಧ ರೀತಿಯ ದಸರಾ ಬೊಂಬೆಗಳನ್ನು ಕೂರಿಸಿ ಹತ್ತು ದಿನಗಳ ಕಾಲ ನೇಮ ನಿಷ್ಠೆ ಶ್ರದ್ಧೆ ವಹಿಸಿ ಪೂಜಿಸಿದ್ದಾರೆ.
ಹೃದ್ರೋಗ ತಜ್ಞರಾದ ಡಾ.ಹೆಚ್.ಎಸ್. ನಟರಾಜ್ ಶೆಟ್ಟಿ ಮತ್ತು ಸ್ಕಿನ್ ಸ್ಪೆಶಲಿಷ್ಟ ಡಾ.ಎ.ಬಿ.ಶಿಲಾ ನಟರಾಜ್ ತಮ್ಮ ಮನೆಯಲ್ಲಿ ಕೂರಿಸಿರುವ ಬೂಂಬೆಗಳು ಒಂದೊಂದು ಕ್ಷೇತ್ರದ ಮೇಲೆ ಬೆಳಕು ಚೆಲ್ಲುತ್ತದೆ.

ಮೈಸೂರು ಅರಮನೆ ದರ್ಬಾರ್ ಹಾಲ್, ಜಂಬೂ ಸವಾರಿ, ಜಟ್ಟಿ ಕಾಳಗ, ರಾಮ, ಲಕ್ಷ್ಮಣ, ಭರತ, ಶತೃಘ್ನ ತೊಟ್ಟಿಲು ಮಕ್ಕಳಾಗಿ ಹುಟ್ಟುವ ಮೂಲಕ ಶುರುವಾಗುವ ರಾಮಾಯಣದ ಕಥೆ ಸೀತಾ ಸ್ವಯಂವರ, ಸೀತಾ ಅಪಹರಣ, ಲಂಕಾಧೀಶ್ವರ ರಾವಣನ ಆಸ್ಥಾನದಲ್ಲಿ ಹನುಮಂತನ ಬಾಲದ ಸಿಂಹಾಸನ, ಅಶೋಕ ವನ, ರಾಮಸೇತು ನಿರ್ಮಾಣ, ರಾವಣನ ಸಂಹಾರ, ‌ಕುಂಭಕರ್ಣನ ಗಾಢವಾಗಿ ನಿದ್ರೆಗೆ ಜಾರಿರುವುದು, ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯ ಹೀಗೆ ಎಲ್ಲವೂ ಒಂದು ರೀತಿಯಲ್ಲಿ ಆಕರ್ಷಿಸುತ್ತದೆ. ಅದರಲ್ಲೂ ವಿಶೇಷವಾಗಿ ಕಾಶಿ ವಿಶ್ವನಾಥನ ಸನ್ನಿಧಿ ಪಕ್ಕದಲ್ಲಿ ಹರಿಯುವ ಗಂಗಾನದಿ. ಅದರ ತಟದಲ್ಲಿರುವ ಹರಿಶ್ಚಂದ್ರ ಘಾಟ್ .ಅಲ್ಲಿ ಮನುಷ್ಯನ ದೇಹವನ್ನು ಸುಡುವ ಚಿತ್ರಣವು ಮಾತ್ರ ಗಮನ ಸೆಳೆಯಿತು. ಮನುಷ್ಯ ಹುಟ್ಟಿನಿಂದ ಮರಣದ ವರಗೆ ಸಾರುವ ಒಂದು ವಿಶಿಷ್ಟವಾದ ಅನುಮತಿ ನೀಡುತ್ತದೆ.

ಹತ್ತನೇ ದಿನ ದುರ್ಗಾದೇವಿ ಮೂರ್ತಿ ಆರಾಧನೆ ಎಲ್ಲರ ಮನ ಸೂರೆಮಾಡುತ್ತದೆ. ಸಾಕ್ಷತ್ ದೇವಿ ಇಲ್ಲಿ ನೆಲೆಸಿದ್ದಾಳೆ ಎಂದು ಭಾಸವಾಗುತ್ತದೆ. ನಿಜಕ್ಕೂ ಬಹಳ ಅರ್ಥಪೂರ್ಣವಾಗಿ ತಿಳಿವಳಿಕೆ ನೀಡುವ ಉದ್ದೇಶದಿಂದಲೇ ದಸರಾ ಹಬ್ಬದ ಸಂದರ್ಭದಲ್ಲಿ ಬೊಂಬೆಗಳನ್ನು ವೈದ್ಯ ದಂಪತಿಗಳು ಕೂರಿಸಿದ್ದಾರೆ ಎನಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು