10:08 PM Thursday5 - March 2026
ಬ್ರೇಕಿಂಗ್ ನ್ಯೂಸ್
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತೃತ, ಹವಾನಿಯಂತ್ರಿತ ಬಿ.ಸಿ. ರೋಡ್ ಶಾಖೆ… ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ…

ಇತ್ತೀಚಿನ ಸುದ್ದಿ

ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ!

19/08/2025, 21:13

ಗಿರಿಧರ್ ಕೊಂಪುಳಿರ ಉಡುಪಿ

info.reporterkarnata@gmaill.com

ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಹುಟ್ಟಿ ಕರಾವಳಿ ಭಾಗದ ತರಕಾರಿ ಸಾಂಬಾರಿಗೆ ಇನ್ನಷ್ಟು ರುಚಿ ತಂದ ಮಟ್ಟು ಬದನೆ, ಅರ್ಥತ್ ಉಡುಪಿ ಬದನೆಗೆ ಶತಮಾನಗಳ ಇತಿಹಾಸವಿದೆ.
ಈ ಬದನೇಕಾಯಿ ಬಗ್ಗೆ ತಿಂದು ಗೊತ್ತಿರಬಹುದೆ ಹೊರತು, ಅದಕ್ಕೆ ಒಂದು 300-400 ವರ್ಷಗಳ ಇತಿಹಾಸವಿದೆ ಎಂದು ಬಳಷ್ಟು ಮಂದಿಗೆ ಗೊತ್ತಿಲ್ಲ, ಅದರಲ್ಲೂ ಉಡುಪಿ ಮಠದ ನಂಟು ಖಂಡಿತ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಹಸಿರು ಬಣ್ಣದ ಚೆಂಡಿನ ಆಕಾರದ ಈ ಬದನೆ ಜೀವ ಪಡೆದದ್ದು ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ. 16ನೇ ಶತಮಾನದಲ್ಲೇ ಕ್ರಾಂತಿ ಮಾಡಿರುವ ಈ ಬದನೇಕಾಯಿ ತಳಿ ತರಕಾರಿ ಸಾಂಬಾರುಗೆ ಅದ್ಭುತ ರುಚಿ ನೀಡುತ್ತಿತ್ತು, ಒಮ್ಮೆ ಉಡುಪಿಯ ಸೋದೆ ಮಠದ ಶ್ರೀ ವಾದಿರಾಜ ತೀರ್ಥರು ಈ ಭಾಗದಲ್ಲಿ ಯಾತ್ರೆ ಮಾಡುತ್ತಿದ್ದ ಸಂದರ್ಭ ಈ ಭಾಗದಲ್ಲಿ ಬೆಳೆಯುವ ಈ ಬದನೆಯ ಪರಿಚಯ ಅವರಿಗಾಯಿತು. ಅಪರೂಪದ ಬದನೆ ತಳಿಯನ್ನು ಹೆಚ್ಚು ಬೆಳೆಸುವಂತೆ ರೈತರಿಗೆ ಪ್ರೋತ್ಸಾಹ ನೀಡಿದರಲ್ಲದೆ ಬೆಳೆಯುವ ಪದ್ಧತಿ ಅರಿತ ಯತಿಗಳು, ಗೊಬ್ಬರ ಈ ಬದನೆಗೆ ಅವಶ್ಯಕತೆ ಇರುವುದರಿಂದ ಉದ್ಯಾವರ ನದಿ ಮತ್ತು ಸ್ವರ್ಣ ನದಿ ತಟದಲ್ಲಿ ಹೆಚ್ಚಾಗಿ ಬೆಳೆಯುವಂತಾಗಲಿ ಎಂದು ರೈತರಿಗೆ ಆಶೀರ್ವದಿಸಿದರಂತೆ, ಅದ್ರಂತೆ ಮಟ್ಟು ಗ್ರಾಮದ ಬ್ರಾಂಡ್ ಆಗಿದ್ದ ಕಾರಣ ಗುಂಡಾಕರ ಈ ಬದನೇಕಾಯಿಗೆ ಮಟ್ಟು ಗುಳ್ಳ (ಗೋಲಾಕಾರ) ಎಂದು ನಾಮಕರಣ ಮಾಡಿದರಂತೆ, ಅದೇ ರೀತಿ ಸುಮಾರು 500 ಎಕರೆಗಳಲ್ಲಿ ಅಂದಿನ ಕಾಲದಲ್ಲೇ ರೈತರು ಬೆಳೆದು ಕ್ರಾಂತಿ ಮಾಡಿದರು ಎಂದು ಎಂದು ಸ್ಥಳೀಯ ಬೆಳೆಗಾರರು ಇಂದಿಗೂ ಹೇಳುತ್ತಾರೆ. ಅದಲ್ಲದೆ ಕೆಲವೆಡೆ ಇಂದಿಗೂ ವಾದಿರಾಜ ಗುಳ್ಳ ಎಂದೂ ಪ್ರಚಲಿತದಲ್ಲಿದೆ.
ವಾದಿರಾಜರು ಸುಬ್ರಮಣ್ಯ ಕ್ಷೇತ್ರಕ್ಕೆ ಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಮಟ್ಟುವಿನಲ್ಲಿ ನಡೆದ ಕೃಷಿ ಕ್ರಾಂತಿ ಕನ್ನಡ ಜಿಲ್ಲೆಗೂ ಮುಟ್ಟುವಂತೆ ಬದನೆಯನ್ನು ಪರಿಚಯಿಸಿದರು. ಅಂದಿನ ವಾದಿರಾಜ ಯತಿಗಳ ಮಟ್ಟು ಬದನೆ ಕೃಷಿ ಕ್ರಾಂತಿಗೆ, 2011ರಲ್ಲಿ ಅಸಾಮಾನ್ಯ ರುಚಿ ಮತ್ತು ವಿಶಿಷ್ಟ ತಳಿ, ಮತ್ತು ವಿಶೇಷ ಸ್ಥಳಕ್ಕೆ ಭೌಗೋಳಿಕ ಸ್ಥಾನ ಮಾನ ದೊರೆತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು