ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣ: ಕೇಸ್ ವಾಪಸ್ ಪಡೆಯುವಂತೆ ಪೊಲೀಸ್ ಇನ್ಸ್ ಪೆಕ್ಟರ್ ನಿಂದ ದೂರುದಾರನಿಗೆ ಬೆದರಿಕೆ?
02/08/2025, 14:36

ಧರ್ಮಸ್ಥಳ(reporterkarnataka.com):ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ಎಸ್ಐಟಿ ತನಿಖೆ ವೇಗದಲ್ಲಿ ನಡೆಯುತ್ತಿದ್ದಂತೆ ಎಸ್ಐಟಿಯಲ್ಲಿರುವ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ದೂರುದಾರನಿಗೆ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ ಎಂಬವರು ದೂರುದಾರನಿಗೆ ದೂರು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ನಿನಗೇ ಶಿಕ್ಷೆಯಾಗುತ್ತದೆ ಎಂದು ಬೆದರಿಸಿದ್ದಾರೆ ಎಂದು ತಿಳಿದು ಬಂದಿದೆ.
“ನಿನ್ನ ದೂರಿನಿಂದ ನಿನಗೇ ಶಿಕ್ಷೆಯಾಗುತ್ತೆ, ಜೀವಮಾನವಿಡೀ ಜೈಲಿನಲ್ಲಿರಬೇಕಾಗುತ್ತೆ. ಪೊಲೀಸರು ನಿನ್ನನ್ನೇ ಅರೆಸ್ಟ್ ಮಾಡ್ತಾರೆ.” ಇತ್ಯಾದಿ ಹೆದರಿಸಿ, ದೂರು ವಾಪಸ್ ಪಡೆಯುವಂತೆ ಇನ್ಸ್ ಪೆಕ್ಟರ್
ಸೂಚಿಸಿದ್ದಾರೆ ಎನ್ನಲಾಗಿದೆ.
ತನಗೆ ದೂರು ಕೊಡುವಂತೆ ಹೊರಗಿನವರು ಪ್ರಚೋದನೆ ಮಾಡಿದರು ಎಂದು ಹೇಳಿಕೆ ಕೊಡುವಂತೆ ಮಾಡಿ ಅದನ್ನೆಲ್ಲಾ ತನ್ನ ಮೊಬೈಲ್ ನಲ್ಲಿ ಇನ್ಸ್ ಪೆಕ್ಟರ್ ಚಿತ್ರೀಕರಿಸಿಕೊಂಡಿದ್ದಾರೆ.
ಸದ್ಯ ಆ ಇನ್ಸಪೆಕ್ಟರ್ ರಜೆಯ ಮೇಲೆ ತೆರಳಿದ್ದಾರೆ ಎನ್ನಲಾಗಿದೆ.
ಈ ಇನ್ಸ್ ಪೆಕ್ಟರ್ ಶಿರಸಿ ಗ್ರಾಮಾಂತರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದಾಗಿ ತಿಳಿದು ಬಂದಿದೆ.
ಈ ಆಘಾತಕಾರಿ ಘಟನೆ ಬಗ್ಗೆ ದೂರುದಾರನ ಪರ ವಕೀಲರು ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ
ಎನ್ನಲಾಗಿದೆ. ಎಸ್ಐಟಿ ಕಡೆಯಿಂದ ಈ ಕುರಿತು ಸ್ಪಷ್ಟೀಕರಣ ಇನ್ನಷ್ಟೇ ಬರಬೇಕಾಗಿದೆ.