3:19 AM Friday16 - January 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.…

ಇತ್ತೀಚಿನ ಸುದ್ದಿ

ಕಾರ್ಕಳ: ಬೆಂಕಿ ಅನಾಹುತ; ಕಂಬಳ ಕೋಣ ಥೊನ್ಸೆ ಮತ್ತು ಅಪ್ಪು ಬಲಿ

31/05/2025, 19:15

ಕಾರ್ಕಳ(reporterkarnataka.com): ಕಾರ್ಕಳ ತಾಲೂಕಿನ ಬೇಲಾಡಿ ಬಾವ ಕೃಷಿಕ ಅಶೋಕ್ ಶೆಟ್ಟಿಯವರ ಕನಹಲಗೆಯ ಎರಡು ಹೆಸರಾಂತ ಕಂಬಳ ಕೋಣಗಳು – ಥೊನ್ಸೆ ಮತ್ತು ಅಪ್ಪು – ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಬೆಂಕಿಗೆ ಬಲಿಯಾಗಿವೆ.


ಈ ಕೋಣಗಳು ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಭಾರಿ ಬಹುಮಾನಗಳನ್ನು ಗೆದ್ದಿದ್ದವು.
ಘಟನೆ ರಾತ್ರಿ ಸಂಭವಿಸಿದ್ದು, ಹತ್ತಿರವಿದ್ದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಅದರ ಬಿಳವಣಿಗೆ ತಡೆಗಟ್ಟಲಾಗಲಿಲ್ಲ. ಹಟ್ಟಿಗೆ ಸೇರ್ಪಡೆಯಾಗಿ ಇದ್ದ ಭತ್ತದ ಬಣವೆಗೆ ಬೆಂಕಿ ಬಿದ್ದ ಕಾರಣ, ಉರಿಯುವ ವ್ಯಾಪ್ತಿ ಹೆಚ್ಚಾಗಿ ಕಟ್ಟಿಹಾಕಿದ್ದ ಕೋಣಗಳ ಸಹಿತವು ಬೆಂಕಿಗೆ ಆಹುತಿಯಾಗಿವೆ.
ಸ್ಥಳೀಯರ ಪ್ರಕಾರ, ಬೆಂಕಿಯ ತೀವ್ರತೆಯಿಂದಾಗಿ ಥೊನ್ಸೆ ಮತ್ತು ಅಪ್ಪು ಸ್ಥಳದಲ್ಲೇ ಸಂಪೂರ್ಣವಾಗಿ ಸುಟ್ಟುಹೋಗಿವೆ. ಈ ಕಂಬಳ ಕೋಣಗಳನ್ನು ಸಾಕಲು ಮಾಲೀಕರಾದ ಅಶೋಕ್ ಶೆಟ್ಟಿ ವರ್ಷಗಳಿಂದ ಶ್ರಮಪಟ್ಟು ಬೆಳೆಸಿದ್ದರು. ಈ ಕಣ್ಮಣಿಗಳ ಸಾವಿಗೆ ಹಳ್ಳಿ ಜನತೆಯಲ್ಲಿ ಆಘಾತ ಮತ್ತು ದುಃಖದ ಛಾಯೆ ಹರಡಿದೆ.
“ಥೊನ್ಸೆ ಮತ್ತು ಅಪ್ಪು ಮಾತ್ರ ಕೋಣಗಳು ಅಲ್ಲ. ಅವು ನಮ್ಮ ಕುಟುಂಬದ ಸದಸ್ಯರಂತಾಗಿದ್ದವು. ಇಂತಹದು ಆಗಲಿದೆ ಅಂತ ಕನಸೂ ಕಂಡಿರಲಿಲ್ಲ,” ಎಂದು ದುಃಖಭರಿತ ಕಂಠದಲ್ಲಿ ಮಾಲಿಕ ಅಶೋಕ್ ಶೆಟ್ಟಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು