ಇತ್ತೀಚಿನ ಸುದ್ದಿ
ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್ ಐಆರ್ ದಾಖಲು
08/05/2025, 19:28

ಬೆಂಗಳೂರು(reporterkarnataka.com): ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಪರಿಸರ ವಿಜ್ಞಾನ ವಿಭಾಗದ ಪ್ರೊಫೆಸರ್ ಒಬ್ಬರಿಗೆ 35 ಲಕ್ಷ ರೂಪಾಯಿ ವಂಚಿದ ಪ್ರಕರಣ ವರದಿಯಾಗಿದೆ.
ಈ ಸಂಬಂಧ ಗೋವಿಂದರಾಜ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ U/s 318 (4) 316(2) 352,351(2) 351 ( 3) ಅಡಿ ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರದಾರರಾದ ಆರ್.ಕೆ.ಸೋಮಶೇಖರ್ ಅವರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಭಾಗದ ಪ್ರೋಪೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸ್ನೇಹಿತರ ಮೂಲಕ 2015 ರಂದು ಪರಿಚಯವಾಗುತ್ತದೆ.
ಬಿ.ಜಿ. ರವಿಕುಮಾರ್ ಅವರು ತಮಗೆ ಸರ್ಕಾರದಲ್ಲಿ ಹಲವಾರು ಪ್ರಭಾವಿ ಸಚಿವರ ಪರಿಚಯವಿದ್ದು, ಆ ಪರಿಚಯದ ಮೂಲಕ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ
ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ನಂಬಿಕೆ ಹುಟ್ಟಿಸುತ್ತಾರೆ. ಅದಕ್ಕೆ 50 ಲಕ್ಷ ರೂಪಾಯಿ ನೀಡಬೇಕಾಗುತ್ತದೆ. ಬಿ.ಜಿ.ರವಿಕುಮಾರ್ ಮಾತು ನಂಬಿದ ಆರ್.ಕೆ.ಸೋಮಶೇಖರ್ ಅವರು ಮೊದಲ ಕಂತಿನಲ್ಲಿ 20 ಲಕ್ಷ ರೂಪಾಯಿ ಹಾಗೂ ಬಂಗಾರಪೇಟೆ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ ಅವರ ಮುಖಾಂತರ 15 ಲಕ್ಷ ರೂಪಾಯಿ ಪಾವತಿರಿಸುತ್ತಾರೆ. ಆದರೆ ಬಿ.ಜಿ.ರವಿಕುಮಾರ್ ಬರವಸೆ ನೀಡಿದಂತೆ
ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಿಲ್ಲ, 2019 ರಂದು ಆರ್.ಕೆ. ಶೇಖರ್ ಅವರು ಸೇವೆಯಿಂದ ನಿವೃತ್ತರಾಗುತ್ತಾರೆ. ಬಿ.ಜಿ.ರವಿಕುಮಾರ್ 35 ಲಕ್ಷ ರೂಪಾಯಿ ವಾಪಾಸ್ ನೀಡದೆ ವಂದಿಸುತ್ತಾರೆ. ಈ ಸಂಬಂದ 05-05-2025 ರಂದು ಆರ್.ಕೆ. ಸೋಮಶೇಖರ್ ಅವರು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಬಿ.ಜಿ.ರವಿಕುಮಾರ್ ವಿರುದ್ದ ದೂರು ದಾಖಲಿಸಿದ್ದಾರೆ.