3:45 AM Tuesday24 - March 2026
ಬ್ರೇಕಿಂಗ್ ನ್ಯೂಸ್
ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ ಕೈಗೆ ಕಂಟಕ? | ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಾದಿಕ್…

ಇತ್ತೀಚಿನ ಸುದ್ದಿ

ಮಾವಿನ ರಾಜಧಾನಿ ಶ್ರೀನಿವಾಸಪುರ ಮತ್ತೆ ಸಜ್ಜು: ಮೇ 15ರಿಂದ ಮಾರಾಟ ಭರ್ಜರಿ ಆರಂಭ

05/05/2025, 20:02

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ದೇಶದ ಅತಿ ದೊಡ್ಡ ಮಾವು ಉತ್ಪಾದನಾ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದಲ್ಲಿನ ಮಾವಿನ ಮಾರುಕಟ್ಟೆ ಈ ವರ್ಷದ ಮೇ 15ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.
ಈಗಾಗಲೇ ತಯಾರಿ ಕಾರ್ಯಗಳು ತೀವ್ರಗೊಂಡಿದ್ದು, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳ ಮಾಲೀಕರು, ರೈತರು ಮತ್ತು ವ್ಯಾಪಾರಸ್ಥರು ಸಜ್ಜಾಗುತ್ತಿದ್ದಾರೆ. ತಾಲೂಕಿನಲ್ಲಿ ಸುಮಾರು 57 ಸಾವಿರ ಎಕರೆ ಭಾಗದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ಶ್ರೀನಿವಾಸಪುರ ‘ಮಾವಿನ ನಾಡು’, ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಪಡೆದಿದೆ. ಇಲ್ಲಿನ ಮಾವಿಗೆ ರಾಜ್ಯದಷ್ಟೇ ಅಲ್ಲದೆ ದೇಶದಾದ್ಯಂತ ಭಾರೀ ಬೇಡಿಕೆ ಉಂಟಾಗಿದೆ. ತೋತಾಪುರಿ, ನೀಲಂ, ರಾಜಗಿರ, ಮಲಿಕಾ‌, ಬಾದಾಮಿ , ಬೇನಿಶ , ಮಲ್ಗೋಬಾ , ಖುದ್ದೂಸ್ , ಶಕರ್ ಬೀಜ್ , ದೇಸರಿ , ಇಮಾಮ್ ಪಸಂದ್ , ಪಾಶಾ ಪಸಂದ್ , ಶೇರಿ , ದಿಲ್ ಪಸಂದ್ , ಖುದಾದತ್ , ಕೆಸರ್ , ಚಿತ್ತೋರ, ನಾಟಿ , ಮುಂತಾದ ಪ್ರಸಿದ್ಧ ಮಾವು ತಳಿಗಳು ಇಲ್ಲಿ ಸಸ್ಯವಾಗುತ್ತವೆ. ಇವುಗಳಲ್ಲಿ ಕೆಲವು ತಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿಯಾಗಿವೆ.
ಇಲ್ಲಿನ ಮಾವುಗಳು ಜಮ್ಮು-ಕಾಶ್ಮೀರ್, ಪಂಜಾಬ್, ಹರಿಯಾಣಾ, ರಾಜಸ್ಥಾನ್, ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ವೆಸ್ಟ್ ಬಂಗಾಳ , ಗೋವಾ, ಕೇರಳ, ಛತ್ತೀಸ್ಗಢ, ಬಿಹಾರ , ತಮಿಳ್ ನಾಡು , ಆಂಧ್ರ ಪ್ರದೇಶ್, ಕೇರಳ ಹಾಗೂ ಇತರ ರಾಜ್ಯಗಳಿಗೆ ನಿತ್ಯ ರವಾನೆಯಾಗುತ್ತವೆ. ಬಾದಾಮಿ, ಮಲಿಕಾ‌, ಬೇನಿಶ ತಳಿಗಳ ಮಾವುಗಳು ದುಬೈ, ಸೌದಿ ಅರೇಬಿಯಾ, ಸಿಂಗಾಪುರ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿವೆ. ಅಲ್ಲದೆ ಇಲ್ಲಿನ ಮಾವಿನಿಂದ ತಯಾರಾಗುವ ಜ್ಯೂಸ್ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳಿಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ.
ಈ ಬಾರಿ ಮೇ 15 ರಿಂದ ಮಾರುಕಟ್ಟೆ ಆರಂಭವಾಗಲಿದ್ದು, ರೈತರು ಹಾಗೂ ವ್ಯಾಪಾರಸ್ಥರಲ್ಲಿ ನೂತನ ಆಶೆಗಳು ಮೂಡಿವೆ. ಮಾರುಕಟ್ಟೆಗಳ ತಯಾರಿ ಕೆಲಸಗಳು ಪೂರ್ಣಗೊಂಡಿದ್ದು, ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿಸಲಾಗುತ್ತಿದೆ. ಪ್ರತ್ಯಕ್ಷ ಖರೀದಿದಾರರು, ಜೈವಿಕ ಉತ್ಪನ್ನ ಹಮ್ಮಿಕೊಳ್ಳುವ ವ್ಯಾಪಾರಸ್ಥರು, ತಾಜಾ ಮಾರುಕಟ್ಟೆ ವ್ಯವಸ್ಥಾಪಕರು ಎಲ್ಲರೂ ತಾವು ತಾವು ಸಜ್ಜಾಗುತ್ತಿದ್ದಾರೆ.
ಈ ಬಾರಿ ಮಾವಿಗೆ ಹವಾಮಾನ ಬೆಂಬಲವಾಗಿಲ್ಲವೋ ಎಂಬ ಅನುಮಾನವಿದ್ದರೂ, ಮಾರುಕಟ್ಟೆ ಆರಂಭವಾದ ಮೇಲೆ ಉತ್ಪಾದನೆಯ ಪೂರ್ಣ ಸ್ಥಿತಿ ಗೊತ್ತಾಗಲಿದೆ. ಕೆಲವೊಂದು ಪ್ರದೇಶಗಳಲ್ಲಿ ಫಲವತ್ತತೆ ಕಡಿಮೆಯಾಗಿದ್ದು, ಇದರಿಂದ ಬೆಲೆಗೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಮಾವು ಬೆಳಗಾರ ಬಿ.ಎ. ಸೈಯದ್ ಫಾರೂಕ್ ಬುರಕಾಯಲಕೋಟೆ ಹೇಳಿದ್ದಾರೆ.
ಎಪಿಎಂಸಿ ಮಾರುಕಟ್ಟೆ ಮಂಡಿಗಳ ಮಾಲೀಕರು ಹಾಗೂ ಖಾಸಗಿ ಮಂಡಿಗಳವರು ಮೇ 15ರಿಂದ ಮಾರುಕಟ್ಟೆ ಆರಂಭವಾಗುತ್ತದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬುದು ಮಾರುಕಟ್ಟೆ ಚಟುವಟಿಕೆ ಪ್ರಾರಂಭವಾದ ನಂತರವೇ ಸ್ಪಷ್ಟವಾಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು