2:24 PM Friday16 - January 2026
ಬ್ರೇಕಿಂಗ್ ನ್ಯೂಸ್
ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಪಾಲಿಕೆ ಅಂತಿಮ ಸಾಮಾನ್ಯ ಸಭೆ: ಆರಂಭದಲ್ಲಿ ಬಿಜೆಪಿ- ಕಾಂಗ್ರೆಸ್ ಸದಸ್ಯರ ನಡುವೆ ಕುಸ್ತಿ, ಜನಪರ ಚರ್ಚೆ ಗೌಣ; ಕೊನೆಗೆ ದೋಸ್ತಿ, ಪರಸ್ಪರ ಆಲಿಂಗನ

27/02/2025, 20:26

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ನಿರಂತರ ಪರಸ್ಪರ ಆರೋಪ- ಪ್ರತ್ಯಾರೋಪ, ವಾಗ್ಯುದ್ಧ, ಹೊರನಡೆದ ಮೇಯರ್, ಕೊನೆಗೆ ಸುಖಾಂತ್ಯ. ಒಬ್ಬರ ಹೆಗಲಿಗೆ ಇನ್ನೊಬ್ಬರು ಕೈಹಾಕಿ ಸಂತೋಷ ವಿನಿಮಯ, ಪರಸ್ಪರ ಆಲಿಂಗ, ಗ್ರೂಪ್ ಫೋಟೋಗೆ ಫೋಸ್…
ಇದು ಇಂದು(ಗುರುವಾರ) ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆಯ ಪ್ರಸಕ್ತ ಆಡಳಿತ ಅವಧಿಯ ಅಂತಿಮ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.


ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಕೊರೊನಾ ಸಂದರ್ಭದಿಂದ ಇಂದಿನವರೆಗೆ ಐದು ವರ್ಷಗಳ ಕಾಲ ಬೇರೆ ಬೇರೆ ಸವಾಲುಗಳ ನಡುವೆ ಮನಪಾದ ಆಡಳಿತ ಪಕ್ಷವಾಗಿ ನಾವು ಉತ್ತಮ ಸೇವೆ ನೀಡಿದ್ದೇವೆ ಎಂದಾಗ ಪ್ರತಿ ಪಕ್ಷದ ಸದಸ್ಯರಿಂದ ವಿರೋಧ ವ್ಯಕ್ತವಾಯಿತು.
ನಿರಾಶ್ರಿತರಿಗೆ ಶಕ್ತಿನಗರದಲ್ಲಿ ನಿರ್ಮಿಸಲು ಯೋಜಿಸಿದ ವಸತಿ ನಿವೇಶನ ಕಾಮಗಾರಿಯನ್ನು ಸಮರ್ಪಕಗೊಳಿಸಲಾಗಿಲ್ಲ, ಒಳಚರಂಡಿ ಅಥವಾ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ನಮ್ಮ ಸರಕಾರ ಇದ್ದ ಸಂದರ್ಭದಲ್ಲಿ ಮಂಗಳೂರಿನ ಶಕ್ತಿ ನಗರದಲ್ಲಿ ನಿರಾಶ್ರಿತರಿಗೆ ವಸತಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು ಆದರೆ ಬಿಜೆಪಿ ಸರಕಾರದ ಆಡಳಿತದಲ್ಲಿ ಅದನ್ನು ಕೈಬಿಡಲಾಯಿತು ಹಾಗೂ ಪೌರಕಾರ್ಮಿಕರಿಗಾಗಿ ನೀಡಲಾಗುತ್ತದೆ ಎಂದರೂ ಅದೂ ಕೂಡ ನಡೆದಿಲ್ಲ. ಈಗ ನಮ್ಮ ಸರಕಾರ ಬಂದಿದೆ ಅದನ್ನು ಮಾಡಿಯೇ ತೀರುತ್ತೇವೆ ಎಂದು ಪ್ರತಿಪಕ್ಷದ ಪ್ರವೀಣ್ ಆಳ್ವ ಗರ್ಜಿಸಿದರು.

ಪಾಲಿಕೆ ಪ್ರತಿಪಕ್ಷದ ನಾಯಕರಾದ ಅನಿಲ್ ಕುಮಾರ್ ಪಂಜಿಮೊಗರು‌, ಪ್ರವೀಣ್ ಚಂದ್ರ ಆಳ್ವ , ಎ.ಸಿ. ವಿನಯರಾಜ್ ಸೇರಿದಂತೆ‌ ಅನೇಕ ಸದಸ್ಯರು ಆಡಳಿತ ಪಕ್ಷದಿಂದ ಜನಾನುಕೂಲ ಕೆಲಸಗಳು ನಡೆದಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭ ಆಡಳಿತ ಪಕ್ಷದ‌ ಸದಸ್ಯರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರಕಾರದಿಂದ ಅನುದಾನಗಳು ಬರುತ್ತಿಲ್ಲ ಹಾಗಾಗಿ ರಾಜ್ಯ ಸರಕಾರಾದೀನ ಕಾಮಗಾರಿಗಳು ಕುಂಠಿತಗೊಂಡಿದೆ ಎಂದು, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಹೇಳಿದರು. ಬಿಜೆಪಿ‌ ಕಾರ್ಪೋರೇಟರ್‌ಗಳಾದ ಜಯಾನಂದ ಅಂಚನ್, ಕಿರಣ್ ಕುಮಾರ್ ಕೋಡಿಕಲ್,ರೇವತಿ,‌ ಶ್ವೇತಾ, ಸಂಗೀತ ನಾಯಕ್ ಸೇರಿದಂತೆ ಇನ್ನೂ ಹಲವು ಬಿಜೆಪಿ ಕಾರ್ಪೋರೇಟರ್‌ಗಳು ಧ್ವನಿಗೂಡಿಸಿದರು.
ತಡವಾಗಿ ಆರಂಭಗೊಂಡ ಮನಪಾ ಸಾಮಾನ್ಯ ಸಭೆ ಈ ಚರ್ಚೆಗಳಿಂದಾಗಿ ಅರ್ಧ ಗಂಟೆಯೊಳಗೆ ಮುಂದೂಡಲ್ಪಟ್ಟಿತು. ಮತ್ತೆ ಆರಂಭಗೊಂಡ ಸಭೆಯಲ್ಲಿ ಮಧ್ಯಾಹ್ನದ ಭೋಜನದ ಅವಧಿಯವರೆಗೂ ಯಾವುದೇ ಯೋಜನೆಗಳ ಅಥವಾ ಸಮಸ್ಯೆಗಳ ಸಮರ್ಪಕ ಚರ್ಚೆ ನಡೆಯಲೇ ಇಲ್ಲ. ಜನಪರ ಚರ್ಚೆಗಳು ಗೌಣವಾಗಿತ್ತು.
ಭೋಜನದ ಬಳಿಕ ಆರಂಭಗೊಂಡ ಸಾಮಾನ್ಯ ಸಭೆ ಸಿಡಿಲು ಮಳೆ ಸುರಿದ ಬಳಿಕ ತಂಪಾದ ಇಳೆಯಂತೆ ಮೌನದೊಂದಿಗೆ ಆರಂಭವಾಯಿತು. ಮೇಯರ್ ತಮ್ಮ ಅನುಭವಗಳನ್ನು ಹಂಚಿಕೊಂಡರೆ ಪ್ರತಿಪಕ್ಷ ನಾಯಕರೂ ಆಡಳಿತದ ಕಾರ್ಯವನ್ನು ಭಾಗಶಃ ಶ್ಲಾಘಿಸಿದರು. ಬಳಿಕ ಹಲವು ಯೋಜನೆಗಳಿಗೆ ಅನುಮೋದನೆ ಹಾಗೂ ಸ್ಥಿರೀಕರಣ ಹಾಗೂ ಕೈಬಿಡುವ ನಿರ್ಧಾರವನ್ನು ಕಲಾಪದಲ್ಲಿ ತೆಗೆದುಕೊಳ್ಳಲಾಯಿತು. ಈ ಸಂದರ್ಭವೂ ಕೆಲವು ಸಣ್ಣ ಮಟ್ಟಿನ ಚರ್ಚೆಗಳು ನಡೆದವು.

ಸಭೆ ಮುಕ್ತಾಯಗೊಂಡ ಬಳಿಕ ಎಲ್ಲಾ ಕಾರ್ಪೋರೇಟರ್‌ಗಳು ಗುಂಪಿನಲ್ಲಿ ಫೋಟೊ ತೆಗೆದುಕೊಂಡರು. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದ ಬೇಧವಿಲ್ಲದೆ ಎಲ್ಲರೂ ಒಬ್ಬರಿಗೊಬ್ಬರು ಬೆನ್ನುತಟ್ಟುತ್ತಾ, ಆಲಂಗಿಸುತ್ತಾ ಕೈಕುಲುಕುತ್ತಾ ಫೋಟೊಗಳಿಗೆ ಪೋಸ್ ನೀಡಿದರು.!

ಇತ್ತೀಚಿನ ಸುದ್ದಿ

ಜಾಹೀರಾತು