11:09 PM Tuesday7 - July 2026
ಬ್ರೇಕಿಂಗ್ ನ್ಯೂಸ್
ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

ಇತ್ತೀಚಿನ ಸುದ್ದಿ

Sub Jail | ಮಂಗಳೂರು ಜೈಲ್ ಒಳಗೆ 2 ಪೊಟ್ಟಣ ಎಸೆತ: ಮಾಜಿ ಮೇಯರ್ ಕವಿತಾ ಸನಿಲ್ ಅವರಿಂದ ಬಹಿರಂಗ; ಡ್ರಗ್ಸ್ ಸಪ್ಲೈ ಶಂಕೆ; ಚಾಹುಡಿ ಎಂದ ಜೈಲಾಧಿಕಾರಿ!

24/02/2025, 12:08

ಮಂಗಳೂರು(reporterkarnataka.com): ನಗರದ ಬಿಜೈ ಬಳಿಯಿರುವ ಸಬ್ ಜೈಲಿನ ಆವರಣದೊಳಗೆ ಸ್ಕೂಟರ್ ಸವಾರರು ಎರಡು ಪೊಟ್ಟಗಳನ್ನು ಎಸೆದ ಘಟನೆ ನಡೆದಿದ್ದು, ಮಾಜಿ ಮೇಯರ್ ಕವಿತಾ ಸನಿಲ್ ಇದನ್ನು ಬಹಿರಂಗ ಪಡಿಸಿದ್ದಾರೆ.
ಕವಿತಾ ಸನಿಲ್ ಅವರು ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಜೈಲ್ ರೋಡ್ ಮೂಲಕ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕವಿತಾ ಸನಿಲ್ ಅವರ ಕಾರಿನ ಮುಂಭಾಗದಲ್ಲಿ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಎರಡು ಪೊಟ್ಟಗಳನ್ನು ಹೊರಗಡೆಯಿಂದ ಜೈಲಿನ ಕಂಪೌಂಡ್ ಒಳಗೆ ಎಸೆದಿದ್ದಾರೆ. ಒಮ್ಮೆ ಪೊಟ್ಟಣ ಹೊರಗೆ ಬಿದ್ದಾಗ, ಮತ್ತೆ ತೆಗೆದು ಅದನ್ನು ಒಳಗೆ ಎಸೆದಿದ್ದಾರೆ. ಒಟ್ಟು ಮೂರು ಬಾರಿ ಎಸೆದಿದ್ದಾರೆ. ಪೊಟ್ಟಣ ಸಾಧಾರಣ ಗಾತ್ರ ಹೊಂದಿತ್ತು. ಕವಿತಾ ಸನಿಲ್ ಅವರು ಸ್ಕೂಟರನ್ನು ಚೇಸ್ ಮಾಡಿಕೊಂಡು ಹೋದಾಗ ಅವರು ಓಣೆಯ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ. ಸ್ಕೂಟರ್ ನಲ್ಲಿ ನಂಬರ್ ಪ್ಲೇಟ್ ಮಾತ್ರ ಇತ್ತು. ನಂಬರ್ ಇರಲಿಲ್ಲ ಎಂದು ಮಾಜಿ ಮೇಯರ್ ಸ್ಪಷ್ಟಪಡಿಸಿದ್ದಾರೆ. ಇದೆಲ್ಲ ಕವಿತಾ ಸನಿಲ್ ಅವರ ಕಾರಿನ ಡ್ಯಾಸ್ ಬೋರ್ಡ್ ನಲ್ಲಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಮೇಯರ್ ವೇದವ್ಯಾಸ ಕಾಮತ್ ಕೂಡ ಆಗಮಿಸಿ ಜೈಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜೈಲಾಧಿಕಾರಿ, ಪೊಟ್ಟಣ ಬಿಸಾಕಿದ್ದು ಹೌದು. ಅದನ್ನು ಜೈಲಿನೊಳಗಡೆ ರಫಿಕ್ ಎಂಬಾತ ಹೆಕ್ಕಿಕೊಂಡಿದ್ದಾನೆ. ಅದರಲ್ಲಿ ಸಿಗರೇಟ್ ಮತ್ತು ಚಾಹುಡಿ ಮಾತ್ರ ಇತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಮಂಗಳೂರು ಜೈಲ್, ಗ್ಯಾಂಗ್ ವಾರ್, ಮಾದಕ ವಸ್ತು ಸರಬರಾಜು, ಮೊಬೈಲ್ ಫೋನ್ ಬಳಕೆ ಇದಕ್ಕೆಲ್ಲ ಕುಖ್ಯಾತಿ ಪಡೆದಿದೆ.
ಇನ್ನು ಕವಿತಾ ಸನಿಲ್ ಅವರು ಮಂಗಳೂರು ಮೇಯರ್ ಆಗಿದ್ದರು. ಮೇಯರ್ ಆಗಿದ್ದಾಗ ಅವರು ಸ್ಕಿಲ್ ಗೇಮ್ಸ್, ಅನಧಿಕೃತ ಮಸಾಜ್ ಸೆಂಟರ್ ಗಳ ಮೇಲೆ ನಿರಂತರ ದಾಳಿ ನಡೆಸಿ ಪ್ರಖ್ಯಾತಿ ಪಡೆದಿದ್ದರು. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದ ಕವಿತಾ ಸನಿಲ್ ಅವರು ಟ್ಯಾಂಕರ್ ಲಾರಿಯನ್ನು ಓಡಿಸಬಲ್ಲ ಗಟ್ಟಿಗಿತ್ತಿ.

ಇತ್ತೀಚಿನ ಸುದ್ದಿ

ಜಾಹೀರಾತು