2:28 AM Friday8 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ… ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಕೊಕ್ಕಡದಲ್ಲಿ ಬಂಧನ ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ…

ಇತ್ತೀಚಿನ ಸುದ್ದಿ

ನಮ್ಮ ಆಡಳಿತ ವೈಖರಿ, ಜನ ಸ್ಪಂದನೆ ಕಂಡು ಬಿಜೆಪಿ ಕಂಗಾಲಾಗಿದೆ: ತೀರ್ಥಹಳ್ಳಿ ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ

31/01/2025, 16:05

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಹುಲಿ ಬಣ್ಣ ನೋಡಿ ನರಿ ತನ್ನ ಚರ್ಮ ಸುಲಿದುಕೊಳ್ತಂತೆ ಹಾಗೆ ಬಿಜೆಪಿಯವರ ಪ್ರತಿಭಟನೆ ಕಥೆಯಾಗಿದೆ. ನಮ್ಮ ಆಡಳಿತ ವೈಖರಿ ಹಾಗೂ ಜನರ ಸ್ಪಂದನೆ ನೋಡಿ ಇನ್ಮೇಲೆ ಆಡಳಿತ ನಡೆಸುವುದು ನಮಗೆ ಕಷ್ಟ ಆಗಲಿದೆ. ನಮ್ಮ ನಾಯಕರ ಬಳಿ ಮುಖ ಇಟ್ಟುಕೊಂಡು ತಿರುಗಲು ಆಗುವುದಿಲ್ಲ ಎಂಬ ಕಾರಣದಿಂದ ಪ್ರತಿಭಟನೆ ನಡೆಸಿದ್ದಾರೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಹೇಳಿದರು.
ಗುರುವಾರ ಪಟ್ಟಣ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. 2021ರಿಂದ ಜನಾದೇಶದ ಪ್ರಕಾರ ಅಧಿಕಾರ ನಡೆಸುತ್ತಿದ್ದೇವೆ. ಇಲ್ಲಿಯವರೆಗೆ ಮೂವರು ಮಹಿಳಾ ಜನಪ್ರತಿನಿಧಿಗಳು ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇನ್ನು ಚುನಾವಣೆಗೆ 20 ತಿಂಗಳು ಬಾಕಿ ಇದೆ. ಹಾಗಾಗಿ ಈಗಲೇ ಪ್ರತಿಭಟನೆ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದರೆ ಜನ ನಂಬುತ್ತಾರೆ ಎಂದು ತಿಳಿದಿದ್ದಾರೆ. ಹತ್ತು ವರ್ಷ ನಮ್ಮ ಜೊತೆಗೆ ಇದ್ದರೂ ನಮ್ಮ ಬುದ್ದಿ ಬಂದಿಲ್ಲ ಎಂದಿದ್ದಾರೆ. ಅವರ ಬುದ್ದಿ ಹಿಡಿಸದ ಕಾರಣ ಪಕ್ಷ ಬಿಟ್ಟು ಬಂದಿದ್ದು ಎಂದು ತಿಳಿಸಿದರು.
ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ ಬಗ್ಗೆ ಮಾತನಾಡುತ್ತಾರೆ. ಅದು ಇಡೀ ದೇಶದ ಸಮಸ್ಯೆ.ಗ್ರಾಮಪಂಚಾಯಿತಿಯಿಂದ ಹಿಡಿದು ದೆಹಲಿಯವರೆಗೂ ಬೀದಿ ನಾಯಿಗಳ ಸಮಸ್ಯೆ ಇರುವುದೇ, ಇಡೀ ಪಟ್ಟಣದಲ್ಲಿ 2000ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಗಂಡು ನಾಯಿ ಹೆಣ್ಣು ನಾಯಿ ಎರಡಕ್ಕೂ ಸರ್ಜರಿ ಮಾಡಿದ್ದೇವೆ. ನಮ್ಮ ಬಜೆಟ್ ಇತಿ ಮಿತಿ ನೋಡಿಕೊಂಡು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಇರುವ ಎಲ್ಲಾ ನಾಯಿಗಳಿಗೂ ಸಂತಾನಹರಣ ಚಿಕಿತ್ಸೆ ಮಾಡಿಸಲು 400ಲಕ್ಷಕ್ಕೂ ಹೆಚ್ಚಿನ ಹಣ ಬೇಕು ಎಂದರು.
ಶಾಸಕರನ್ನು ಅತ್ಯಂತ ಗೌರವದಿಂದ ಕಂಡಿದ್ದೇವೆ, ಶಾಸಕರನ್ನು ಬಿಟ್ಟು ಒಂದೇ ಒಂದು ಕಾರ್ಯಕ್ರಮ ಮಾಡಿಲ್ಲ. ಪಕ್ಷ ರಾಜಕಾರಣ ಮಾಡುವ ಅವಶ್ಯಕತೆ ನಮಗಿಲ್ಲ. ಆದರೆ ಪ್ರತಿಯೊಂದು ಸುಳ್ಳು ಹೇಳಿ ಜನರ ಕಣ್ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ನಮ್ಮ ಜೊತೆಗೆ ಇದ್ದರು ಎನ್ನುತ್ತಾರೆ. ಅವರ ಜೊತೆಗೆ ಹೋಗಿದ್ದಕ್ಕೆ ಎರಡು ಬಾರಿ ಪೂರ್ಣ ಬಹುಮತ ಅವರಿಗೆ ಬಂದಿದ್ದು. 6 ಸ್ಥಾನದಲ್ಲಿ ಇದ್ದ ಇವರು 14 ಸ್ಥಾನ ತಲುಪಿದ್ದು ನಾನು ಹೋದಾಗ, ನಾನು ಪಕ್ಷ ಬಿಟ್ಟು ಹೊರ ಬಂದ ಮೇಲೆ ಅವರು ಬಂದಿದ್ದು ಅದೇ ಸ್ಥಾನಕ್ಕೆ ಎಂದರು.

ವಾಣಿಜ್ಯ ಸಂಕಿರ್ಣ, ಕುವೆಂಪು ರಂಗಮಂದಿರ, ಸುವರ್ಣ ಕರ್ನಾಟಕ ಸಂಭ್ರಮ, ಕಾಂತರ 2 ನಾಟಕ, ಆಳ್ವಾಸ್ ಸಂಸ್ಥೆಯ ಮಕ್ಕಳಿಂದ ಕಾರ್ಯಕ್ರಮ, ಕ್ರಿಕೆಟ್ ಟೂರ್ನಿಮೆಂಟ್, ಆರೋಗ್ಯ ಶಿಬಿರ, ಹೀಗೆ ಹಲವಾರು ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ. ಒಳ್ಳೆ ಕೆಲಸ ಮಾಡುವವರಿಗೆ ತೊಂದರೆ ಕೊಡಬಾರದು.
ನಮ್ಮ ಆಡಳಿತದ ಬಗ್ಗೆ ಜನರಿಗೆ ಅಸಮಾಧಾನ ಇಲ್ಲ. ಹಾಗಾಗಿ ಈ ರೀತಿ ಪ್ರತಿಭಟನೆ ಮಾಡಿ ತಾವು ಇದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು