12:20 AM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ ಉತ್ತರಿಸಿ…

15/01/2025, 20:07

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಜಲರಾಶಿಯಿಂದ ಕೂಡಿದ ಸಮುದ್ರದ ದಂಡೆಯಲ್ಲೇ ಇರುವ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. 24× 7 ನೀರು ಕೊಡುತ್ತೇವೆ ಎಂದು ದಶಕಗಳಿಂದ ಆಡಳಿತರೂಢರು ಬೊಬ್ಬೆ ಹಾಕುತ್ತಿದ್ದರೂ ನೆಟ್ಟಗೆ 4 ತಾಸು ನೀರು ಕೊಡಲು ಸಾಧ್ಯವಾಗಿಲ್ಲ. ಇದೀಗ ಬ್ರಹ್ಮ ಬೈದರ್ಕುಳ ಗರೋಡಿ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿಯೂ ಗರೋಡಿಯ ಮುಂಭಾಗದಲ್ಲಿರುವ ಮನೆಗೆಗಳಿಗೆ ನೀರಿಲ್ಲ.


ಕಳೆದ ಸುಮಾರು 5 ದಿನಗಳಿಂದ ಗರೋಡಿ ಎದುರುಗಡೆ ಇರುವ ಪ್ರದೇಶದಲ್ಲಿರುವ ಮನೆಗಳಿಗೆ ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ಆಗುತ್ತಿಲ್ಲ. ಸ್ಥಳೀಯ ಕಾರ್ಪೋರೇಟರ್, ಇಂಜಿನಿಯರ್, ಕೊನೆಗೆ ಮೇಯರ್ ಅವರಿಗೆ ಹೇಳಿದರೂ ಪಾಲಿಕೆ ಆಡಳಿತ ನೀರು ಸರಬರಾಜು ಮಾಡುವಲ್ಲಿ ವಿಫಲವಾಗಿದೆ. ಇಂಜಿನಿಯರ್ ಅವರಲ್ಲಿ ಕೇಳಿದರೆ ನೀರನ್ನು ಸಿಟಿಗೆ ಡೈವರ್ಟ್ ಮಾಡಲಾಗಿದೆ. ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸುತ್ತಾರೆ. ಸಿಟಿಗೆ ಡೈವರ್ಟ್ ಮಾಡಿದ್ದೇವೆ ಅಂದ್ರೆ ಗರೋಡಿ ಇರುವ ಪ್ರದೇಶ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೇ? ಇಲ್ಲಿನ ಕಾರ್ಪೋರೇಟರ್ ಇಲ್ಲವೇ? ಮೇಯರ್ ಅಧಿಕಾರ ವ್ಯಾಪ್ತಿ ಇಲ್ಲಿಗೆ ಬರುವುದಿಲ್ಲವೇ? ಎಂಬ ನೂರಾರು ಪ್ರಶ್ನೆಗಳು ಉದ್ಭವಿಸುತ್ತದೆ. ಅಷ್ಟೇ ಅಲ್ಲದೆ, ಗರೋಡಿ ಪ್ರದೇಶದ ನೀರನ್ನು ಸಿಟಿಗೆ ಕೊಟ್ಟಿದ್ದೇವೆ ಅಂದ್ರೆ, ಒಬ್ಬನ ಹೊಟ್ಟೆಯ ಅನ್ನವನ್ನು ಕಸಿದು ಇನ್ನೊಬ್ಬನಿಗೆ ಉಣಿಸಿದ ಹಾಗೆ ಆಗುವುದಿಲ್ಲವೇ ಮೇಯರ್ ಅವರೇ? ಪಾಲಿಕೆಯದ್ದು ಇದು ಯಾವ ನೀತಿ?
ಸುಮಾರು 9 ದಿನಗಳ ಕಾಲ ನಡೆಯುವ ಗರೋಡಿ ಜಾತ್ರೆ ಅಂದ್ರೆ ಇಡೀ ಊರಿಗೆ ಸಂಭ್ರಮ. ಇಲ್ಲಿನ ಎಲ್ಲ ಮನೆಗಳಿಗೂ ಈ ಜಾತ್ರೆ ಸಮಯದಲ್ಲಿ ನೆಂಟರಿಷ್ಟರು ಬರುತ್ತಾರೆ. ಹೆಚ್ಚಿನ ಮನೆಗಳಲ್ಲಿ ಚಿಕನ್ ಸಾರು, ಚಿಕನ್ ಸುಕ್ಕ, ಕೋರಿ ರೊಟ್ಟಿ, ಕಬಾಬ್ ಸಮರಾಧನೆ ಆಗುತ್ತದೆ. ಆದರೆ ನೀರೇ ಇಲ್ಲ ಅಂದ್ರೆ ಈ ನಂಟರಿಗೆ ಸ್ಥಳೀಯರು ಆತಿಥ್ಯ ನೀಡುವುದಾದರೂ ಹೇಗೆ ಮೇಯರ್ ಅವರೇ?
ವಿಶೇಷವೆಂದರೆ ತುಂಬೆ ವೆಂಟೆಡ್ ಡ್ಯಾಮ್ ನಿಂದ ಮಂಗಳೂರು ನಗರದೊಳಗೆ ನೇತ್ರಾವತಿ ನೀರು ಸರಬರಾಜು ಆಗುವುದು ಇದೇ ನಾಗುರಿ ಗರೋಡಿ ಪ್ರದೇಶದ ಮೂಲಕವೇ. ಕಪ್ಪಗಿನ ದಪ್ಪ ಪೈಪ್ ಹೆಬ್ಬಾವಿನ ತರಹ ಇಲ್ಲಿ ಮಣ್ಣಿನೊಳಗೆ ಹಾಯಾಗಿ ಮಲಗಿವೆ.

ಪಾಲಿಕೆಯ ನೀರಿಲ್ಲದೆ ಗರೋಡಿ ಪ್ರದೇಶದ ಜನರು ಬಿಸ್ಲೆರಿ ಮಾದರಿಯ ನೀರು ಇದೀಗ ಉಪಯೋಗಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು