1:14 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ವಿಜಯಾ ಕಿಶೋರ್ ಗೆ ಸ್ವರ ಶ್ರದ್ಧಾಂಜಲಿ

09/12/2024, 19:44

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಧಾರವಾಡದ ವೈಷ್ಣವಿ ಪಂಚಮುಖಿ ಅವರು ತಮ್ಮ ಸುಶ್ರಾವ್ಯ ಗಾಯನದಿಂದ ಸಂಗೀತಾ ಪ್ರಿಯರ ಮನ ಸೂರೆಗೊಂಡರು.
ಅವರು ಬಳ್ಳಾರಿ ನಗರದಲ್ಲಿ ಏರ್ಪಡಿಸಿದ ದಿ. ವಿಜಯಾ ಕಿಶೋರ್, ಖ್ಯಾತ ಹಿಂದುಸ್ಥಾನಿ ಸಂಗೀತ ವಿದೂಷಿ, ಅವರ ಮೂರನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಭಾಗವಸಿದ್ದರು.

ಬಾಗೇಶ್ರೀ ರಾಗದಲ್ಲಿ ‘ಮೊರೇ ಮನಾ ಚೀಸನ್ನು ವಿಲಂಬಿತ ಏಕ್ ತಾಳದಲ್ಲಿ ಆರಂಭಿಸಿ ದೃತ್ ತೀತಾಳಡಲ್ಲಿ ಕೌನ್ ಕರತ್ ತೊರೆ ಮಿಲನ ಪಿಯಾರವಾ ಪ್ರಸ್ತುತ ಪಡಿಸಿದರು. ನಂತರ ಒಂದು ತರಾನಾ ಹಾಡಿ ಸ್ವರಗಳ ಮೇಲೆ ಹಾಗೂ ತಾನುಗಳ ಮೇಲೆ ತಮ್ಮ ಹಿಡಿತವನ್ನು ಪ್ರದರ್ಶಿಸಿದರು.
ಸುಗಮ ಸಂಗೀತದಲ್ಲಿ ಜನಪ್ರಿಯ ದಾಸರ ಪದಗಳು ಹಾಗೂ ಒಂದು ಅಭಂಗ್ ಪ್ರಸ್ತುತ ಪಡಿಸಿ ಶ್ರೂತ್ರುಗಳ ಮೆಚ್ಚಿಗೆ ಪಡೆದರು.
ಅವರಿಗೆ ತಬಲಾದಲ್ಲಿ ಅವರ ಪತಿ ಜಯತೀರ್ಥ ಪಂಚಮುಖಿ ಸಾಥ್ ನೀಡಿದರೆ ಹಾರ್ಮೋನಿಯಂ ಸಾಥ್ ದೊಡ್ಡಬಸವ, ತಾಳದಲ್ಲಿ ಅವರ ಮಗ ಸುಮನ್ಯು ನೀಡಿದರು.
ಇದಕ್ಕೂ ಮೊದಲು ವಿಜಯಾ ಕಿಶೋರ್ ಅವರ ಶಿಷ್ಯರು ಗಳಾದ ಕುಮಾರ ಶಶಾಂಕ್, ಕುಮಾರ ಆಭಯ ಹಾಗೂ ಕುಮಾರ ಶಮಂತ್ ರಾಗ ಕೇದಾರದಲ್ಲಿ ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಪ್ರಸ್ತುತಪಡಿಸಿದರು.
ಜಯಲಕ್ಷ್ಮಿ, ಸಾನ್ವಿ ಹಾಗೂ ಕುಮಾರ್ ಆಯುಷ್ ರಾಗ ಯಮನದಲ್ಲಿ ಛೋಟಾ ಖಾಲಿ ಹಾಗೂ ದಸ್ಕ್ರಾ ಪದ ಮತ್ತು ವಚನ ಗಾಯನ ಮಾಡಿದರು.
ಸನ್ನಿಧಿ ಶುದ್ಧ ಸಾರ್ನ್ಗ್ ರಾಗದಲ್ಲಿ ಒಂದು ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಹಾಡಿದರು.
ಹಿರಿಯ ಶಿಷ್ಯೆ ಸಂಧ್ಯಾ ಕೊಳಚಲಂ ಅವರು ಸುಗಮ ಸಂಗೀತದಲ್ಲಿ ಭಾವಗೀತೆ, ದಸರ ಪದ, ವಚನ ಪ್ರಸ್ತುತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು