6:40 PM Friday31 - July 2026
ಬ್ರೇಕಿಂಗ್ ನ್ಯೂಸ್
ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ…

ಇತ್ತೀಚಿನ ಸುದ್ದಿ

ಆಪೊಸ್ತಲಿಕ್ ಕಾರ್ಮೆಲ್ ಸಭೆಯ 10 ಸಹೋದರಿಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿ ಸಂಭ್ರಮ

08/12/2024, 23:48

ಮಂಗಳೂರು(reporterkarnataka.com):ಆಪೊಸ್ತಲಿಕ್ ಕಾರ್ಮೆಲ್ ಸಭೆಯ ಹತ್ತು ಕನ್ಯಾ ಸ್ತ್ರೀಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿಯು ಡಿಸೆಂಬರ್ 7 ರಂದು ನಗರದ ಮೇರಿಹಿಲ್ ಕಾನ್ವೆಂಟ್ ನಲ್ಲಿ ನೆರವೇರಿತು.
ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇತರ ಸಹ ಧರ್ಮ ಗುರುಗಳ ಜೊತೆಗೂಡಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಹತ್ತು ಯುವ ಕನ್ಯಾ ಸ್ತ್ರೀಯರು ಆಪೊಸ್ತಲಿಕ್ ಕಾರ್ಮೆಲ್ ನ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ. ಮತ್ತು ಇತರ ಧರ್ಮ ಭಗಿನಿಯರ ಸಮ್ಮುಖದಲ್ಲಿ, ಪರಿಶುದ್ಧತೆ, ಬಡತನ ಮತ್ತು ವಿಧೇಯತೆಯ ಪ್ರತಿಜ್ನೆಯ ಮೂಲಕ ತಮ್ಮನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಯೇಸು ಸ್ವಾಮಿಗೆ ಸಮರ್ಪಿಸಿದರು.


ತದ ನಂತರ ಮೌಂಟ್ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿಗಳ ಸ್ವಾಗತ ನ್ರತ್ಯದೊಂದಿಗೆ ಪ್ರಾರಂಭವಾಯಿತು. ನವಶಿಷ್ಯರ ಶುಭಾಶಯ ಗೀತೆ ಎಲ್ಲರನ್ನು ಹರ್ಷಗೊಳಿಸಿತು. ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿಯವರು ಯುವ ಕನ್ಯಾ ಸ್ತ್ರೀಯರಿಗೆ ಹಾರ ಹಾಕಿ ಅಭಿನಂದಿಸಿದರು. ಅವರು ತಮ್ಮ ಭಾಷಣದಲ್ಲಿ, ದೇವರ ಬೇಷರತ್ತಾದ ಪ್ರೀತಿಗೆ ಸಮರ್ಪಿಸಿದ ಸಹೋದರಿಯರನ್ನು ಉದ್ದೇಶಿಸಿ ದೇವರ ಪ್ರೀತಿಯಲ್ಲಿ ಸದಾ ಬದ್ದರಾಗಿರಲು ಸಲಹೆ ನೀಡಿದರು ಮತ್ತು ಈ ಸಹೋದರಿಯರ ಪೋಷಕರು ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂಭ್ರಮಾಚರಣೆಯಲ್ಲಿ ಆಪೊಸ್ತಲಿಕ್ ಕಾರ್ಮೆಲ್ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ., ಇವರೊಂದಿಗೆ ಪ್ರಾಂತೀಯ ಪದಾಧಿಕಾರಿಗಳು,, ಭಾರತ ಮತ್ತು ಶ್ರೀಲಂಕಾದಿಂದ ಆಗಮಿಸಿದ ಕುಟುಂಬದ ಸದಸ್ಯರು, ಹಿತೈಷಿಗಳು, ಧರ್ಮ ಗುರುಗಳು, ಹಲವಾರು ಧರ್ಮ ಭಗಿನಿಯರು ಉತ್ಸಾಹದಿಂದ ಭಾಗವಹಿಸಿದರು ಮತ್ತು ಶಾಶ್ವತ ಪ್ರತಿಜ್ನೆ ಮಾಡಿದ ಭಗಿನಿಯರನ್ನು ಅಭಿನಂದಿಸಿದರು. ಕೊನೆಯಲ್ಲಿ ಸಹಭಾಗಿತ್ವದ ಭೋಜನವು ಎಲ್ಲರನ್ನು ಒಂದುಗೂಡಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು