12:01 PM Monday14 - September 2026
ಬ್ರೇಕಿಂಗ್ ನ್ಯೂಸ್
‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ

ಇತ್ತೀಚಿನ ಸುದ್ದಿ

ಆಪೊಸ್ತಲಿಕ್ ಕಾರ್ಮೆಲ್ ಸಭೆಯ 10 ಸಹೋದರಿಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿ ಸಂಭ್ರಮ

08/12/2024, 23:48

ಮಂಗಳೂರು(reporterkarnataka.com):ಆಪೊಸ್ತಲಿಕ್ ಕಾರ್ಮೆಲ್ ಸಭೆಯ ಹತ್ತು ಕನ್ಯಾ ಸ್ತ್ರೀಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿಯು ಡಿಸೆಂಬರ್ 7 ರಂದು ನಗರದ ಮೇರಿಹಿಲ್ ಕಾನ್ವೆಂಟ್ ನಲ್ಲಿ ನೆರವೇರಿತು.
ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇತರ ಸಹ ಧರ್ಮ ಗುರುಗಳ ಜೊತೆಗೂಡಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಹತ್ತು ಯುವ ಕನ್ಯಾ ಸ್ತ್ರೀಯರು ಆಪೊಸ್ತಲಿಕ್ ಕಾರ್ಮೆಲ್ ನ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ. ಮತ್ತು ಇತರ ಧರ್ಮ ಭಗಿನಿಯರ ಸಮ್ಮುಖದಲ್ಲಿ, ಪರಿಶುದ್ಧತೆ, ಬಡತನ ಮತ್ತು ವಿಧೇಯತೆಯ ಪ್ರತಿಜ್ನೆಯ ಮೂಲಕ ತಮ್ಮನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಯೇಸು ಸ್ವಾಮಿಗೆ ಸಮರ್ಪಿಸಿದರು.


ತದ ನಂತರ ಮೌಂಟ್ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿಗಳ ಸ್ವಾಗತ ನ್ರತ್ಯದೊಂದಿಗೆ ಪ್ರಾರಂಭವಾಯಿತು. ನವಶಿಷ್ಯರ ಶುಭಾಶಯ ಗೀತೆ ಎಲ್ಲರನ್ನು ಹರ್ಷಗೊಳಿಸಿತು. ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿಯವರು ಯುವ ಕನ್ಯಾ ಸ್ತ್ರೀಯರಿಗೆ ಹಾರ ಹಾಕಿ ಅಭಿನಂದಿಸಿದರು. ಅವರು ತಮ್ಮ ಭಾಷಣದಲ್ಲಿ, ದೇವರ ಬೇಷರತ್ತಾದ ಪ್ರೀತಿಗೆ ಸಮರ್ಪಿಸಿದ ಸಹೋದರಿಯರನ್ನು ಉದ್ದೇಶಿಸಿ ದೇವರ ಪ್ರೀತಿಯಲ್ಲಿ ಸದಾ ಬದ್ದರಾಗಿರಲು ಸಲಹೆ ನೀಡಿದರು ಮತ್ತು ಈ ಸಹೋದರಿಯರ ಪೋಷಕರು ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂಭ್ರಮಾಚರಣೆಯಲ್ಲಿ ಆಪೊಸ್ತಲಿಕ್ ಕಾರ್ಮೆಲ್ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ., ಇವರೊಂದಿಗೆ ಪ್ರಾಂತೀಯ ಪದಾಧಿಕಾರಿಗಳು,, ಭಾರತ ಮತ್ತು ಶ್ರೀಲಂಕಾದಿಂದ ಆಗಮಿಸಿದ ಕುಟುಂಬದ ಸದಸ್ಯರು, ಹಿತೈಷಿಗಳು, ಧರ್ಮ ಗುರುಗಳು, ಹಲವಾರು ಧರ್ಮ ಭಗಿನಿಯರು ಉತ್ಸಾಹದಿಂದ ಭಾಗವಹಿಸಿದರು ಮತ್ತು ಶಾಶ್ವತ ಪ್ರತಿಜ್ನೆ ಮಾಡಿದ ಭಗಿನಿಯರನ್ನು ಅಭಿನಂದಿಸಿದರು. ಕೊನೆಯಲ್ಲಿ ಸಹಭಾಗಿತ್ವದ ಭೋಜನವು ಎಲ್ಲರನ್ನು ಒಂದುಗೂಡಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು