10:50 PM Thursday27 - November 2025
ಬ್ರೇಕಿಂಗ್ ನ್ಯೂಸ್
ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ… Bhadravathi | ಪತಿಯ ಕಿರುಕುಳ: ಡೆತ್ ನೋಟ್ ಬರೆದು ನಾಲೆಗೆ ಹಾರಿ ನವ… ವಿದ್ಯುತ್ ಲಿಂಕ್ ಲೈನ್‌ ಸ್ಥಾಪಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆದ್ಯತೆ: ಸಚಿವ ಕೆ.ಜೆ.ಜಾರ್ಜ್ ಹೂವುಗಳ ಹರಾಜು ಪ್ರಕ್ರಿಯೆ ಮಾದರಿಯಲ್ಲಿ ಔಷಧೀಯ ಗಿಡಮೂಲಿಕೆಗಳ ಹರಾಜು ಅವಶ್ಯಕ: ಮುಖ್ಯ ಕಾರ್ಯದರ್ಶಿ… ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ…

ಇತ್ತೀಚಿನ ಸುದ್ದಿ

ಆಪೊಸ್ತಲಿಕ್ ಕಾರ್ಮೆಲ್ ಸಭೆಯ 10 ಸಹೋದರಿಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿ ಸಂಭ್ರಮ

08/12/2024, 23:48

ಮಂಗಳೂರು(reporterkarnataka.com):ಆಪೊಸ್ತಲಿಕ್ ಕಾರ್ಮೆಲ್ ಸಭೆಯ ಹತ್ತು ಕನ್ಯಾ ಸ್ತ್ರೀಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿಯು ಡಿಸೆಂಬರ್ 7 ರಂದು ನಗರದ ಮೇರಿಹಿಲ್ ಕಾನ್ವೆಂಟ್ ನಲ್ಲಿ ನೆರವೇರಿತು.
ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇತರ ಸಹ ಧರ್ಮ ಗುರುಗಳ ಜೊತೆಗೂಡಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಹತ್ತು ಯುವ ಕನ್ಯಾ ಸ್ತ್ರೀಯರು ಆಪೊಸ್ತಲಿಕ್ ಕಾರ್ಮೆಲ್ ನ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ. ಮತ್ತು ಇತರ ಧರ್ಮ ಭಗಿನಿಯರ ಸಮ್ಮುಖದಲ್ಲಿ, ಪರಿಶುದ್ಧತೆ, ಬಡತನ ಮತ್ತು ವಿಧೇಯತೆಯ ಪ್ರತಿಜ್ನೆಯ ಮೂಲಕ ತಮ್ಮನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಯೇಸು ಸ್ವಾಮಿಗೆ ಸಮರ್ಪಿಸಿದರು.


ತದ ನಂತರ ಮೌಂಟ್ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿಗಳ ಸ್ವಾಗತ ನ್ರತ್ಯದೊಂದಿಗೆ ಪ್ರಾರಂಭವಾಯಿತು. ನವಶಿಷ್ಯರ ಶುಭಾಶಯ ಗೀತೆ ಎಲ್ಲರನ್ನು ಹರ್ಷಗೊಳಿಸಿತು. ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿಯವರು ಯುವ ಕನ್ಯಾ ಸ್ತ್ರೀಯರಿಗೆ ಹಾರ ಹಾಕಿ ಅಭಿನಂದಿಸಿದರು. ಅವರು ತಮ್ಮ ಭಾಷಣದಲ್ಲಿ, ದೇವರ ಬೇಷರತ್ತಾದ ಪ್ರೀತಿಗೆ ಸಮರ್ಪಿಸಿದ ಸಹೋದರಿಯರನ್ನು ಉದ್ದೇಶಿಸಿ ದೇವರ ಪ್ರೀತಿಯಲ್ಲಿ ಸದಾ ಬದ್ದರಾಗಿರಲು ಸಲಹೆ ನೀಡಿದರು ಮತ್ತು ಈ ಸಹೋದರಿಯರ ಪೋಷಕರು ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂಭ್ರಮಾಚರಣೆಯಲ್ಲಿ ಆಪೊಸ್ತಲಿಕ್ ಕಾರ್ಮೆಲ್ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ., ಇವರೊಂದಿಗೆ ಪ್ರಾಂತೀಯ ಪದಾಧಿಕಾರಿಗಳು,, ಭಾರತ ಮತ್ತು ಶ್ರೀಲಂಕಾದಿಂದ ಆಗಮಿಸಿದ ಕುಟುಂಬದ ಸದಸ್ಯರು, ಹಿತೈಷಿಗಳು, ಧರ್ಮ ಗುರುಗಳು, ಹಲವಾರು ಧರ್ಮ ಭಗಿನಿಯರು ಉತ್ಸಾಹದಿಂದ ಭಾಗವಹಿಸಿದರು ಮತ್ತು ಶಾಶ್ವತ ಪ್ರತಿಜ್ನೆ ಮಾಡಿದ ಭಗಿನಿಯರನ್ನು ಅಭಿನಂದಿಸಿದರು. ಕೊನೆಯಲ್ಲಿ ಸಹಭಾಗಿತ್ವದ ಭೋಜನವು ಎಲ್ಲರನ್ನು ಒಂದುಗೂಡಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು