1:42 PM Monday12 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ಕಲಬುರ್ಗಿ: ವಕ್ಫ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾದ ಹಫೀಜ್ ಮುಹಮ್ಮದ್ ಅಲಿ ಅಲ್ ಹುಸೇನಿಗೆ ಅದ್ಧೂರಿ ಸ್ವಾಗತ

25/11/2024, 19:09

ಶಿವು ರಾಠೋಡ್ ಹುಣಸಗಿ ಕಲಬುರ್ಗಿ

info.reporterkarnataka@gmail.com

ವಕ್ಫ್ ಬೋರ್ಡ್ ಸದಸ್ಯರಾಗಿ ನೂತನವಾಗಿ ಆಯ್ಕೆಯದ ಕೆಬಿಎನ್ ದರ್ಗಾದ ಸಜ್ಜಾದೆ ನಶೀನ ಹಫೀಜ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಅವರನ್ನು ಕಲಬುರ್ಗಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಹುಮ್ನಾಬಾದ್ ರಿಂಗ್ ರೋಡ್ ನಲ್ಲಿ ಹೂವುಗಳಿಂದ ತುಂಬಿದ ಜೇಸಿಬಿಗಳಿಂದ ಅಲಿ ಹುಸೇನಿರಿಗೆ ಪುಷ್ಪಾರ್ಪಣೆ ನಡೆಯಿತು. ಅಲ್ಲದೇ 600 ಕೆಜಿ ಹಾಗೂ 50 ಮೀಟರ ಉದ್ದದ ಮಾಲಾರ್ಪಣೆಗೆ ನೆರೆದ ಸಮೂಹ ಸಾಕ್ಷಿಯಾಯಿತು.
ಹೂ ಮಳೆಯ ನಂತರ ಕಪನೂರ ಏರಿಯಾದ ಬಾಬಾಸಾಹೇಬ ಅಂಬೇಡ್ಕರ ಮೂರ್ತಿಗೆ ಅಲಿ ಅಲ ಹುಸ್ಸೇನಿ ಮಾಲಾರ್ಪಣೆ ಮಾಡಿದರು.

ಪುಂಜಾ ಗ್ರೂಪ್ ಆಫ್ ಇಂಡಸ್ಟ್ರಿ (ಕರಿಗಾರ ಕುಟುಂಬ),ದರ್ಗಾ ಹಜರತ್ ಬೈ ಬಿ ಕುಂಜಾ ಮಸಾಬಿ ದರ್ಗಾ, ಅಯಾಜ್ ಖಾನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಯೀಮ್ ಖಾನ ಸೇರಿದಂತೆ ಅನೇಕ ಜನ ಅವರಿಗೆ ರೋಡ ಶೋ ರ್ಯಾಲಿಯಲ್ಲಿಯೇ ಸನ್ಮಾನ ಮಾಡಿ ಅಭಿನಂದಿಸಿದರು. ರೋಡ ಶೋ ಉದ್ದಕ್ಕೂ “ಅಲಿ ಹಮಾರಿ ಜಾನ್ ಹೈ, ಗುಲ್ಬರ್ಗಾ ಕಿ ಶಾನ ಹೈ ” ಎಂಬ ಜೈಕಾರ ಕೇಳಿ ಬಂತು.
ಹಫೀಜ ಮುಹಮ್ಮದ ಅಲಿ ಅಲ್ ಹುಸ್ಸೇನಿ ಇವರು ಜನರನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಸಹಸ್ರಾರು ಜನರು ಪಾಲ್ಗೊಂಡಿದ್ದ ಈ ರ್ಯಾಲಿ ಕಮಲಾಪುರದಿಂದ ಪ್ರಾರಂಭವಾಗಿ ಕಪ್ನೂರ್,ಹುಮನಾಬಾದ್ ಸರ್ಕಲ್, ನಾಗೇಶ್ವರ ಶಾಲೆ, ಮುಸ್ಲಿಂ ಚೌಕ್, ಮಕ್ಬಾರಾ ಮಸೀದಿ, ಜಲಾಲವಾಡಿ, ಕೆಬಿಎನ್ ದರ್ಗಾ. ದರ್ಗಾ ತಲುಪಿದ ನಂತರ ಖಾಜಾ ಬಂದಾನವಾಜರ ಆಶೀರ್ವಾದ ಪಡೆದ ಅಲಿ ಅಲ್ ಹುಸ್ಸೇನಿ ದೇವಡಿ ತೆರಳಿದರು. ದೇವಡಿಯಲ್ಲಿ ಭಕ್ತರು ಅನುಯಾಯಿಗಳು ಸನ್ಮಾನ ಮಾಡಿದರು. ಶಾಂತಿಯುತವಾಗಿ ನಡೆದ ರ್ಯಾಲಿಯಲ್ಲಿ ಪೊಲೀಸ್
ಬಿಗಿ ಬಂದೋಬಸ್ತ್ ಮಾಡಲಾಗಿತು.

ಇತ್ತೀಚಿನ ಸುದ್ದಿ

ಜಾಹೀರಾತು