1:47 AM Monday15 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ನಿಡುವಾಳೆ ಗ್ರಾಪಂ ಉಪ ಚುನಾವಣೆ: ಒಂದು ಸ್ಥಾನಕ್ಕೆ ಸರ್ವಪಕ್ಷದ ಸಹಕಾರದಿಂದ ಕಮಲಮ್ಮ ಆಯ್ಕೆ

16/11/2024, 18:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನಿಡುವಾಳೆ ಗ್ರಾಮ ಪಂಚಾಯಿತಿಯ ಒಂದು ಸದಸ್ಯರ ಸ್ಥಾನಕ್ಕೆ ನಡೆಯಬೇಕಾಗಿದ್ದ ಉಪಚುನಾವಣೆಗೆ ಸರ್ವ ಪಕ್ಷಗಳಾದ ಸಹಕಾರದಿಂದ ಕಮಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.

ಬಿಜೆಪಿ,ಕಾಂಗ್ರೆಸ್, ಸಿಪಿಐ ಜೆಡಿಎಸ್ ಹಾಗೂ ನಿಡುವಾಳೆ ಗ್ರಾಮಸ್ಥರ ಸಹಕಾರದೊಂದಿಗೆ ಕಮಲಮ್ಮ ಅವರ ಅವಿರೋಧವಾಗಿ ಆಯ್ಕೆ ನಡೆದಿದೆ. ಆಡಳಿತಾವಧಿ ಕೇವಲ ಇನ್ನೂ ಒಂದು ವರ್ಷ ಮಾತ್ರ ಇರುವುದರಿಂದ ಸರ್ವ ಪಕ್ಷದವರ ಸಲಹೆ ಹಾಗೂ ಮಾರ್ಗದರ್ಶನದಂತೆ ಕಮಲಮ್ಮ
ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಬಾಳೂರು ಹೋಬಳಿ ಅಧ್ಯಕ್ಷ ಬಿ.ಬಿ. ಮಂಜುನಾಥ್, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಶ್ರೀನಾಥ್ , ಜೆಡಿಎಸ್ ಯುವ ಮುಖಂಡ ಅಭಯ್ ಮರ್ಕಲ್ ಹಾಗೂ ಸ್ಥಳೀಯರಾದ ಸುಧಾಕರ್ ನಿಡುವಾಳೆ , ಎಂ.ಎಲ್. ವಿಜೇಂದ್ರ ಮರ್ಕಲ್, ಬ್ಯಾಂಡ್ ರವಿ ,ಚಂದ್ರಣ್ಣ ಎಚ್.ಆರ್, ಸೀನ , ಯಶ್ವಂತ್, ದಿಲೀಪ್, ಪ್ರದೀಪ್ ಕಾವಲನ್, ಚೇತನ್ ಶರ್ಮ , ವಸಂತ ಜಂಗಲ್,
ಸಂಜಯ್, ಸಂಜೀವ ಉರ್ವಿನ್ ಖಾನ್, ದಿನೇಶ್ ಉರ್ವಿನ್ ಖಾನ್ ,ತನಿಯಪ್ಪ, ಅಶೋಕ್, ಸ್ವಾಮಿ ಮರ್ಕಲ್, ಸಾಗರ್ ಚಂದ್ರು ಆಟೋ ಕೂವೆ ,ಪ್ರಮೋದ್ ,ಮಹೇಶ್ ಬಾಳೂರು, ಲಾರೆನ್ಸ್ ಬಾಳೂರು, ಸಂದೀಪ್ ಬಾಳೂರು, ಪರೀಕ್ಷಿತ್ ಜಾವಳಿ , ಚಂದ್ರಶೇಖರ್ ನಿಡುವಾಳೆ,ಸೀನ ಶಂಕರ ಹೇಮಾವತಿ, ವಿಜಯ್ ಕಲ್ಲಕ್ಕಿ, ರಾಜಕುಮಾರ್ ಕಲ್ಲಕ್ಕಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುಲಾಬಿ ಹಾಗೂ ನವೀನ್ ಹಾವಳಿ, ಸಚಿನ್ ಮರ್ಕಲ್, ಕಮಲಮ್ಮ ಅವರ ಮಕ್ಕಳಾದ ಆನಂದ, ಉಮೇಶ್, ಅವರ ಮನೆಯವರಾದ ನಾರಾಯಣ ಅವರು ಸಹ ಜೊತೆಯಲ್ಲಿ ಇದ್ದರು. ಚುನಾವಣೆ ಅಧಿಕಾರಿಗಳಾದ ಶಿವರಾಂ, ಗ್ರಾಮ ಪಂಚಾಯತಿ ಪಿಡಿಒ ಮಹೇಶ್, ಬಾಳೂರು ಆರಕ್ಷಕ ಠಾಣ ಸಿಬ್ಬಂದಿಗಳಾದ ನಂದೀಶ್ ಹಾಗೂ ರಾಘವೇಂದ್ರ ಜನ್ನಾಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು