3:27 AM Friday11 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ಜೋಕಟ್ಟೆ : ರೈಲಿನಡಿಗೆ ಬೀಳುತ್ತಿದ್ದ ಆಡನ್ನು ರಕ್ಷಿಸಲು ಹೋದ ಯುವಕನ ಕಾಲಿನ ಮೇಲೆಯೆ ಹರಿಯಿತು ರೈಲು

28/08/2021, 21:40

ಮಂಗಳೂರು(ReporterKarnataka.com)

ರೈಲು ಹಳಿ ದಾಟುತ್ತಿರುವಾಗ ದೂರದಲ್ಲಿ ರೈಲು ಬರುತ್ತಿರುವುದು ಗಮನಿಸಿ ಅಲ್ಲೆ ಓಡಾಡುತ್ತಿದ್ದ ಆಡು ಮರಿಯನ್ನು ರಕ್ಷಿಸಲು ಹೋದ ಯವಕನ ಎರಡೂ ಕಾಲುಗಳು ತುಂಡಾಗಿ ಬಿದ್ದ ಘಟನೆ ಶನಿವಾರ ಜೋಕಟ್ಟೆ ಸಮೀಪ ನಡೆದಿದೆ.

ಚೇತನ್ ಕುಮಾರ್ ಎನ್ನುವ 21ರ ಹರೆಯದ ಯುವಕ ತನ್ನ ಪ್ರಾಣಿ ಪ್ರೇಮದಿಂದ ತನ್ನ ಪ್ರಾಣವನ್ನೇ ಪಣಕಿಟ್ಟಿದ್ದಾನೆ. ಸಣ್ಣ ಪ್ರಾಯದಲ್ಲೇ ಬಸ್ ಕ್ಲೀನರ್ ಕೆಲಸ ಮಾಡುತ್ತಲೇ ಕಷ್ಟದಲ್ಲಿ ಕಾಲೇಜು ಓದಿದ್ದ ಯುವಕ ಒಂದೂವರೆ ವರ್ಷದಿಂದ ಬಸ್ ಕಂಡಕ್ಟರನಾಗಿ ಸೇರಿಕೊಂಡಿದ್ದ. ಮನೆಯ ಐದು ಮಕ್ಕಳಲ್ಲಿ ಹಿರಿಯವನಾಗಿದ್ದ ಈತನ ದುಡಿಮೆಯಿಂದಲೇ ಕುಟುಂಬ ಸಾಗುತ್ತಿತ್ತು.

ಚೇತನ್ ಕುಮಾರ್ ಮನೆ ಇರುವುದು ಮಂಗಳೂರು ಹೊರವಲಯದ ಬೈಕಂಪಾಡಿ ಬಳಿಯ ಜೋಕಟ್ಟೆ ಸಮೀಪದ ಅಂಗರಗುಂಡಿ ಎಂಬಲ್ಲಿ. ಹೆದ್ದಾರಿಯಿಂದ ಮನೆಗೆ ತೆರಳಬೇಕಿದ್ದರೆ ಮೂರು ಕಿಮೀ ನಡೆಯಬೇಕಿತ್ತು. ದಿನವೂ ಬೆಳಗ್ಗೆ ಮೂರು ಕಿಮೀ ನಡೆದುಕೊಂಡೇ ಜೋಕಟ್ಟೆಯ ರೈಲು ಹಳಿಯನ್ನು ದಾಟಿಕೊಂಡು ಕೆಲಸಕ್ಕೆ ಬರುತ್ತಿದ್ದ. ಇಂದು ವೀಕೆಂಡ್ ಲಾಕ್ಡೌನ್ ಇದ್ದ ಕಾರಣ ಬಸ್ಸಿಗೆ ಜನ ಇರಲ್ಲ ಎಂದುಕೊಂಡು ತಡವಾಗಿ ಬಸ್ ಬಿಡಲು ನಿರ್ಧರಿಸಿದ್ದರು.

ಹಾಗಾಗಿ ಬೆಳಗ್ಗೆ 8.30ರ ಸುಮಾರಿಗೆ ನಡೆದುಕೊಂಡು ಬಂದು ಜೋಕಟ್ಟೆಯ ರೈಲು ಹಳಿ ದಾಟುತ್ತಿದ್ದಾಗ, ಅಲ್ಲೊಂದು ಆಡು ಮರಿ ಹಳಿಯ ಉದ್ದಕ್ಕೂ ಓಡುವುದು ಕಾಣಿಸಿತ್ತು. ಅದೇ ಸಂದರ್ಭದಲ್ಲಿ ದೂರದಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ ಚೇತನ್ ಕುಮಾರ್, ಆಡು ಮರಿಯ ರಕ್ಷಣೆಗೆ ಧಾವಿಸಿದ್ದಾನೆ. ಓಡುತ್ತಲೇ ಆಡಿನ ಮರಿಯನ್ನು ಹೊರಕ್ಕೆ ದೂಡಿದ ಚೇತನ್ ಕುಮಾರ್ ಹಳಿಯಿಂದ ಹೊರಬೀಳುವಷ್ಟರಲ್ಲಿ ರೈಲು ಧಾವಿಸಿ ಬಂದಿದೆ. ಚೇತನ್ ಕಾಲಿನ ಮೇಲಿಂದಲೇ ರೈಲು ಹರಿದು ಹೋಗಿದ್ದು, ಎರಡೂ ಕಾಲುಗಳು ತುಂಡಾಗಿವೆ.

ಕೂಡಲೇ ಆತನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಪರಿಶೀಲಿಸಿ ಎರಡೂ ಕಾಲು ತುಂಡಾಗಿರುವುದನ್ನು ತಿಳಿಸಿದ್ದಾರೆ. ಯುವಕನ ದುಡಿಮೆಯಿಂದಲೇ ಬದುಕುತ್ತಿದ್ದ ಬಡ ಕುಟುಂಬಕ್ಕೆ ಈ ಘಟನೆಯಿಂದ ದಿಕ್ಕೇ ತೋಚದಂತಾಗಿದೆ.

ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರು ಶಾಲೆ, ಕಾಲೇಜು ಕಲಿಯುತ್ತಿದ್ದಾರೆ. ತಂದೆ, ತಾಯಿ ಮತ್ತು ಇತರ ಮಕ್ಕಳಿಗೆಲ್ಲ ಅಣ್ಣನ ದುಡಿಮೆಯೇ ಆಧಾರವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು