7:27 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಮಂಗಳೂರು: ಕುಸಿತದ ಭೀತಿಯಲ್ಲಿ ಕೊಡಕ್ಕಲ್‌ ಗುಡ್ಡ ಪ್ರದೇಶ; ಆತಂಕದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು

11/09/2024, 17:49

ಮಂಗಳೂರು(reporterkarnataka.com): ಪ್ರಸಕ್ತ ಮುಂಗಾರಿನಲ್ಲಿ ಸಾಕಷ್ಟು ಭೂಕುಸಿತ ಸಂಭವಿಸಿದ್ದು, ಸಾಕಷ್ಟು ಸಾವು- ನೋವು ಘಟಿಸಿವೆ. ಇದೀಗ ಅಂತದ್ದೊಂದು ಅಪಾಯದ ಭೀತಿ ಮಂಗಳೂರಿನಲ್ಲೇ ಎದುರಾಗಿದೆ. ನಗರದ ಹೊರವಲಯದ ಪಡೀಲ್ ಸಮೀಪದ ಕೊಡಕ್ಕಲ್‌ ಎಂಬಲ್ಲಿ ಗುಡ್ಡಕುಸಿತದ ಭೀತಿ ಎದುರಾಗಿ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.


ಮಂಗಳೂರಿನ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಮೀಪದ ಕೊಡಕ್ಕಲ್‌ ಪ್ರದೇಶ ಇದೆ. ಇಲ್ಲಿ ಗುಡ್ಡ ಕುಸಿಯುವ ಆತಂಕದಲ್ಲಿದ್ದು, ಗುಡ್ಡದ ಮೇಲಿನ ನಿವಾಸಿಗಳು, ಕೆಳಗಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಪಡೀಲ್‌ನ ಕೊಡಕ್ಕಲ್‌ ಎಂಬ ಪ್ರದೇಶದ ಇದಾಗಿದ್ದು, ಗುಡ್ಡದ ಮೇಲೆ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇನ್ನು ಗುಡ್ಡದ ಬುಡದಲ್ಲೇ ಅಂಗಡಿ, ಮಳಿಗೆಗಳು ಹಾಗೂ ಮನೆಗಳಿದ್ದು, ಇದೂ ಕೂಡಾ ಅಪಾಯಕ್ಕೆ ಸಿಲುಕಿವೆ. ಈಗಾಗಲೇ ಗುಡ್ಡ ಸ್ವಲ್ಪ ಕುಸಿತ ಉಂಟಾಗಿದ್ದು, ಗುಡ್ಡದ ಅಂಚಿನಲ್ಲಿರೋ ಟಾಯ್ಲೆಟ್‌ ಒಂದು ಆಗಲೋ ಈಗಲೋ ಅನ್ನೋ ಸ್ಥಿತಿಯಲ್ಲಿ ಇದೆ. ಒಮ್ಮೆ ಇಲ್ಲಿ ಗುಡ್ಡ ಕುಸಿತ ಉಂಟಾದ್ರೆ ಭಾರಿ ಪ್ರಮಾಣದ ಅನಾಹುತ ಉಂಟಾಗುವ ಸಾದ್ಯತೆ ಇದೆ. ಮಳೆ ಇನ್ನೂ ದೂರವಾಗಿಲ್ಲದ ಕಾರಣ ಗುಡ್ಡ ಕುಸಿತದ ಆತಂಕ ಕೂಡಾ ದೂರವಾಗಿಲ್ಲ. ಮಳೆಗಾಲವನ್ನು ಆತಂಕದಲ್ಲೇ ಕಳೆದಿದ್ದ ಇಲ್ಲಿನ ನಿವಾಸಿಗಳು ಇದೀಗ ಮಳೆಯ ಭಯ ಕಾಡಲು ಆರಂಭವಾಗಿದೆ. ಇಲ್ಲಿ ಬಹಳ ವರ್ಷಗಳ ಹಿಂದೆ ಅಗೆತ ಮಾಡಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾಡಳಿತವ ಎಚ್ಚೆತ್ತು ಯಾವುದೇ ಮುಂಜಾಗ್ರತ ಕ್ರಮವಿಲ್ಲದೆ ಅಕ್ರಮವಾಗಿ ಮಣ್ಣುತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು