6:42 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಕಾರ್ಕಳ ಯುವತಿಯ ಅತ್ಯಾಚಾರ ಹಾಗೂ ಡ್ರಗ್ಸ್ ಪ್ರಕರಣ: ಬಂಧಿತ ಆರೋಪಿಗಳ ಸಂಖ್ಯೆ 5ಕ್ಕೇರಿಕೆ

30/08/2024, 10:31

ಕಾರ್ಕಳ(reporterkarnataka.com): ಯುವತಿಯ ಅತ್ಯಾಚಾರ ಹಾಗೂ ಮಾದಕ ವಸ್ತುಗಳ ಪ್ರಕರಣ ಸಂಬಂಧಿಸಿದಂತೆ ಕಾರ್ಕಳ ಪೋಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 5ಕ್ಕೇರಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗೋಚಿಂದ ಪಲ್ಲಿಯ ಗಿರಿರಾಜು ಜಗಾದಾಭಿ(31) ಹಾಗೂ ಕಾಪು ಶಂಕರಪುರದ ಜಾನ್ ನೊರೊನ್ಹಾ (30 ) ಮತ್ತಿಬ್ಬರು ಬಂಧಿತ ಆರೋಪಿಗಳು.
ಅತ್ಯಾಚಾರ ಆರೋಪಿ  ಬಂಗ್ಲೆಗುಡ್ಡೆಯ ಅಲ್ತಾಫ್ (34) ಮದ್ಯ ಪೂರೈಕೆ ಮಾಡಿದ  ರಂಗನ ಪಲ್ಕೆಯ ಸಾವಿವೋ ರಿಚರ್ಡ್‌ ಕ್ವಾಡ್ರಸ್(35), ಡ್ರಗ್ ಪೂರೈಕೆ ಮಾಡಿದ ಕಾರ್ಕಳ ಕೋರ್ಟ್ ರಸ್ತೆಯ  ಆರೋಪಿ ಅಭಯ್ (23) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಇದೀಗ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, 4 ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮದ್ಯ ಪೂರೈಕೆ ಮಾಡಿದ ರಂಗನ ಪಲ್ಕೆಯ ಸಾವಿವೋ ರಿಚರ್ಡ್‌ ಕ್ವಾಡ್ರಸ್ ಅವನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಕಾರ್ಕಳದ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಸಂತ್ರಸ್ತ ಯುವತಿಯನ್ನು ಕಾರ್ಕಳ ಪೊಲೀಸರು ಹಾಜರು ಪಡಿಸಿದ್ದರು. ಸಿಆರ್ ಪಿಸಿ 164 ನಿಯಮದಂತೆ ಸಂತ್ರಸ್ತೆ ಹೇಳಿಕೆ ದಾಖಲಾಗಿದೆ.  ತನಿಖಾಧಿಕಾರಿ ಮಂಜಪ್ಪ ನೇತೃತ್ವದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಳೆದ ಶುಕ್ರವಾರ ಕಾರ್ಕಳ ಕುಕ್ಕುಂದೂರು ಗ್ರಾಮದ ಯುವತಿ ಯ ಮೇಲೆ  ಮಾದಕ ವಸ್ತು ನೀಡಿ ಅತ್ಯಾಚಾರ   ಗೈಯ್ಯಲಾಗಿತ್ತು.
ಕಾರ್ಕಳ ನಗರ ಠಾಣೆಯಲ್ಲಿ ಅ ಕ್ರ146/2024 ಕಲಂ  8(C), 22(b) NDPS ಹಾಗೂ  ಕಲಂ 111, 3(5)
ಬಿ.ಎನ್‌.ಎಸ್‌-2023ರಂತೆ ಪ್ರಕರಣ ದಾಖಲಾಗಿತ್ತು.
*ಆಂಧ್ರದ ಲಿಂಕ್ :* ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಾರ್ಕಳ ಕೋರ್ಟ್ ರಸ್ತೆಯ ಅಭಯ್ ಗೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗೋಚಿಂದ ಪಲ್ಲಿಯ ಗಿರಿರಾಜು ಜಗಾದಾಭಿ(31) ಕಾಪು ಶಂಕರಪುರದ ಜಾನ್ ನೊರೊನ್ಹಾ  (30 )  ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು