8:09 PM Saturday15 - November 2025
ಬ್ರೇಕಿಂಗ್ ನ್ಯೂಸ್
ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ…

ಇತ್ತೀಚಿನ ಸುದ್ದಿ

ಕಾರ್ಕಳ ಯುವತಿಯ ಅತ್ಯಾಚಾರ ಹಾಗೂ ಡ್ರಗ್ಸ್ ಪ್ರಕರಣ: ಬಂಧಿತ ಆರೋಪಿಗಳ ಸಂಖ್ಯೆ 5ಕ್ಕೇರಿಕೆ

30/08/2024, 10:31

ಕಾರ್ಕಳ(reporterkarnataka.com): ಯುವತಿಯ ಅತ್ಯಾಚಾರ ಹಾಗೂ ಮಾದಕ ವಸ್ತುಗಳ ಪ್ರಕರಣ ಸಂಬಂಧಿಸಿದಂತೆ ಕಾರ್ಕಳ ಪೋಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 5ಕ್ಕೇರಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗೋಚಿಂದ ಪಲ್ಲಿಯ ಗಿರಿರಾಜು ಜಗಾದಾಭಿ(31) ಹಾಗೂ ಕಾಪು ಶಂಕರಪುರದ ಜಾನ್ ನೊರೊನ್ಹಾ (30 ) ಮತ್ತಿಬ್ಬರು ಬಂಧಿತ ಆರೋಪಿಗಳು.
ಅತ್ಯಾಚಾರ ಆರೋಪಿ  ಬಂಗ್ಲೆಗುಡ್ಡೆಯ ಅಲ್ತಾಫ್ (34) ಮದ್ಯ ಪೂರೈಕೆ ಮಾಡಿದ  ರಂಗನ ಪಲ್ಕೆಯ ಸಾವಿವೋ ರಿಚರ್ಡ್‌ ಕ್ವಾಡ್ರಸ್(35), ಡ್ರಗ್ ಪೂರೈಕೆ ಮಾಡಿದ ಕಾರ್ಕಳ ಕೋರ್ಟ್ ರಸ್ತೆಯ  ಆರೋಪಿ ಅಭಯ್ (23) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದರು. ಇದೀಗ ಒಟ್ಟು 5 ಜನರನ್ನು ಬಂಧಿಸಲಾಗಿದ್ದು, 4 ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಮದ್ಯ ಪೂರೈಕೆ ಮಾಡಿದ ರಂಗನ ಪಲ್ಕೆಯ ಸಾವಿವೋ ರಿಚರ್ಡ್‌ ಕ್ವಾಡ್ರಸ್ ಅವನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಕಾರ್ಕಳದ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಸಂತ್ರಸ್ತ ಯುವತಿಯನ್ನು ಕಾರ್ಕಳ ಪೊಲೀಸರು ಹಾಜರು ಪಡಿಸಿದ್ದರು. ಸಿಆರ್ ಪಿಸಿ 164 ನಿಯಮದಂತೆ ಸಂತ್ರಸ್ತೆ ಹೇಳಿಕೆ ದಾಖಲಾಗಿದೆ.  ತನಿಖಾಧಿಕಾರಿ ಮಂಜಪ್ಪ ನೇತೃತ್ವದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಳೆದ ಶುಕ್ರವಾರ ಕಾರ್ಕಳ ಕುಕ್ಕುಂದೂರು ಗ್ರಾಮದ ಯುವತಿ ಯ ಮೇಲೆ  ಮಾದಕ ವಸ್ತು ನೀಡಿ ಅತ್ಯಾಚಾರ   ಗೈಯ್ಯಲಾಗಿತ್ತು.
ಕಾರ್ಕಳ ನಗರ ಠಾಣೆಯಲ್ಲಿ ಅ ಕ್ರ146/2024 ಕಲಂ  8(C), 22(b) NDPS ಹಾಗೂ  ಕಲಂ 111, 3(5)
ಬಿ.ಎನ್‌.ಎಸ್‌-2023ರಂತೆ ಪ್ರಕರಣ ದಾಖಲಾಗಿತ್ತು.
*ಆಂಧ್ರದ ಲಿಂಕ್ :* ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಾರ್ಕಳ ಕೋರ್ಟ್ ರಸ್ತೆಯ ಅಭಯ್ ಗೆ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗೋಚಿಂದ ಪಲ್ಲಿಯ ಗಿರಿರಾಜು ಜಗಾದಾಭಿ(31) ಕಾಪು ಶಂಕರಪುರದ ಜಾನ್ ನೊರೊನ್ಹಾ  (30 )  ಪೂರೈಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು