2:48 AM Wednesday25 - March 2026
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಜುಲೈ 20 ಮತ್ತು 21: ಬೆಳಗಾವಿಯ ಎಂ ಚಂದರಗಿ ಹಿರೇಮಠದಲ್ಲಿ ಗುರುವಂದನ ಮತ್ತು ಗುರುಭಕ್ತರ ಸಮಾವೇಶ

11/07/2024, 21:33

ವಿರೂಪಾಕ್ಷ ಸ್ವಾಮಿ ಸಾಲಿಮಠ ಬೆಳಗಾವಿ

info.reporterkarnataka@gmail.com

ಗುರುಪೂರ್ಣಿಮೆ ನಿಮಿತ್ಯ ವಾಗಿ ಗುರುಭಕ್ತರ ಸಮಾವೇಶ ಹಿರೇಮಠ ಶ್ರೀ ಗಡದೀಶ್ವರ ಲೋಕ ಕಲ್ಯಾಣ ಫೌಂಡೇಶನ್ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರು- ಶಿಷ್ಯರ ಬಾಂಧವ್ಯದ ಗುರುವಂದನ ಮತ್ತು ಗುರುಭಕ್ತರ ಸಮಾವೇಶ
ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ಶ್ರೀ ಗಡದೀಶ್ವರ ಸಂಸ್ಥಾನ ಹಿರೇಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 20 ಹಾಗೂ 21ರಂದು ಜರುಗಲಿದೆ.
ತಪೋ ರತ್ನ ಶ್ರೀ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕಟಕೋಳ ಎಂ. ಚಂದರಗಿ ಅವರ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ರೇಣುಕಾ ಶ್ರೀ ಪ್ರಶಸ್ತಿ ಶ್ರೀ ಗುರು ಗಡದೀಶ್ವರ ಸದ್ಭಾವನ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಜರುಗುವುದು.
20ರಂದು ಬೆಳಗ್ಗೆ 7:00ಗೆ ಭಕ್ತರಿಗೆ ಲಿಂಗ ದೀಕ್ಷೆ ಮತ್ತು ಜಂಗಮ ವಟಗಳಿಗೆ ಅಯ್ಯಾಚಾರ ಸಂಜೆ 5:00ಗೆ ಧರ್ಮ ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಯುವುದು.
ಶಿವಾಚಾರ್ಯ‌‌ ರತ್ನ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು( ಸಂಸ್ಥಾನ ಹಿರೇಮಠ ಕಟಕೋಳ ಎಂ ಚಂದರಗಿ) ಅವರು ದಿವ್ಯ ಸಾನಿಧ್ಯವನ್ನು ವಹಿಸುವರು. ಶ್ರೀ ಷ.ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (ಸಂಸ್ಥಾನ ಹಿರೇಮಠ ಹುಕ್ಕೇರಿ ಬೆಳಗಾವಿ) ಇವರಗಳು ಸಾನಿಧ್ಯ ವಹಿಸುವರು.
ಎಂ ಚಂದ್ರಗಿ ಕಟಕೋಳ ಪೂಜ್ಯರ ಸನ್ನಿಧಾನದಲ್ಲಿ 20 ಹಾಗೂ 21ರಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಚಂದರಗಿಯ ಚಂದಿರ ಪ್ರಶಸ್ತಿ ಹಾಗೂ ಶ್ರೀ ಗುರು ಗಡದೇಶ್ವರ ಸದ್ಭಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಮಸ್ಕಿ ತಾಲೂಕು ಅಧ್ಯಕ್ಷರಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ದಂಪತಿಗೆ ಹಾಗೂ ಮಹಾಂತೇಶ್ ಪಟ್ಟಣಶೆಟ್ಟಿ ದಿದ್ದಿಗಿ ದಂಪತಿಗೆ ಶ್ರೀಗಳಿಂದ ಶ್ರೀರಕ್ಷೆ ಹಾಗೂ ಚಂದರಗಿ ಚೆಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರುತ್ತದೆ.
ಶ್ರೀ ರೇಣುಕಾ ಗಡದೇಶ್ವರ ದೇವರು ಕಟಕೋಳ ಎಂ .ಚಂದರಗಿ‌ (ಧರ್ಮದರ್ಶಿಗಳು) ಶ್ರೀ ಚಂದ್ರಶೇಖರ ಸ್ವಾಮಿಗಳು (ಹಿರೇಮಠ ಲೋಕಾಪುರ )ಇವರ ಸಮ್ಮುಖದಲ್ಲಿ 21 ರಂದು ಪ್ರಾತಕಾಲ 6:00 ಗಂಟೆಗೆ ಶ್ರೀ ಗಡದೇಶ್ವರ ಕತೃಗದ್ದಿಗೆಗೆ ಹಾಗೂ 108 ಶಿವಲಿಂಗಗಳಿಗೆ ಮಹಾ ರುದ್ರಾಭಿಷೇಕ. ಸಹಾಸ್ರ ಬಿಲ್ವಾರ್ಚನೆ ಪೂಜ್ಯ ಗುರುಗಳ ಹಾಗೂ ಭಕ್ತರ ಸಾಮೂಹಿಕ ಶಿವಪೂಜೆ ಸಹಸ್ರ ಬಿಲ್ವಾರ್ಚನೆ ಹಾಗೂ ಶ್ರೀಗಳ ಸಮ್ಮುಖದಲ್ಲಿ ಜರುಗುವುದು ಹಾಗೂ ಶ್ರೀಗಳ 147ನೇಯ ತುಲಾಭಾರ ಸೇವೆಯನ್ನು ಪುಷ್ಪ ಹನುಮಂತಪ್ಪ ಬಿಜ್ಜರಿಗೆ ಸಾಕಿನ್ ರಾಮದುರ್ಗ ಮತ್ತು ‌ಶ್ರೀಗಳ 148ನೇ ತುಲಾ ಭಾರ ಸೇವೆಯನ್ನು ಗಂಗಯ್ಯ ಚನ್ನವೀರಯ್ಯ ಹಿರೇಮಠ ಯಶೋಧಾ ಗಂಗಯ್ಯ ಹಿರೇಮಠ ಸಾಕಿನ ಹುಬ್ಬಳ್ಳಿ ಇವರು ನೆರವೇರಿಸುವವರು.

ಇತ್ತೀಚಿನ ಸುದ್ದಿ

ಜಾಹೀರಾತು