9:35 AM Wednesday5 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ…

ಇತ್ತೀಚಿನ ಸುದ್ದಿ

ಲವ್ ಕಹಾನಿ: ಮಹಾರಾಷ್ಟ್ರದಲ್ಲಿ ತಂದೆಯಿಂದಲೇ  ದೂಧ್ ಗಂಗಾ ನದಿಗೆ ತಳ್ಳಲ್ಪಟ್ಟ ಟೀನೇಜ್ ಪುತ್ರಿ: ಶವ ಕರ್ನಾಟಕದಲ್ಲಿ ಪತ್ತೆ !

19/08/2021, 15:39

ಕೊಲ್ಹಾಪುರ(reporterkarnataka.com): ನೆರೆಯ ಮಹಾರಾಷ್ಟ್ರದಲ್ಲಿ ಜೀವಂತವಾಗಿ ನದಿಗೆ ತಳ್ಳಲ್ಪಟ್ಟ ಆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳ ಮೃತದೇಹ ತೇಲಿಕೊಂಡು ಕರ್ನಾಟಕಕ್ಕೆ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶವ ಪತ್ತೆಯಾಗಿದೆ. ಆಕೆಯನ್ನು ನದಿಗೆ ತಳ್ಳಿದ್ದು ಬೇರೆ ಯಾರೂ ಅಲ್ಲ, ಬದಲಿಗೆ ಜನ್ಮಕೊಟ್ಟ ತಂದೆಯೇ ಈ ಕೃತ್ಯ ಎಸಗಿದ್ದ.

ಅದೊಂದು ಟೀನೇಜ್ ಲವ್ ಕಹಾನಿಗೆ ಸಂಬಂಧಿಸಿದ ಮರ್ಯಾದಾ ಹತ್ಯೆಯಾಗಿದೆ.

ಮಹಾರಾಷ್ಟ್ರ ಕೊಲ್ಹಾಪುರದ ಶಿರೋಲ್ ತಾಲೂಕಿನ ದತ್ತವಾಡ ನಿವಾಸಿಯಾದ ದಶರಥ್ ಕಾಟ್ಕರ್ ಎಂಬಾತ ತನ್ನ ಪುತ್ರಿ 17ರ ಹರೆಯದ ಸಾಕ್ಷಿ ಕಾಣೆಯಾಗಿದ್ದಾಳೆ ಎಂದು ಆಗಸ್ಟ್ 14ರಂದು ಕುರುಂದ್ವಾಡ್ ಪೊಲೀಸರಿಗೆ ದೂರು ನೀಡಿದ್ದ.

ಪೊಲೀಸರು ತನಿಖೆ ನಡೆಸಿದಾಗ ಯಾರೂ ಆಕೆಯನ್ನು ಅಪಹರಣ ಮಾಡಿದ ಬಗ್ಗೆ ಸುಳಿವು ದೊರಕಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸರು ತಂದೆಯನ್ನೇ ವಿಚಾರಣೆಗೆ ಗುರಿಪಡಿಸಿದರು. ಆ ವೇಳೆಗೆ ತಂದೆಯೇ ಮಗಳನ್ನು ನದಿಗೆ ತಳ್ಳಿ ಕೊಂದಿರುವ ವಿಚಾರ ಬೆಳಕಿಗೆ ಬಂತು.

ಮಗಳ ಪ್ರೇಮ ಪ್ರಕರಣದಿಂದ ಸಿಟ್ಟುಗೊಂಡು ತಾನೇ ಆಕೆಯನ್ನು ದೂಧಗಂಗಾ ನದಿಯ ದನ್ವಾಡ್ ಸೇತುವೆಯಿಂದ ತಳ್ಳಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಾಕ್ಷಿಯ ಶವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು